ಮೋದಿ ಎಂದರೆ ಭಾರತ: ಅಳಿಯಿತು ಇಂದಿರಾ ಎಂದರೆ ಇಂಡಿಯಾ


Team Udayavani, May 24, 2019, 10:09 AM IST

MODI

ನಿಜವಾಗಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್‌ ಪಾಲಿಗೆ ಸುನಾಮಿಯಾಗಿಯೇ ಪರಿವರ್ತಿತವಾಗಿದ್ದಾರೆ. 2014 ರಲ್ಲಿ ಮೋದಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿತವಾದಾಗ ಆ ಕ್ಷಣಕ್ಕೆ ಸಣ್ಣದೊಂದು ಅಚ್ಚರಿ ಎನಿಸಿತ್ತು. ಆದರೆ ಗುಜರಾತಿನ ಮುಖ್ಯಮಂತ್ರಿಯಾಗಿ ನಿರ್ವಹಿಸಿದ ಹೊಣೆಗಾರಿಕೆ ಹೊಸ ಭರವಸೆಗಳನ್ನು ಹುಟ್ಟಿ ಹಾಕಿದ್ದು ನಿಜ. ಬಳಿಕ ಮೋದಿಯ ಹಿಂದಿನ ಸ್ಟ್ರಾಟೆೆಜಿಸ್ಟ್‌ಗಳು ಹಾಗೂ ಬಿಜೆಪಿ ಮೋದಿಯನ್ನು ಒಂದು ಅಲೆಯಾಗಿ ಪರಿವರ್ತಿಸಲು ಶ್ರಮಿಸಿದರು. 2014 ರ ಫ‌ಲಿತಾಂಶ ಬಂದಾಗ ಮೋದಿ ಅಲೆ ಕಾಂಗ್ರೆಸ್‌ನ್ನು ತತ್ತರಗೊಳಿಸಿತ್ತು. ಮೋದಿ ಒಬ್ಬ ಸಮರ್ಥ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದರು. ಆದರೆ ಈ ಬಾರಿ 2019 ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲ ; ಸುನಾಮಿಯಾಗಿಯೇ ಮಾರ್ಪಟ್ಟಿದ್ದಾರೆ.

ಚುನಾವಣಾ ರಾಜಕೀಯದಲ್ಲಿನ ಅವರ ಸ್ಥಿರತೆ ಮತ್ತು ಪರಿಶ್ರಮ ಮತದಾರರಲ್ಲಿ ನಂಬಿಕೆಯ ನೆಲೆಯನ್ನು ಸೃಷ್ಟಿಸಿತ್ತು. ಅದನ್ನೇ ಬಂಡವಾಳವನ್ನಾಗಿಸಿಕೊಂಡು ಈ ಚುನಾವಣೆಯಲ್ಲಿ ಮೋದಿಯವರು ಹೂಡಿಕೆ ಮಾಡಿದ್ದರು. ಹಾಗಾಗಿಯೇ ಇಡೀ ದೇಶವೇ, ಚುನಾವಣೆಯೇ ತನ್ನ ಸುತ್ತಲೇ ತಿರುಗುವಂತೆ ಮಾಡಿಕೊಳ್ಳುವಲ್ಲಿ ಮೋದಿ ಯಶಸ್ವಿಯಾದರು. ಚುನಾವಣೆಯ ಕಾವು ತಾರಕಕ್ಕೇರಿದಾಗ, ಮೋದಿ ಪರ ಮತ್ತು ವಿರುದ್ಧ ಎಂಬ ವಾದವಷ್ಟೇ ಉಳಿದಿತ್ತು. ಒಂದೆಡೆ ವಿಪಕ್ಷಗಳು ಮೋದಿಯನ್ನು ತಡೆಯಲು ಒಂದಾದರು. ಆ ಮೂಲಕ ಮೋದಿ ಸುನಾಮಿ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಆ ಕಥೆಯೇ ಅಚ್ಚರಿ
ಈ ಅಲೆ ಸುನಾಮಿ ರೂಪ ಪಡೆದಿರುವ ಹಿನ್ನೆಲೆಯಲ್ಲಿ ಅತ್ಯಂತ ಆಸಕ್ತಿಕರವಾದ ಕಥೆಯಿದೆ. ಅದೂ ಬರೀ ಕಥೆಯಲ್ಲ ; ಸ್ಟ್ರಾಟಜಿ. ಮೋದಿ ಬ್ರ್ಯಾಂಡ್‌ ಹುಟ್ಟಿಕೊಂಡಿದ್ದರ ಕಥೆಯದು.  ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಬ್ಬ ನಾಯಕನನ್ನು ಒಂದು ಪ್ರಬಲ ಬ್ರ್ಯಾಂಡ್‌ ಆಗಿ ಪರಿವರ್ತಿಸುವುದು ತೀರಾ ಹೊಸತಲ್ಲ. ತುರ್ತು ಪರಿಸ್ಥಿತಿಯ ಬಳಿಕ ಇಂದಿರಾ ಗಾಂಧಿ ಸಹ ಇಂಥದ್ದೇ ಒಂದು ಪ್ರಬಲ ಬ್ರ್ಯಾಂಡ್‌ ಆಗಿ ರೂಪುಗೊಂಡಿದ್ದರು. ಇಂದಿರಾ ಎಂದರೆ ಇಂಡಿಯಾ ಎಂಬಂತೆ ಬಿಂಬಿಸಲಾಗಿತ್ತು. ತರುವಾಯ ಅಂಥದೊಂದು ಪ್ರಬಲ ಅಲೆ ರಾಜಕೀಯ ಇತಿಹಾಸದಲ್ಲಿ ಎದ್ದದ್ದು ಬಿಜೆಪಿಯಿಂದಲೇ. ಎಲ್‌.ಕೆ. ಆಡ್ವಾಣಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿಯವರು ಹೀಗೇ ಸಮರ್ಥ ಬ್ರ್ಯಾಂಡ್‌ ಆಗಿ ರೂಪುಗೊಂಡಿದ್ದರು. ಅದರಲ್ಲೂ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಬೇಕೆಂಬುದು ದೇಶದ ಬಹುತೇಕರ ಹರಕೆ ಎಂಬಂತಾಗಿತ್ತು. ಅದನ್ನು ಕಂಡಿದ್ದೇವೆ ಸ್ಪಷ್ಟವಾಗಿ. ಅಬ್‌ ಕಿ ಬಾರಿ ಅಟಲ್‌ ಬಿಹಾರಿ ಘೋಷಣೆ ಹೊರಟಿದ್ದೇ ಈ ಹಿನ್ನೆಲೆಯಲ್ಲಿ 1996 ರಲ್ಲಿ. ಮೋದಿಯವರ ವಿಷಯದಲ್ಲಿ ಹಾಗಲ್ಲ. ಒಬ್ಬ ಪ್ರಾದೇಶಿಕ ನಾಯಕ, ರಾಜ್ಯದ ಮುಖ್ಯಮಂತ್ರಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮರುವ್ಯಾಖ್ಯಾನ ಗೊಳಿಸುವುದು ಹಾಗೂ ರಾಷ್ಟ್ರೀಯ ರಾಜಕೀಯ ನಭದಲ್ಲಿ ಉಡಾಯಿಸುವುದು ರಿಸ್ಕ್ ಹೆಚ್ಚು ಇರುವಂಥ ಕೆಲಸ. ಅದನ್ನು 2014 ರಲ್ಲಿ ಮೋದಿಯ ನಂಬಿಕಸ್ಥರು (ಸ್ಟ್ರಾಟಜಿಸ್ಟ್‌) ಸಮರ್ಥವಾಗಿ ನಿಭಾಯಿಸಿದರು. ಅದರ ಪರಿಣಾಮವೇ ಇಂದಿನ ಮೋದಿ ಸುನಾಮಿ. ಫಿರ್‌ ಏಕ್‌ ಬಾರ್‌ ಮೋದಿ ಸರಕಾರ್‌ !

2014 ರಲ್ಲಿ ಮೋದಿಯ ನಂಬಿಕಸ್ಥರಿಗೆ ಇದ್ದ ಸವಾಲು ಪ್ರಮುಖವಾಗಿ ಮೂರು. ಮೊದಲನೆಯದು, ಒಬ್ಬ ರಾಜ್ಯದ ಮುಖ್ಯಮಂತ್ರಿ ಪ್ರಧಾನಿ ಹುದ್ದೆಗೆ ಒಬ್ಬ ಅತ್ಯಂತ ಸಮರ್ಥ ಅಭ್ಯರ್ಥಿ ಎಂದು ಬಿಂಬಿಸುವುದು, ಎರಡನೆಯದೆಂದರೆ 63 ರ ಪ್ರಾಯದ ಹಿರಿಯನನ್ನು 1.5 ಕೋಟಿಯಷ್ಟು ಯುವ ಮತದಾರರನ್ನು ಒಳಗೊಂಡ ಯುವ ಭಾರತದ ಪ್ರಿಯ ವ್ಯಕ್ತಿಯನ್ನಾಗಿಸುವುದು, ಕೊನೆಯದಾಗಿ ಮೋದಿಯವರ ಮೇಲಿದ್ದ 2002 ರ ಗೋಧ್ರಾ ದುರಂತದ ಕಪ್ಪುಚುಕ್ಕೆಯನ್ನು ಅಳಿಸುವುದು. ಅದಕ್ಕಾಗಿ ಚಿಮ್ಮು ಹಲಗೆಯಾಗಿ ಮೋದಿಯ ನಂಬಿಕಸ್ಥರು ಬಳಸಿಕೊಂಡದ್ದು ಅಭಿವೃದ್ಧಿ ಕುರಿತಾದ ಗುಜರಾತಿ ಮಾದರಿ ಹಾಗೂ 2008 ರಲ್ಲಿ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯ ವಿರೋಧವನ್ನು ಎದುರಿಸುತ್ತಿದ್ದ ಟಾಟಾ ನ್ಯಾನೋ ಘಟಕವನ್ನು ತನ್ನಲ್ಲಿಗೆ ಸ್ಥಳಾಂತರಗೊಳಿಸುವ ಅಭಿವೃದ್ಧಿ ಪರ ನಿರ್ಧಾರ.

2002, 2007 ಹಾಗೂ 2012 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಮೋದಿ ಮಾಡಿದ್ದು ಒಂದೇ. ತಮ್ಮ ಮೇಲಿನ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ಅಳಿಸಿ “ತಾನು ಅಭಿವೃದ್ಧಿ ಪರ’ ಎಂದೆನಿಸಿ ಕೊಂಡರು. ಸುಮಾರು 5 ಸಾವಿರಕ್ಕೂ ಹೆಚ್ಚು ಸಂದರ್ಭಗಳನ್ನು ತಮ್ಮ ಸಾಮರ್ಥಯ ಪ್ರದರ್ಶನಕ್ಕೆ ಬಳಸಿದವರು ಮೋದಿ. 470 ಕ್ಕೂ ಹೆಚ್ಚು ರಾಜಕೀಯ ಸಭೆಗಳನ್ನು ಸಂಘಟಿಸಿದರು. ಎಲ್ಲ ಕಡೆಯೂ ಅಭಿವೃದ್ಧಿಯ ಅಗತ್ಯ, ಹಣದುಬ್ಬರದಂಥ ಸಂಗತಿ (ಯುಪಿಎ ವೈಫ‌ಲ್ಯಗಳು) ಪ್ರಸ್ತಾವಿಸಿದರು. ಇದು ಜನರಲ್ಲಿ ಅಭಿವೃದ್ಧಿಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು. ಅದೇ ಹೊತ್ತಿನಲ್ಲಿ ಮೋದಿಯವರ ಅಭಿಮಾನಿಗಳು, ವಿವಿಧ ರೂಪದ ಜಾಹೀರಾತುಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿವೃದ್ಧಿಯ ಪರ ತರಂಗವನ್ನು ಅಲೆಯಾಗಿ ಮಾರ್ಪಡಿಸಿದರು. ನೋಡನೋಡುತ್ತಲೇ ಮೋದಿ ರಾಷ್ಟ್ರೀಯ ಮಟ್ಟದಲ್ಲಿ ಪುನರ್‌ ವ್ಯಾಖ್ಯಾನಗೊಂಡಿದ್ದರು. ಒಬ್ಬ ವ್ಯಕ್ತಿ, ಶಕ್ತಿಯಾಗಿ, ಅಲೆಯಾಗಿ ಮಾರ್ಪಟಿದ್ದೇ ವಿಶೇಷ.


ಯಾವುದೇ ಒಂದು ಪ್ರಾದೇಶಿಕ  ಬ್ರ್ಯಾಂಡ್‌ ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಬೇಕೆಂದರೆ, ಮತ್ತೂಂದು ರಾಷ್ಟ್ರೀಯ ಬ್ರ್ಯಾಂಡ್‌ ನ ವರ್ಚಸ್ಸು ಇಳಿಮುಖವಾಗಿರಬೇಕು. ಅದರ ವೈಫ‌ಲ್ಯದ ಕಾರಣವನ್ನು ಬಳಸಿ ಆ ಹೊತ್ತಿನ ಸಾಮಾನ್ಯ ಅಗತ್ಯವನ್ನು ಸಮರ್ಥವಾಗಿ ಪೂರೈಸುವ ವಿಶ್ವಾಸವನ್ನು ಒಂದು ಪ್ರಾದೇಶಿಕ ಬ್ರ್ಯಾಂಡ್‌ ಸೃಷ್ಟಿಸಿದರೆ ರಾಷ್ಟ್ರೀಯ ವಲಯದಲ್ಲಿ ಯಶಸ್ವಿಯಾಗುವುದು ಕಷ್ಟವಲ್ಲ. ಅದೇ ಮೋದಿಯೂ ಮಾಡಿದ್ದು. 2014 ರ ಸಂದರ್ಭದಲ್ಲಿ ಕಾಂಗ್ರೆಸ್‌ನ ವೈಫ‌ಲ್ಯವನ್ನು ಬಳಸಿಕೊಂಡು, ಪ್ರತಿ ಹಂತದಲ್ಲೂ ಅಭಿವೃದ್ಧಿಗೆ ಕಲ್ಪಿಸಬೇಕಾದ ವೇಗಗತಿಯನ್ನು ಪ್ರಸ್ತಾವಿಸುತ್ತಾ ಸಾಗಿದರು. ಅದು ಆ ಹೊತ್ತಿನ ಅಗತ್ಯ. ತನ್ನ ಗುಜರಾತ್‌ನಲ್ಲಿನ ಅಭಿವೃದ್ಧಿ ಉಪಕ್ರಮಗಳನ್ನೇ ವಿವರಿಸುತ್ತಾ, ದೇಶದ ಅಭಿವೃದ್ಧಿಯ ಗತಿಗೆ ವೇಗ ಒದಗಿಸಬೇಕಾದ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದರು.  ಹಾಗೆಯೇ ನೀವು ಹುಡುಕುವ ಅಂಥ ನಾಯಕ ನನ್ನಲ್ಲಿದ್ದಾನೆ ಎಂಬುದನ್ನೂ ಅನಾವರಣಗೊಳಿಸಿದರು. ಅದಕ್ಕೆ ಪ್ರಬಲ ಸಮರ್ಥನೆಯಂದರೆ, ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಕೆಲವು ತಿಂಗಳಷ್ಟೇ ಮೊದಲು ದಿಲ್ಲಿಯ ಶ್ರೀರಾಮ್‌ ಕಾಲೇಜಿನಲ್ಲಿ ಅಭಿವೃದ್ಧಿ ಕುರಿತು ನೀಡಿದ ಮೋದಿಯ ಉಪನ್ಯಾಸ ಇಡೀ ಯುವ ಸಮುದಾಯಕ್ಕೆ ಆಪ್ಯಾಯಮಾನವಾಯಿತು.

ನಿಜ, ಗೋಧ್ರಾ ದುರಂತದಲ್ಲಿ ಮೋದಿಯ ಮೇಲೆ ಬಂದ ಆರೋಪ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಆ ಸಂದರ್ಭದಲ್ಲಿ ಒದಗಿಸಿತ್ತು. ಆದರೆ, ಅದನ್ನು ಮೀರಲು ಬಳಸಿದ ತಂತ್ರವೆಂದರೆ, ಆ ಕುರಿತು ಕಡಿಮೆ ಮಾತನಾಡುವುದು. ಅದರ ಬದಲಾಗಿ ಧನಾತ್ಮಕ ನೆಲೆಯನ್ನು ಹೆಚ್ಚಾಗಿ ಬಿಂಬಿಸುವುದು. ಜತೆಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು. ಮೋದಿ ಇಲ್ಲಿ ಮಾಡಿದ್ದೂ ಅದನ್ನೇ. ತಮ್ಮ ಮೇಲಿನ ಆರೋಪಕ್ಕೆ ಉತ್ತರ ಕೊಡುತ್ತಾ ಮತ್ತೆ ಮತ್ತೆ ಚರ್ಚೆಗೊಳಗಾಗಲಿಲ್ಲ. ಅದರ ಬದಲು ಅಭಿವೃದ್ಧಿ ನೆಲೆಯನ್ನು ಆಯ್ದುಕೊಂಡರು. ಹಾಗಾಗಿ ಮೋದಿ ಸರ್ವಸಮ್ಮತವಾದರು. ಮಾರುಕಟ್ಟೆಯಲ್ಲಿನ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳೂ ತಮ್ಮ ಮೇಲಿನ ಆರೋಪವನ್ನು ಅಳಿಸಿಕೊಳ್ಳಲು ಬಳಸುವುದು ಇದೇ ತಂತ್ರವನ್ನೇ.

ಮಾದರಿಗಳ ನಿರ್ಮಾಣ
ಮೋದಿ ಬ್ರ್ಯಾಂಡ್‌ ಸೂಪರ್‌ ಮ್ಯಾನ್‌ ರೀತಿಯಲ್ಲಿ ಬಿಂಬಿತವಾಗಲಿಲ್ಲ. ಅದೂ ಎಚ್ಚರದ ನಡೆಯೇ. ಮೋದಿಯನ್ನು ಸ್ವಯಂಭೂ, ಸಬಲ, ಪ್ರೇರಣದಾಯಕ ವ್ಯಕ್ತಿತ್ವವನ್ನಾಗಿ (ಸಾಮಾನ್ಯವಾಗಿ ಮಹಾತ್ಮರ ಸಾಧ್ಯತೆಗಳಿವು) ಅನಾವರಣಗೊಳಿಸದೇ, ಒಬ್ಬ ಪ್ರಾಮಾಣಿಕ, ವಿಶ್ವಾಸಾರ್ಹ ಹಾಗೂ ಬದ್ಧ ನಾಯಕನೆಂಬಂತೆ ಬಿಂಬಿಸಲಾಯಿತು. ಅದೇ ಜನಸಾಮಾನ್ಯರಿಗೆ ಆಪ್ಯಾಯಮಾನವಾಗಿದ್ದು.

ಸೋಲಿಲ್ಲದ ಸರದಾರ
2002 ರಾಜ್‌ಕೋಟ್‌
ಗುಜರಾತ್‌ನಲ್ಲಿ ಕೇಶುಭಾ ಪಟೇಲ್‌ ಅವರ ಬಳಿಕ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2002ರ ಫೆ.24ರಂದು ರಾಜಕೋಟ್‌-2ನಲ್ಲಿ ಉಪ ಚುನಾವಣೆ ನಡೆದಿದ್ದು, ಮೋದಿ ವಿಧಾನಸಭೆ ಪ್ರವೇಶಕ್ಕಾಗಿ ಚುನಾವಣೆಗೆ ನಿಂತಿದ್ದರು.  ಈ ಸಂದರ್ಭ ಕಾಂಗ್ರೆಸ್‌ನ ಅಶ್ವಿ‌ನ್‌ ಮೆಹ್ತಾ ಅವರನ್ನು ಮೋದಿ ಅವರು 14,728 ಮತಗಳ ಅಂತರದಿಂದ ಸೋಲಿಸಿದ್ದರು. ಈ ಕಿರು ಅವಧಿಯ ಬಳಿಕ 2002ರ ಕೊನೆಯಲ್ಲಿ ಗುಜರಾತ್‌ ವಿಧಾನಸಭೆಗೆ ಮತ್ತೆ ಚುನಾವಣೆ ನಡೆದಿತ್ತು.

2002
ಮಣಿನಗರ
ಗೋಧ್ರಾ ಗಲಭೆ ಬಳಿಕ ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿದ್ದು, ಎರಡನೇ ಬಾರಿಗೆ ಮೋದಿ ಮಣಿನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದರು. ಕಾಂಗ್ರೆಸ್‌ನ ಪ್ರತಿಸ್ಪರ್ಧಿ  ಓಝಾ ಯತಿನ್‌ಭಾಯ್‌ ನರೇಂದ್ರಕುಮಾರ್‌ ಅವರನ್ನು 75,333 ಮತಗಳಷ್ಟು ಭಾರೀ ಅಂತರದಿಂದ ಸೋಲಿಸಿದ್ದರು. ಮೋದಿ 1,13,589 ಮತಗಳನ್ನು ಪಡೆದಿದ್ದರೆ, ನರೇಂದ್ರ ಕುಮಾರ್‌ ಅವರು 38,256 ಮತಗಳನ್ನು ಪಡೆದಿದ್ದರು. ಈ ಚುನಾವಣೆ ಬಳಿಕ ಮೋದಿ ಸಿಎಂ ಆಗಿ ಐದು ವರ್ಷ ಆಡಳಿತ ನಡೆಸಿದರು.

2007
ಮಣಿನಗರ
ಈ ವಿಧಾನಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅಭೂತಪೂರ್ವ ಜಯ ದಾಖಲಿಸಿ ದ್ದರು. ಎರಡನೇ ಪೂರ್ಣ ಬಿಜೆಪಿ ಆಡಳಿತಕ್ಕೂ ಮೊದಲೇ ನಡೆದ ಈ ಚುನಾವಣೆಯಲ್ಲಿ ಮತ್ತೆ ಮೋದಿ ಮಣಿನಗರದಿಂದಲೇ ಸ್ಪರ್ಧಿಸಿದ್ದರು. ಈ ಸಂದರ್ಭ ಅವರ ಎದುರಾಳಿಯಾಗಿ ಕಾಂಗ್ರೆಸ್‌ನ ದಿನಾ ಪಟೇಲ್‌  ನಿಂತಿದ್ದರು. ಚುನಾವಣೆಯಲ್ಲಿ ಮೋದಿ 1,39,568 ಮತಗಳನ್ನು ಪಡೆದಿದ್ದು, ಪಟೇಲ್‌ ಅವರು 52,407 ಮತಗಳನ್ನು  ಪಡೆದಿದ್ದರು. ಒಟ್ಟು 87,161 ಮತಗಳ ಅಂತರದ ಜಯ ಮೋದಿಯವರದ್ದಾಗಿತ್ತು.


2012

ಮಣಿನಗರ
2012 ರ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸ ಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ಚುನಾವಣೆ ಎದುರಿಸಿತ್ತು. ಆದರೆ ಅದು ಫ‌ಲಕಾರಿಯಾಗಲಿಲ್ಲ. ಕಾರಣ ಮೋದಿ. ಈ ಬಾರಿಯೂ ಮೋದಿ ಮಣಿನಗರದಿಂದಲೇ ಸ್ಪರ್ಧಿಸಿದ್ದು, 1,20,470 ಮತಗಳನ್ನು ಪಡೆದಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ  ಶ್ವೇತಾ ಸಂಜೀವ್‌ ಭಟ್‌  34,097 ಮತಗಳನ್ನು ಪಡೆದಿದ್ದು, 86,373 ಮತಗಳ  ಅಂತರದಿಂದ  ಸೋತಿದ್ದರು.

2014
ವಡೋದರ,ವಾರಾಣಸಿ
ಮೊದಲ ಬಾರಿಗೆ ಲೋಕಸಭೆ ಚುನಾವಣೆಯನ್ನು ನರೇಂದ್ರ ಮೋದಿ 2014ರಲ್ಲಿ ಎದುರಿಸಿದ್ದರು. ವಡೋದರ ಮತ್ತು ವಾರಾಣಸಿಗಳಲ್ಲಿ ಮೋದಿ ಸ್ಪರ್ಧೆ ಮಾಡಿದ್ದರು. ವಡೋದರದಲ್ಲಿ ಮೋದಿ 8,45,464 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಮಿಸಿ ಮಧುಸೂದನ್‌ ದೇವಾರಾಂ 2,75,336 ಮತಗಳನ್ನು ಪಡೆದಿದ್ದರು. ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರು 5,81,023 ಮತ ಪಡೆದಿದ್ದರೆ, ಅರವಿಂದ್‌ ಕೇಜ್ರಿವಾಲ್‌ ಅವರು 2,09,238 ಮತಗಳನ್ನು ಪಡೆದಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.