ಹಾರೆ ಹಿಡಿದು ಚರಂಡಿ ಸ್ವಚ್ಛಗೊಳಿಸಿದ ಮಧ್ಯಪ್ರದೇಶದ ಸಚಿವ : ವಿಡಿಯೋ ವೈರಲ್
Team Udayavani, Nov 4, 2019, 10:10 PM IST
ಮಧ್ಯಪ್ರದೇಶ : ಕೊಚ್ಚೆಯಿಂದ ಮುಚ್ಚಿ ಹೋಗಿದ್ದ ಚರಂಡಿಯನ್ನು ಸ್ವಚ್ಛಗೊಳಿಸುವ ಮೂಲಕ ಮಧ್ಯಪ್ರದೇಶದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗ್ವಾಲಿಯರ್ ನ ಬಿರ್ಲಾ ನಗರದಲ್ಲಿನ ಚರಂಡಿಯಲ್ಲಿ ಹೂಳುತುಂಬಿ ಕೊಳಚೆ ನೀರು ನಿಂತು ದುರ್ನಾತ ಬೀರುತಿತ್ತು ಇದರ ವಿಚಾರವಾಗಿ ಇಲ್ಲಿನ ನಿವಾಸಿಗಳು ಮುನ್ಸಿಪಲ್ ಕಾರ್ಪೋರೇಶನ್ ಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ, ಇದನ್ನು ಅರಿತ ಸಚಿವರು ಸ್ವತಃ ಹಾರೆ ಹಿಡಿದು ಕೊಚ್ಚೆ ನೀರಿನಿಂದ ತುಂಬಿದ ಚರಂಡಿಗೆ ಇಳಿದು ಮಣ್ಣನು ತೆಗೆದು ಚರಂಡಿ ನೀರು ಹೋಗಲು ವ್ಯವಸ್ಥೆ ಮಾಡಿದರು.
ಸಚಿವರು ಚರಂಡಿ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಚಾರ ತಿಳಿಯುತ್ತಿದ್ದಂತೆ ಗ್ವಾಲಿಯರ್ ಮುನ್ಸಿಪಲ್ ಕಾರ್ಪೋರೇಶನ್ ಆಯುಕ್ತ ಸಂದೀಪ್ ಮಕಿನ್ ಬಿರ್ಲಾ ನಗರಕ್ಕೆ ಭೇಟಿ ನೀಡಿ ಅವ್ಯವಸ್ಥೆಗೆ ಕಾರಣರಾದ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದರು.
ಈ ವಿಚಾರವಾಗಿ ಮಾತನಾಡಿದ ತೋಮರ್, ಬಿರ್ಲಾನಗರದ ನ್ಯೂ ಕಾಲೋನಿಯ ಮಹಿಳೆಯರು ಚರಂಡಿಯ ಅವ್ಯವಸ್ಥೆಯ ಬಗ್ಗೆ ನನಗೆ ದೂರು ನೀಡಿದ್ದರು. ನಿಗಮದ ನೌಕರರು ಶುಚಿಗೊಳಿಸುವ ಕೆಲಸಕ್ಕೆ ಬಾರದಿದ್ದ ಕಾರಣ ನಾನೆ ಚರಂಡಿಗೆ ಇಳಿದೆ. ಈ ಅವ್ಯವಸ್ಥೆಯಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಜನರ ಸಂಕಟವನ್ನು ನಾನು ನೋಡಲಾರೆ ಎಂದು ಪ್ರತಿಕ್ರೀಯಿಸಿದರು.
ಏನೇ ಆಗಲಿ ಸಚಿವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
50 वर्षो से भाजपा शासित ग्वालियर नगर निगम में फैली अव्यवस्थाओ और भ्रष्टाचारी के चलते आज ग्वालियर सड़क,सीवर, सफाई और प्रदूषण जैसी समस्या से त्रस्त है
मेने प्रण लिया है- हमारा ग्वालियर स्वच्छ और सुगम नही हो जाता तब तक मैं आप सबके सहयोग के साथ अपना अभियान जारी रखूंगा@JM_Scindia pic.twitter.com/QbZNVi7pWq
— Pradhuman Singh Tomar (@PradhumanINC) November 3, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ