ಗಡಿ ನುಸುಳಲು ಉಗ್ರರ ಯತ್ನ : ಓರ್ವನ ಹೊಡೆದುರುಳಿಸಿದ ಬಿಎಸ್ಎಫ್
Team Udayavani, May 28, 2017, 10:42 AM IST
ಶ್ರೀನಗರ: ಕೆ.ಜಿ.ಸೆಕ್ಟರ್ ಬಳಿ ಭಾನುವಾರ ಬೆಳಗ್ಗೆ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರನೊಬ್ಬನನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಸ್ಥಳದಲ್ಲಿ ಇನ್ನೂ ಕೆಲ ಉಗ್ರರು ಗಡಿ ನುಸುಳಲು ಹೊಂಚು ಹಾಕುತ್ತಿದ್ದು ಸೇನೆ ಭಾರೀ ಕಾರ್ಯಾಚರಣೆ ಮುಂದುವರಿಸಿದೆ.
ಶನಿವಾರ ಒಂದೇ ದಿನ ನಡೆಸಿದ ಪ್ರತ್ಯೇಕ ಕಾರ್ಯಾ ಚರಣೆಧಿ ಗಳಲ್ಲಿ ಹತ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಬಲಗೈ ಬಂಟ ಸಬ್ಜಾರ್ ಅಹ್ಮದ್ ಭಟ್ ಸೇರಿದಂತೆ 8 ಉಗ್ರರನ್ನು ಸೇನೆ ಮುಗಿಸಿತ್ತು.