“ಮಹಾಭಾರತ’ಕ್ಕೆ ಮೋದಿ ಬೆಂಬಲ
Team Udayavani, Jun 6, 2017, 3:45 AM IST
ನವದೆಹಲಿ: ಎನ್ನಾರೈ ಉದ್ಯಮಿ ಬಿ.ಆರ್.ಶೆಟ್ಟಿ ಅವರು 1000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಾಗೂ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನವೇ ಟೈಟಲ್ ವಿವಾದದ ಸುಳಿಗೆ ಸಿಲುಕಿರುವ “ಮಹಾಭಾರತ’ ಚಿತ್ರತಂಡಕ್ಕೆ ಈಗ ಆನೆ ಬಲ ಬಂದಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.
ಹೌದು. ಚಿತ್ರದ ಟೈಟಲ್ ಬದಲಿಸುವಂತೆ ಹಿಂದೂ ಪರ ಸಂಘಟನೆಯೊಂದು ನಿರ್ಮಾಪಕರಿಗೆ ಬೆದರಿಕೆ ಹಾಕುತ್ತಿರುವ ನಡುವೆಯೇ, ನಿರ್ಮಾಪಕ ಬಿ.ಆರ್.ಶೆಟ್ಟಿ ಅವರಿಗೆ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. “ಸಹಸ್ರ ಕೋಟಿ ವೆಚ್ಚದಲ್ಲಿ ನೀವು “ಮಹಾಭಾರತ’ ಚಿತ್ರ ನಿರ್ಮಿಸುತ್ತಿರುವುದು ಇಡೀ ದೇಶವೇ ಹೆಮ್ಮೆ ಪಡುವಂಥ ವಿಚಾರ. ಚಿತ್ರ ಬಿಡುಗಡೆಯಾಗುವುದನ್ನು ನಾನು ಕಾತರದಿಂದ ಎದುರುನೋಡುತ್ತಿದ್ದೇನೆ,’ ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ಖುಷಿಯಾಗಿರುವ ಚಿತ್ರತಂಡ, ಜು.7ರಂದು ಮೋದಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸಲಿದೆ.
ಎಂ.ಟಿ.ವಾಸುದೇವನ್ ಅವರ ಪ್ರಶಸ್ತಿ ವಿಜೇತ ಕಾದಂಬರಿ “ರಂಡಮೂಜಮ್’ ಆಧರಿಸಿ “ಮಹಾಭಾರತ’ ಚಿತ್ರ ನಿರ್ಮಿಸಲು ಶೆಟ್ಟಿ ಮುಂದಾಗಿದ್ದಾರೆ. ಆದರೆ ವ್ಯಾಸರು ಬರೆದ ಕಥೆಯನ್ನೇ ಚಿತ್ರ ರೂಪಕ್ಕೆ ತಂದರೆ ಮಾತ್ರ “ಮಹಾಭಾರತ’ ಹೆಸರನ್ನು ಬಳಸಬೇಕು ಎಂದು ಕೇರಳ ಹಿಂದೂ ಐಕ್ಯ ವೇದಿ ಸಂಘಟನೆ ಆಕ್ಷೇಪಿಸಿತ್ತು. ಈ ಹಿನ್ನೆಲೆಯಲ್ಲಿ ಮಲೆಯಾಳ ದಲ್ಲಿ ರಂಡಮೂಜಮ್ ಹೆಸರಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಉಳಿದೆಡೆ “ಮಹಾ ಭಾರತ’ ಹೆಸರೇ ಇರಲಿದೆ ಎಂದು ಶೆಟ್ಟಿ ಭಾನು ವಾರವಷ್ಟೇ ಹೇಳಿದ್ದರು. ಚಿತ್ರದ ಚಿತ್ರೀಕರಣ 2018ರಲ್ಲಿ ಆರಂಭವಾಗಲಿದ್ದು, ಮೋಹನ್ಲಾಲ್ ಭೀಮನ ಪಾತ್ರ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ