ಮದ್ರಸಾಗಳಲ್ಲಿ ಹಾಲು ಮನಸುಗಳಿಗೆ ವಿಷ
Team Udayavani, Jan 11, 2018, 8:49 AM IST
ಕಲ್ಲಿಕೋಟೆ: “”ನಮ್ಮ ಸುತ್ತಲೂ ಹಿಂದೂಗಳಿದ್ದಾರೆ. ನಾವು ಖಲೀಫ ಸುಲ್ತಾನನ ಧ್ಯೇಯಗಳ ಬಗ್ಗೆ ಮಾತಾಡಿದರೆ ನಮ್ಮನ್ನು ಹಿಂದೂಗಳು ಐಸಿಸ್ ಉಗ್ರರೆಂದು ಕರೆದು ಬಿಡುತ್ತಾರೆ. ಹಾಗಾಗಿ, ಜಿಹಾದಿ ವಿಚಾರಗಳನ್ನು ನಾವು ಮಕ್ಕಳಲ್ಲಿ ಇಷ್ಟಿಷ್ಟೇ ತುಂಬುತ್ತೇವೆ. ಅದು ನಿಧಾನವಾಗಿ ಅವರನ್ನು ಆವರಿಸಿ ಮುಂದೆ ಅವರ ಹೃದಯ ಭಾರತ, ಹಿಂದೂಗಳ ವಿರುದ್ಧ ವಿಷದ ಮಡುವಾಗುವಂತೆ ಮಾಡುವುದೇ ನಮ್ಮ ಗುರಿ”
ಇದು ಪಾಕಿಸ್ಥಾನದ ಯಾವುದೋ ಉಗ್ರ ಹೇಳಿದ ಮಾತಲ್ಲ. ಇಲ್ಲೇ, ಕೇರಳದ ಕಲ್ಲಿಕೋಟೆಯ ಪುಲ್ಲರಮ್ಮಲ್ನ ಕರುಣಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಮದ್ರಸಾದ ಸಹ ಕಾರ್ಯದರ್ಶಿ ಮೊಹಮ್ಮದ್ ಬಶೀರ್, “ವಹಾಬಿಸಂ’ (ಸೌದಿ ಮಾದರಿಯ ಧರ್ಮಾಂಧತೆಯ ಪರಿಕಲ್ಪನೆ) ಬೋಧನೆ ಬಗ್ಗೆ ಹೇಳಿಕೊಂಡಿರುವುದು. ಈತನಷ್ಟೇ ಅಲ್ಲ, “ಇಂಡಿಯಾ ಟುಡೇ’ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಕೇರಳದ ಕೆಲವು ಮದ್ರಸಾಗಳ ಇಂಥ ನಿಜವಾದ ಹಕೀಕತ್ತು ಬಯಲಾಗಿದೆ.
ಕರಂತೂರಿನಲ್ಲಿ ಮದ್ರಸಾ ನಡೆಸುತ್ತಿರುವ ಅಬ್ದುಲ್ ಮಲಿಕ್, ಇಸ್ಲಾಂ ಬೋಧಕ ಜಾಕಿರ್ ನಾಯ್ಕ ಮಾಡಿರುವ ಹಿಂದೂ ವಿರೋಧಿ ಭಾಷಣಗಳ ವೀಡಿಯೋಗಳನ್ನು ತನ್ನ ಮದ್ರಸಾದಲ್ಲಿ ಪ್ರದರ್ಶಿಸುವುದಾಗಿ ಕುಟುಕು ಕಾರ್ಯಾಚರಣೆ ನಡೆಸಿದವರಿಗೆ ತಿಳಿಸಿದ್ದಾನೆ.
ಹಣಕಾಸು ನೆರವು: ಈ ಮದರಸಾಗಳ ನಿರ್ವಹಣೆಗೆ ಸೌದಿ ಅರೇಬಿಯಾದಿಂದ ವರ್ಷಕ್ಕೆ 50 ಲಕ್ಷ ರೂ.ವರೆಗೆ ಹವಾಲಾ ಹಣ ಬರುತ್ತದೆಂದು ಇವರೇ ಒಪ್ಪಿಕೊಂಡಿದ್ದಾರೆ. ಕೊಯಿಲಾಂಡಿಯ ಮರ್ಕಝುಲ್ ಜಮೀನಾ ಮದ್ರಸಾದ ಅಬ್ದುಲ್ ಗಫರ್ ಹೇಳುವ ಪ್ರಕಾರ, ಆತನ ಮದ್ರಸಾಕ್ಕೆ ಸೌದಿಯಿಂದ ಮಾತ್ರವಲ್ಲ ದುಬೈ, ಕತಾರ್, ಒಮನ್ಗಳಿಂದಲೂ ಹಣ ಬರುತ್ತದೆ.
ಮಂಗಳವಾರವಷ್ಟೇ, ಭಾರತದ ಕೆಲವು ಮದ್ರಸಾಗಳು ಉಗ್ರರನ್ನು ಸೃಷ್ಟಿ ಮಾಡುತ್ತಿವೆ ಎಂದು ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸಿಂ ರಿಜ್ವಿ ನೀಡಿದ್ದ ಹೇಳಿಕೆಯನ್ನು ಈ ಕಾರ್ಯಾಚರಣೆಯಿಂದ ಬಹಿರಂಗವಾದ ಅಂಶಗಳು ಪುಷ್ಟೀಕರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ