ಎಡವಟ್ಟಿನ ಬಳಿಕ ಟ್ವೀಟ್ ಡಿಲೀಟ್ ಮಾಡಿದ ಆರೋಗ್ಯ ಸಚಿವಾಲಯ
Team Udayavani, Apr 24, 2018, 11:13 AM IST
ಹೊಸದಿಲ್ಲಿ: ಮೊಟ್ಟೆ, ಮಾಂಸ, ಕುರುಕಲು ತಿಂಡಿಗಳು, ಬರ್ಗರ್, ಕೋಲಾ, ಆಲ್ಕೋಹಾಲ್ ಒಳ್ಳೆಯದಲ್ಲ. ಅವಕಾಡೋ, ಜೋಳ, ಕಿವಿ, ಅವರೆಕಾಳು, ಕುಂಬಳಕಾಯಿ ಒಳ್ಳೆಯದು. ನಿಮ್ಮ ಆಯ್ಕೆ ಯಾವುದು? ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್ನಲ್ಲಿ ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಸಚಿವಾಲಯ ಅದನ್ನು ಡಿಲೀಟ್ ಮಾಡಿದೆ.
ಸಸ್ಯಾಹಾರ ಸೇವಿಸುವ ತೆಳ್ಳಗಿನ ಮಹಿಳೆ, ಮಾಂಸಾಹಾರ ಸೇವಿಸಿ ದಪ್ಪಗಾಗಿರುವ ಮಹಿಳೆಯ ಚಿತ್ರವನ್ನು ತೋರಿಸಿ ಸಸ್ಯಾಹಾರವೇ ಒಳ್ಳೆಯದು ಎಂಬ ಸಂದೇಶ ಬರುವಂತೆ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಟ್ವೀಟಿಗರೊಬ್ಬರು, ‘ಸಸ್ಯಾಹಾರವೋ, ಮಾಂಸಾಹಾರವೋ ಅವರವರ ಹುಟ್ಟಿನಿಂದ ಬಂದಿರುತ್ತದೆ. ಆಹಾರದ ಉತ್ಪಾದನೆ ಮತ್ತು ಇತರ ವಿಚಾರಗಳ ಬಗ್ಗೆ ಆರೋಗ್ಯ ಇಲಾಖೆ ಗಮನಹರಿಸಲಿ’ ಎಂದು ಹೇಳಿದ್ದರೆ, ಮತ್ತೂಬ್ಬರು ಸರಕಾರದ ಟ್ವೀಟ್ ‘ದಪ್ಪಗಾಗುವ’ ಎಂಬ ವಿಚಾರಕ್ಕೇ ಅವಮಾನದ ಸಂಗತಿ ಎಂದರೆ, ಇನ್ನೊಬ್ಬರು ‘ಮೊಟ್ಟೆ ಯಾವಾಗ ಅನಾರೋಗ್ಯಕರ ಆಹಾರವಾಯಿತು’ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಅದಕ್ಕೆ ಬಳಸಲಾಗಿರುವ ಫೋಟೋ ಕೂಡ ಬೆಲಾರಸ್ ಮೂಲದ ವೆಬ್ಸೈಟ್ನದ್ದಾಗಿದೆ ಎಂಬ ಅಂಶವೂ ಬಯಲಾಗಿದೆ. ಟ್ವೀಟಿಗರಿಂದ ತರಾಟೆಗೆ ಒಳಗಾದ ಬಳಿಕ ಸಚಿವಾಲಯ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ