ಯುವಜನರಿಗೆ ಉದ್ಯೋಗ ನೀಡುವುದು ನನ್ನ ಮೊದಲ ಆದ್ಯತೆ: ಬಾಬು ಆಜಗಾಂವಕರ್
Team Udayavani, Dec 6, 2021, 4:47 PM IST
ಪಣಜಿ: ಗೋವಾದ 40 ಮತಕ್ಷೇತ್ರಗಳ ಪೈಕಿ ಕೇವಲ ನಾನು ನನ್ನ ಮತಕ್ಷೇತ್ರದಲ್ಲಿ ಮಾತ್ರ ಯುವಕರಿಗೆ ನೌಕರಿ ನೀಡಬಲ್ಲೆ, ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಬಾಬು ಆಜಗಾಂವಕರ್ ನುಡಿದರು.
ಪತ್ರಾದೇವಿಯಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಠಿಕೋನದಿಂದ ನಾನು ಪೆಡ್ನೆಯಲ್ಲಿ ಯಾವ ಯಾವ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೋ ಆ ಎಲ್ಲ ಕಾಮಗಾರಿಗಳಲ್ಲಿ ಪೆಡ್ನೆ ಜನರ ಯೋಗದಾನವಿದೆ. ಅವರೆಲ್ಲರ ತ್ಯಾಗದ ಪ್ರತೀಕವಾಗಿ ಅಭಿವೃದ್ಧಿ ಸಾಧ್ಯವಾಗಿದೆ. ಈ ಯೋಜನೆಗಳ ಫಲವಾದ ಈ ಮತಕ್ಷೇತ್ರದ ಯುವಕರಿಗೆ ನೌಕರಿಯ ಲಾಭ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ನೀವೆಲ್ಲರೂ ಸಂಘಟಿತರಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಹುಮತ ನೀಡಿ ಆಯ್ಕೆ ಮಾಡಿ ಎಂದು ಬಾಬು ಆಜಗಾಂವಕರ್ ಮನವಿ ಮಾಡಿದರು.
ನಾನು ನಿಮ್ಮ ಸೇವಕನಾಗಿದ್ದೇನೆ, ನಿಮ್ಮಿಂದಾಗಿ ನಾನು ಶಾಸಕ, ಮಂತ್ರಿ ಉಪಮುಖ್ಯಮಂತ್ರಿಯಾಗಿದ್ದೇನೆ. ನೀವು ಹೇಳಿದ ಅಭಿವೃದ್ಧಿ ಕಾಮಗಾರಿಯನ್ನು ನಾನು ಪೂರ್ಣಗೊಳಿಸಿದ್ದೇನೆ. ನಾನು ಯಾವ ಕೆಲಸ ಮಾಡಿಲ್ಲ ಅಥವಾ ಯಾವ ಕೆಲಸದಲ್ಲಿ ಕೊರತೆಯಾಗಿದೆ ಎಂಬುದನ್ನು ನೀವು ತಿಳಿಸಬೇಕು ಎಂದು ಬಾಬು ಆಜಗಾಂವಕರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಉತ್ತಮವೀರ್, ಮಾಜಿ ಅಧ್ಯಕ್ಷ ಸೂರ್ಯಕಾಂತ ತೋರಸ್ಕರ್, ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ