ಭಾರತದ ಏಕತೆಗೆ ಪಟೇಲ್ ಕಾರಣ
Team Udayavani, Oct 29, 2018, 8:24 AM IST
ಹೊಸದಿಲ್ಲಿ: “ದೇಶ ವಿಭಜನೆಯ ಬಳಿಕ ಭಾರತವನ್ನು ಒಂದುಗೂಡಿಸಿದ ಹೆಗ್ಗಳಿಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲಬೇಕು. ಅವರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಬಹುದಾಗಿದ್ದ ಆಕ್ರಮಣವು ತಪ್ಪಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿ, “ಅ.31ರಂದು ಪಟೇಲ್ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಅಂದು ಆಯೋಜಿಸ ಲಾಗುವ ಏಕತೆಗಾಗಿ ಓಟದಲ್ಲಿ ಎಲ್ಲ ಯುವಜನರೂ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದ್ದಾರೆ. ನಾವು ಈಗ ಒಗ್ಗಟ್ಟಿನ ಭಾರತವನ್ನು ನೋಡುತ್ತಿರುವುದರಲ್ಲಿ, ಸರ್ದಾರ್ ಪಟೇಲ್ ಅವರ ಕೊಡುಗೆ ಮಹತ್ವದ್ದು ಎಂದೂ ಅವರು ಶ್ಲಾಸಿದ್ದಾರೆ. ಈ ವರ್ಷದ ಅಕ್ಟೋಬರ್ 31 ವಿಶೇಷ ದಿನವಾಗಿದೆ. ಏಕೆಂದರೆ, ಅಂದು ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರ ವಾಗಲಿರುವ “ಏಕತೆಯ ಪ್ರತಿಮೆ’ ಯನ್ನು ಲೋಕಾರ್ಪಣೆ ಮಾಡುವ ಮೂಲಕ ಪಟೇಲ್ರಿಗೆ ನೈಜ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.
ಇದೇ ವೇಳೆ, ಅ.31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯೂ ಆಗಿದ್ದು, ಅವರಿಗೂ ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ಗೌರವ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಪರಿಸರ ಸಂರಕ್ಷಣೆ, ಆರೋಗ್ಯದ ರಕ್ಷಣೆ, ಸೈನಿಕರ ಸಾಹಸ ಮತ್ತಿತರ ವಿಚಾರಗಳನ್ನೂ ಉಲ್ಲೇಖೀಸಿದ್ದಾರೆ. ಅತ್ಯುತ್ತಮ ಆಹಾರ ನೀತಿ ಜಾರಿ ಮಾಡಿ ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನವಾದ ಸಿಕ್ಕಿಂ ಅನ್ನೂ ಇದೇ ವೇಳೆ ಅವರು ಶ್ಲಾ ಸಿದ್ದಾರೆ.
ಕ್ರೀಡಾಳುಗಳಿಗೆ ಅಭಿನಂದನೆ: ಇತ್ತೀಚೆಗೆ ಮುಗಿದ ಏಷ್ಯನ್ ಪ್ಯಾರಾ ಗೇಮ್ಸ್ನ ವಿಜೇತರಿಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ. ಆಟದ ಜಗತ್ತಿನಲ್ಲಿ ಶಕ್ತಿ, ಸಾಮರ್ಥ್ಯ, ಸ್ಫೂರ್ತಿ, ಕೌಶಲ ಇತ್ಯಾದಿಗಳೂ ಮುಖ್ಯ ಪಾತ್ರ ವಹಿಸುತ್ತವೆ. ಇವೆಲ್ಲವೂ ಒಬ್ಬ ಕ್ರೀಡಾಳುವಿನ ಯಶಸ್ಸಿನ ಮಾನದಂಡವಾಗಿದೆ. ದೇಶ ನಿರ್ಮಾಣಕ್ಕೂ ಇದು ಸಹಾಯಕ ಎಂದೂ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ