ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ
ರಾಮಮಾಧವ್ರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತು
Team Udayavani, Oct 23, 2021, 10:15 PM IST
ನವದೆಹಲಿ: “ಇತ್ತ ಎಡಪಂಥ ಅಲ್ಲದ, ಅತ್ತ ಬಲಪಂಥವೂ ಅಲ್ಲದ ತಟಸ್ಥ ಭಾವವೇ ಹಿಂದುತ್ವ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಹ-ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಆರ್ಎಸ್ಎಸ್ ನಾಯಕ ರಾಮಮಾಧವ್ ಅವರು ಬರೆದಿರುವ “ದ ಹಿಂದುತ್ವ ಪ್ಯಾರಾಡಿಗಮ್: ಇಂಟೆಗ್ರಲ್ ಹ್ಯುಮಾನಿಸಂ ಆ್ಯಂಡ್ ದ ಕ್ವೆಸ್ಟ್ ಫಾರ್ ಎ ನಾನ್-ವೆಸ್ಟರ್ನ್ ವರ್ಲ್ಡ್ ವ್ಯೂ ” ಎಂಬ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಹಿಂದೆ ಪ್ರಪಂಚ ಎಡಪಂಥೀಯ ಸಿದ್ಧಾಂತಗಳತ್ತ ಚಲಿಸಿತ್ತು. ಈಗ ಅದು ಬಲಪಂಥೀಯ ಸಿದ್ಧಾಂತಗಳತ್ತ ನಿಧಾನವಾಗಿ ಸಾಗುತ್ತಿದೆ. ಸದ್ಯಕ್ಕೆ ವಿಶ್ವವು, ಎಡ ಅಥವ ಬಲ ಸಿದ್ಧಾಂತಗಳ ನಡುವಿನ ಶೂನ್ಯ ಬಿಂದುವಿನಲ್ಲಿ ನಿಂತಿದೆ. ಹಿಂದುತ್ವವೂ ಪ್ರತಿಪಾದಿಸುವುದು ಇದನ್ನೇ” ಎಂದು ತಿಳಿಸಿದರು.
ಇದನ್ನೂ ಓದಿ:ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್
“ನಾನು ಆರ್ಎಸ್ಎಸ್ನಿಂದ ಬಂದವನು. ನಮ್ಮಲ್ಲಿ ನಡೆಯುವ ಶಿಬಿರಗಳಲ್ಲಿ ನಾವೆಂದೂ ನಮ್ಮ ಸಿದ್ಧಾಂತವನ್ನು ಬ ಲಪಂಥೀಯ ಎಂದು ಬಣ್ಣಿಸಿಲ್ಲ. ನಮ್ಮಲ್ಲಿ ಎಡಪಂಥೀಯ ವಿಚಾರಗಳಿವೆ. ಜೊತೆಗೆ, ಬಲಪಂಥೀಯ ವಿಚಾರಧಾರೆಗಳೂ ಇವೆ” ಎಂದ ಅವರು, ಈ ವಿಚಾರಧಾರೆಗಳೆಲ್ಲವೂ ಮನುಷ್ಯನ ಅನುಭವಗಳಿಂದ ರೂಪುಗೊಂಡಿರುವಂಥವು. ಹಾಗಾಗಿ, ಈ ಎರಡೂ ವಿಚಾರಧಾರೆಗಳಲ್ಲಿ ಮತ್ತಷ್ಟು ವೈಚಾರಿಕತೆ ಸೇರಿಸಲು ಬೇಕಾದಷ್ಟು ಸ್ಥಳಾವಕಾಶವಿದೆ” ಎಂದು ಅವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್