ಅಲೀಗಢ ಬಾಲಕಿ ಹತ್ಯೆ: ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ : ಶಿವಸೇನೆ ಆಗ್ರಹ
Team Udayavani, Jun 10, 2019, 11:55 AM IST
ಹೊಸದಿಲ್ಲಿ : ಉತ್ತರ ಪ್ರದೇಶದ ಆಲೀಗಢದಲ್ಲಿ ಈಚೆಗೆ ಎರಡೂವರೆ ವರ್ಷ ಪ್ರಾಯದ ಬಾಲಕಿಯನ್ನು ಬರ್ಬರವಾಗಿ ಕೊಂದ ಪಾತಕಿಗಳಿಗೆ ಅತ್ಯುಗ್ರ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿರುವ ಶಿವಸೇನೆ, ಉತ್ತರ ಪ್ರದೇಶದ ಬಿಜೆಪಿ ಸರಕಾರ ಈ ವಿಷಯದಲ್ಲಿ “ಬೇಟಿ ಬಚಾವೋ’ ಘೋಷಣೆಗೆ ನೈಜ ಬದ್ಧತೆಯನ್ನು ತೋರಬೇಕು ಎಂದು ಶಿವ ಸೇನೆ ಆಗ್ರಹಿಸಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಘಟನೆ ಕುರಿತ ತನ್ನ ಖಚಿತ ನಿಲುವನ್ನು ವ್ಯಕ್ತಪಡಿಸಿದೆಯಲ್ಲಿದೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದೆ.
ಎರಡೂವರೆ ವರ್ಷ ಪ್ರಾಯದ ಬಾಲಕಿ ಆಲೀಗಢದ ಟಪ್ಪಲ್ ಪಟ್ಟಣದಿಂದ ಕಳೆದ ಮೇ 31ರಂದು ನಾಪತ್ತೆಯಾಗಿದ್ದು ಜೂನ್ 2ರಂದು ಕಸದ ರಾಶಿಯಲ್ಲಿ ಛಿದ್ರಗೊಂಡ ಮೃತ ದೇಹ ಪತ್ತೆಯಾಗಿತ್ತು.
10,000 ರೂ. ಸಾಲ ಮರು ಪಾವತಿಸಲು ವಿಫಲವಾದ ಕಾರಣಕ್ಕೆ ಝಾಹಿದ್ ಮತ್ತು ಅಸ್ಲಾಂ ಎಂಬಿಬ್ಬರು ತಮ್ಮ ಮಗುವನ್ನು ಅಪಹರಿಸಿ ಅಮಾನುಷವಾಗಿ ಕೊಂದಿದ್ದಾರೆ ಎಂದು ಬಾಲಕಿಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. ಝಾಹಿದ್, ಇಸ್ಲಾಂ ಮಾತ್ರವಲ್ಲದೆ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಕೊಲೆಗೆ ಸಂಬಂಧಿಸಿ ಬಂಧಿಸಿದ್ದಾರೆ. ಈ ಅಮಾನುಷ ಕೊಲೆ ಪ್ರಕರಣ ದೇಶಾದ್ಯಂತ ಜನರಲ್ಲಿ ತೀವ್ರ ತಲ್ಲಣ, ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್