“ಮಿಷನ್‌ ಶಕ್ತಿ’ ಅನಂತರ ಭಾರತಕ್ಕೆ ಶತ್ರು ರೇಡಾರ್‌ ಪತ್ತೆದಾರಿಕೆ ಬಲ


Team Udayavani, Mar 31, 2019, 6:00 AM IST

EMISAT

ಹೊಸದಿಲ್ಲಿ: ಇತ್ತೀಚೆಗಷ್ಟೇ ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು (ಮಿಷನ್‌ ಶಕ್ತಿ) ಅಳವಡಿಸಿಕೊಂಡು ಮಿಂಚಿದ ಭಾರತ, ಇದೀಗ ಶತ್ರು ರಾಷ್ಟ್ರಗಳ ರೇಡಾರ್‌ಗಳಿರುವ ತಾಣಗಳನ್ನು ಪತ್ತೆ ಹಚ್ಚುವ ಕೆಲಸಕ್ಕಾಗಿ ವಿಶೇಷ ಉಪಗ್ರಹ “ಎಮಿಸ್ಯಾಟ್‌’ ಅನ್ನು ಉಡಾವಣೆ ಮಾಡಲು ಮುಂದಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವತಿಯಿಂದ ಎ. 1ರಂದು ಹಾರಿಬಿಡಲಾಗುವ ಈ ಉಪಗ್ರಹ ಉಡಾವಣೆ ಪ್ರಕ್ರಿಯೆ ಹಿಂದಿನ ಎಲ್ಲಾ ಉಡಾವ ಣೆಗಳಿಗಿಂತ ವಿಭಿನ್ನವಾಗಿರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ತಿಳಿಸಿದ್ದಾರೆ.

ಉಡಾವಣೆ ಹೇಗೆ ವಿಭಿನ್ನ?: ರೇಡಾರ್‌ ಮಾಪಕ ಉಪಗ್ರಹದ ಜತೆಗೆ ಇನ್ನೂ 28 ಉಪಗ್ರಹಗಳು ಅಂತರಿಕ್ಷಕ್ಕೆ ಚಿಮ್ಮಲಿದ್ದು, ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಇಸ್ರೋ ಅವಕಾಶ ಕಲ್ಪಿಸಿದೆ. ಇನ್ನೊಂದೆಡೆ, ಈ ಬಾರಿ ಅಂತರಿಕ್ಷಕ್ಕೆ ಉಡಾವಣೆಗೊಳ್ಳುವ ಉಪಗ್ರಹಗಳನ್ನು ಒಂದೇ ಪ್ರಯತ್ನದಲ್ಲಿ ಮೂರು ವಿಭಿನ್ನ ಕಕ್ಷೆಗಳಲ್ಲಿ ಕೂರಿಸಲಾಗುತ್ತದೆ. ಇದು ಈ ಉಡಾವಣೆಯ 2ನೇ ವಿಶೇಷ.

ವಿವಿಧ ಕಕ್ಷೆಗಳಿಗೆ ಉಪಗ್ರಹಗಳನ್ನು ಕೂರಿಸಲೆಂದೇ ಹೊಸ ಪ್ರಯೋಗವೊಂದಕ್ಕೆ ಇಸ್ರೋ ಮುಂದಾಗಿದೆ. ಉಪಗ್ರಹಗಳನ್ನು ಕೊಂಡೊಯ್ಯುವ ಪಿಎಸ್‌ಎಲ್‌ವಿ ರಾಕೆಟ್‌ ಜತೆಗೆ, ಪಿಎಸ್‌-4 ಎಂಬ ಇಂಜಿನ್‌ನನ್ನು ಅಳವಡಿಸಲಾಗುತ್ತಿದೆ.

ಪಿಎಸ್‌ಎಲ್‌ವಿ ರಾಕೆಟ್‌ ಭೂಮಿಯ ಮೇಲ್ಮೆ„ನಿಂದ 763 ಕಿ.ಮೀ. ದೂರಕ್ಕೆ ಸಾಗಿದ ನಂತರ, ಅಲ್ಲಿ ಕೆಲವು ಪ್ರಮುಖ ಉಪಗ್ರಹಗಳನ್ನು ಬಿಡುಗಡೆ ಮಾಡುತ್ತದೆ. ಇದು ಈ ಯೋಜನೆಯ ಮೊದಲ ಕಕ್ಷೆಯಾಗಿದ್ದು, ಇಲ್ಲಿಂದ ರಾಕೆಟ್‌ ಹಿಮ್ಮುಖವಾಗಿ ಚಲಿಸುತ್ತದೆ. ಆಗ ನೆರವಿಗೆ ಬರುವುದೇ ಪಿಎಸ್‌-4 ಇಂಜಿನ್‌. ಇದು ಚಾಲನೆಗೊಳ್ಳುವುದರಿಂದ ರಾಕೆಟ್‌ ಜತೆಗೆ ಹಿಮ್ಮುಖವಾಗಿ ಚಲಿಸಿ, ಮೊದಲು ತಾನಿದ್ದ 763 ಕಿ.ಮೀ. ಎತ್ತರ ದಿಂದ 504 ಕಿ.ಮೀ.ವರೆಗಿನ ಎತ್ತರಕ್ಕೆ ವಾಪಸ್ಸಾಗುತ್ತದೆ. ಅಲ್ಲಿ ಕೆಲವು ಉಪಗ್ರಹ ಬಿಡುಗಡೆಯಾಗುತ್ತವೆ. ಅನಂತರ, ಪುನಃ ಚಾಲನೆಗೊಳ್ಳುವ ಪಿಎಸ್‌-4, ರಾಕೆಟನ್ನು 485 ಕಿ.ಮೀ.ಗಳಿಗೆ ತಂದು ನಿಲ್ಲಿಸುತ್ತದೆ. ಅಲ್ಲಿ ಮತ್ತಷ್ಟು ಉಪಗ್ರಹಗಳು ಬಿಡುಗಡೆ ಯಾಗುತ್ತವೆ. ಹೀಗೆ, ಮೂರು ಕಕ್ಷೆಗಳಿಗೆ ಕಳಿಸುವ ಉಪಗ್ರಹಗಳನ್ನು 3 ರಾಕೆಟ್‌ಗಳಲ್ಲಿ ಕಳಿಸುವ ಬದಲು, ಒಂದೇ ರಾಕೆಟ್‌ನಲ್ಲಿ ಕಳಿಸಿ ಅವುಗಳನ್ನು 3 ಕಕ್ಷೆಗಳಲ್ಲಿ ಬಿತ್ತುವ ಪ್ರಯೋಗ ಕೈಗೊಳ್ಳಲಾಗಿದೆ.

“ಎಮಿಸ್ಯಾಟ್‌’ ಬಗ್ಗೆ ಒಂದಿಷ್ಟು
ಶತ್ರು ದೇಶಗಳ ರೇಡಾರ್‌ ಪತ್ತೆಗಾಗಿ ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ “ಎಮಿಸ್ಯಾಟ್‌’ ಈ ಬಾರಿಯ ಉಡಾವಣಾ ಉಪಗ್ರಹಗಳ ಸಮೂಹದಲ್ಲಿರುವ ವಿಶೇಷ ಉಪಗ್ರಹ. 436 ಕೆ.ಜಿ. ತೂಕವಿರುವ ಇದು, ವಿದ್ಯುದಯಸ್ಕಾಂತ ತರಂಗಗಳ ಆಧಾರದಲ್ಲಿ ಕೆಲಸ ಮಾಡುತ್ತದೆ ಹಾಗೂ ಶತ್ರು ದೇಶಗಳಲ್ಲಿರುವ ರೇಡಾರ್‌ಗಳನ್ನು ಎಷ್ಟೇ ದೂರದಲ್ಲಿದ್ದರೂ ಪತ್ತೆ ಮಾಡುತ್ತದೆ. ಈವರೆಗೆ, ಶತ್ರುಗಳ ರೇಡಾರ್‌ಗಳ ಪತ್ತೆಗಾಗಿ ಭಾರತೀಯ ಸೇನೆ ವಿಶೇಷ ವಿಮಾನಗಳನ್ನು ಬಳಸಲಾಗುತ್ತಿತ್ತು. ಇನ್ನು ಮುಂದೆ ಎಮಿಸ್ಯಾಟ್‌ನ ಕಣ್ಗಾವಲಿನ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತವೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.