ಪ್ರಾರ್ಥನಾ ಮಂದಿರದಲ್ಲಿ ಬರಹ ವಿವಾದ
Team Udayavani, May 6, 2018, 6:00 AM IST
ನವದೆಹಲಿ: ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿರುವ ಪ್ರಾರ್ಥನಾ ಮಂದಿರದ ಬಾಗಿಲಿನಲ್ಲಿ “ಮಂದಿರ ಇಲ್ಲೇ ನಿರ್ಮಿಸುತ್ತೇವೆ’ ಎಂದು ಯಾರೋ ಕಿಡಿಗೇಡಿಗಳು ಬರೆದಿರುವುದು ಬೆಳಕಿಗೆ ಬಂದಿದೆ. ಜತೆಗೆ, ಶಿಲುಬೆಯನ್ನೂ ವಿರೂಪಗೊಳಿಸಲಾಗಿದೆ. ಈ ಘಟನೆಯನ್ನು ಖಂಡಿಸಿರುವ ಎನ್ಎಸ್ಯುಐ ಮತ್ತು ಎಬಿವಿಪಿ ಸಂಘಟನೆಗಳು, ಈ ಕುರಿತು ತನಿಖೆಗೆ ಆಗ್ರಹಿಸಿವೆ.