ಮೇಘಾಲಯದ ಪ್ರಮುಖ ಬಂಡುಕೋರ ಸೋಹನ್ ಹತ್ಯೆ
Team Udayavani, Feb 25, 2018, 7:00 AM IST
ಶಿಲ್ಲಾಂಗ್: ಮೇಘಾಲಯದ ಪ್ರಮುಖ ಬಂಡುಕೋರ, ನಿಷೇಧಿತ ಸಂಘಟನೆ ಗಾರೊ ನ್ಯಾಶನಲ್ ಲಿಬರೇಷನ್ ಆರ್ಮಿ (ಜಿಎನ್ಎಲ್ಎ)ಯ ಸ್ವಘೋಷಿತ ಮುಖ್ಯಸ್ಥ ಸೋಹನ್ ಡಿ. ಶಿರಾನನ್ನು ಭದ್ರತಾ ಪಡೆಗಳು ಶನಿವಾರ ಎನ್ಕೌಂಟರ್ ನಡೆಸಿ ಹತ್ಯೆಗೈದಿವೆ. ಈಸ್ಟ್ ಗಾರೊ ಹಿಲ್ಸ್ ಜಿಲ್ಲೆಯ ಡೊಬು ಪ್ರದೇಶದಲ್ಲಿ ಎನ್ಕೌಂಟರ್ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎನ್ಸಿಪಿ ಅಭ್ಯರ್ಥಿ ಜೋನಾಥನ್. ಎನ್. ಸಂಗ್ಮಾರನ್ನು ಸುಧಾರಿತ ಸ್ಫೋಟಕ ದಾಳಿಯಿಂದ ಹತ್ಯೆ ಮಾಡಿದ ಪ್ರಕರಣದ ಬಳಿಕ ಸೋಹನ್ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹತ್ಯೆ ಹಿನ್ನೆಲೆಯಲ್ಲಿ ಬಂಡುಕೋರ ನಿಗ್ರಹ ಕಾರ್ಯಾಚರಣೆಯನ್ನೂ ತೀವ್ರಗೊಳಿಸಲಾಗಿತ್ತು. ಡೊಬು ಪ್ರದೇಶದ ಅಚಕ್ಪೆಕ್ ಗ್ರಾಮದಲ್ಲಿ ಕೆಲ ಜಿಎನ್ಎಲ್ಎ ಬಂಡುಕೋರರು ಇದ್ದಾರೆ ಎಂಬ ಮಾಹಿತಿ ಮೇರೆಗೆ ಬಂಡುಕೋರ ನಿಗ್ರಹ ಪಡೆ ತತ್ಕ್ಷಣ ದಾಳಿ ನಡೆಸಿ ಎನ್ಕೌಂಟರ್ ನಡೆಸಿತು. ಈ ವೇಳೆ ಸೋಹನ್ ಮೃತನಾದನು ಎಂದು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದ ಹಿರಿಯ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ