ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ
Team Udayavani, Jul 7, 2020, 6:49 AM IST
ಜಮ್ಮು- ಕಾಶ್ಮೀರ ಆಡಳಿತವು ನಿವಾಸ ದೃಢೀಕರಣ ಪತ್ರ (ಡೊಮಿಸೈಲ್ ಸರ್ಟಿಫಿಕೇಟ್) ವಿತರಣೆ ಪ್ರಕ್ರಿಯೆ ಆರಂಭಿಸಿರುವುದು, ಎಷ್ಟೋ ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಪರದೇಸಿಗಳಂತೆ ಬದುಕುತ್ತಿದ್ದ ಗೂರ್ಖಾ ಸಮುದಾಯಕ್ಕೆ ವರವಾಗಿ ಪರಿಣಮಿಸಿದೆ.
ಅದರಲ್ಲೂ ಈ ಸಮುದಾಯದ ನಿವೃತ್ತ ಸೇನಾಧಿಕಾರಿಗಳು, ಯೋಧರು ಹಾಗೂ ವಾಲ್ಮೀಕಿ ಸಮುದಾಯದವರು ಈಗ ನಿವಾಸ ದೃಢೀಕರಣ ಪತ್ರ ಪಡೆಯುತ್ತಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವಂತ ಭೂಮಿ ಖರೀದಿಸಲು ಮತ್ತು ಉದ್ಯೋಗಕ್ಕೆ ಅರ್ಜಿ ಹಾಕಲು ಅವಕಾಶ ಸಿಕ್ಕಿದೆ.
ಜಮ್ಮುವಿನಲ್ಲೇ 6600 ಮಂದಿಗೆ ದೃಢೀಕರಣ ಪತ್ರ ದೊರೆತಿದ್ದು, ಈ ಪೈಕಿ ಬಹುತೇಕ ಮಂದಿ ಗೂರ್ಖಾ ಸಮುದಾಯದವರು.
ಯಾರಿಗೆಲ್ಲ ಸಿಗುತ್ತೆ ಸರ್ಟಿಫಿಕೇಟ್?
– ಖಾಯಂ ವಾಸ ಪ್ರಮಾಣಪತ್ರ ಹೊಂದಿದ್ದೂ ಜಮ್ಮು-ಕಾಶ್ಮೀರದ ಹೊರಗೆ ವಾಸಿಸುತ್ತಿರುವವರು, ಅವರ ಮಕ್ಕಳು
– ಜಮ್ಮು-ಕಾಶ್ಮೀರದ ಹೊರಗೆ ವಾಸಿಸುತ್ತಿರುವ ಕಾಶ್ಮೀರಿ ವಲಸಿಗರು
– ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸಿಸಿದವರು, ಅವರ ಮಕ್ಕಳು
– ರಾಜ್ಯದಲ್ಲಿ 10 ವರ್ಷ ಸೇವೆ ಸಲ್ಲಿಸಿರುವ ಕೇಂದ್ರ ಸರಕಾರ, ಪಿಎಸ್ಯು, ಕೇಂದ್ರ ಸ್ವಾಯತ್ತ ಸಂಸ್ಥೆಗಳು, ಪಿಎಸ್ಬಿ, ಕೇಂದ್ರೀಯ ವಿವಿಗಳು, ಕೇಂದ್ರ ಸಂಶೋಧನಾ ಸಂಸ್ಥೆಗಳ ಅಧಿಕಾರಿಗಳು
– 7 ವರ್ಷ ಜಮ್ಮು-ಕಾಶ್ಮೀರದಲ್ಲಿ ವಿದ್ಯಾಭ್ಯಾಸ ಮಾಡಿದವರು, 10 – 12ನೇ ತರಗತಿ ಪರೀಕ್ಷೆಯನ್ನು ಕೇಂದ್ರಾಡಳಿತ ಪ್ರದೇಶದಲ್ಲೇ ಬರೆದವರು
ಗೂರ್ಖಾ ಸಮುದಾಯ
– 19ನೇ ಶತಮಾನದ ಮಧ್ಯಭಾಗದಲ್ಲಿ ತಮ್ಮ ಜತೆ ಕೈಜೋಡಿಸಿ ಹೋರಾಡಲು ಡೋಗ್ರಾ ಆಡಳಿತದ ಆಹ್ವಾನದ ಮೇರೆಗೆ ನೇಪಾಲದಿಂದ ಜಮ್ಮು- ಕಾಶ್ಮೀರಕ್ಕೆ ಬಂದವರು
– ಪ್ರಸ್ತುತ 1 ಲಕ್ಷ ಗೂರ್ಖಾಗಳು ಕಣಿವೆ ರಾಜ್ಯದಲ್ಲಿದ್ದಾರೆ. ಸ್ಥಳೀ ಯ – ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಮಾಡುವ ಅವಕಾಶ ಅವರಿಗಿದೆ. ಆದರೆ ಸರಕಾರ ಒದಗಿಸಿರುವ ಭೂಮಿಯ ಹೊರತಾಗಿ ಬೇರೆಡೆ ಜಮೀನು ಖರೀದಿಸುವ ಅವಕಾಶ ಇವರಿಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ