ಮೋದಿ ಮುಖವಾಡ ಧರಿಸಿಕೊಂಡೇ ಲಡ್ಡು ತಯಾರಿ!
Team Udayavani, May 22, 2019, 6:12 AM IST
ಇವರೆಲ್ಲರೂ ಮೋದಿ ಮುಖವಾಡವನ್ನು ಧರಿಸಿರುವುದೇಕೆ ಎಂದು ಯೋಚಿಸುತ್ತಿದ್ದೀರಾ? ವ್ಯಾಪಾರ ಕುದುರಿದ ಖುಷಿಗೆ!
ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಗೋಪಾಲ್ ಶೆಟ್ಟಿ ಅವರು ಗೆಲುವಿನ ಬಗ್ಗೆ ಎಷ್ಟೊಂದು ವಿಶ್ವಾಸವಿರಿಸಿಕೊಂಡಿದ್ದಾರೆ ಎಂದರೆ, ಸೋಮ ವಾರವೇ 1,500 ರಿಂದ 2000 ಕೆಜಿ ಸಿಹಿತಿಂಡಿಗಳಿಗೆ ಆರ್ಡರ್ ಕೊಟ್ಟಿದ್ದಾರಂತೆ. ಇಂಥ ದೊಡ್ಡ ಮಟ್ಟದ ಆರ್ಡರ್ ಸಿಗುವಾಗ ಖುಷಿ ಆಗದೇ ಇರುತ್ತದೆಯೇ? ಬೊರಿವಿಲಿಯ ಬೇಕರಿಯೊಂದಕ್ಕೆ ಈ ಆರ್ಡರ್ ಸಿಕ್ಕಿದ್ದು, 2 ಸಾವಿರ ಕೆಜಿ ಲಡ್ಡುಗಳನ್ನು ಇಲ್ಲಿನ ಕಾರ್ಮಿಕರು ಪ್ರಧಾನಿ ಮೋದಿಯವರ ಮುಖವಾಡ ಧರಿಸಿಕೊಂಡೇ ರೆಡಿ ಮಾಡುತ್ತಿದ್ದಾರೆ.
ಅಂದ ಹಾಗೆ, ಗೋಪಾಲ್ ಶೆಟ್ಟಿ ವಿರುದ್ಧ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವುದು ಬೇರಾರೂ ಅಲ್ಲ, ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್.