ಗ್ರಾಪಂ ಅಧ್ಯಕ್ಷರಿಗೆ ಮೋದಿ ನೀರಿನ ಪಾಠ
ನೀರು ಉಳಿಸುವ ಕುರಿತ ಪತ್ರ ಭಾರಿ ಜನಪ್ರಿಯ;ಗ್ರಾಮ ಸಭೆಯಲ್ಲಿ ಪತ್ರ ಓದಿ ಹೇಳಲು ಸೂಚನೆ
Team Udayavani, Jun 16, 2019, 5:30 AM IST
ನವದೆಹಲಿ: ಈಗ ದೇಶದ ಮೂಲೆ ಮೂಲೆಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಬರೆದಿರುವ ಪತ್ರದ್ದೇ ಸುದ್ದಿ. ಗ್ರಾಮ ಪಂಚಾಯತಿ ಅಧ್ಯಕ್ಷರುಗಳಂತೂ ಪತ್ರ ಬಂದಿರುವ ವಿಚಾರವನ್ನು ಪದೇ ಪದೆ ಹೇಳಿಕೊಂಡು ಬೀಗಿದ್ದೇ ಬೀಗಿದ್ದು!
ಅಂದ ಹಾಗೆ ಏನಿದು ‘ಪತ್ರ’ದ ಕಥೆ ಎಂದು ಯೋಚಿಸುತ್ತಿದ್ದೀರಾ? ದೇಶದ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ನಿವಾರಣೆ ಕುರಿತು ದೇಶಾದ್ಯಂತ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಭಾರಿ ಜನಪ್ರಿಯವಾಗಿದೆ ಮಾತ್ರವಲ್ಲ, ಪತ್ರದ ಜೊತೆಗೆ ಇದನ್ನು ತಲುಪಿಸಿದ ರೀತಿ ಕೂಡ ವಿಶಿಷ್ಟವಾಗಿದೆ.
ಅಲ್ಲದೆ, ಗ್ರಾಮ ಸಭೆ ಕರೆದು ಪತ್ರವನ್ನು ಓದಿ ಹೇಳಬೇಕು ಎಂದೂ ಸೂಚಿಸಲಾಗಿದೆ. ಗ್ರಾಮ ಸಭೆಯಲ್ಲಿ ನೀರು ರಕ್ಷಣೆ ಮಾಡುವ ಕುರಿತು ಚರ್ಚೆ ನಡೆಸುವಂತೆಯೂ ಸಲಹೆ ನೀಡಲಾಗಿದೆ. ಚೆಕ್ ಡ್ಯಾಮ್ಗಳು ಮತ್ತು ಕೊಳಗಳನ್ನು ನಿರ್ಮಾಣ ಮಾಡುವಂತೆಯೂ, ಕೊಳಗಳನ್ನು ಸ್ವಚ್ಛಗೊಳಿಸುವಂತೆಯೂ ಪತ್ರದಲ್ಲಿ ಶಿಫಾರಸು ಮಾಡಲಾಗಿದೆ.
ಜಿಲ್ಲಾಧಿಕಾರಿಯಿಂದಲೇ ಹಸ್ತಾಂತರ: ಜಿಲ್ಲಾಧಿಕಾರಿಗಳೇ ನೇರವಾಗಿ ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಖುದ್ದಾಗಿ ಪತ್ರ ಹಸ್ತಾಂತರಿಸಬೇಕೆಂದು ಸೂಚಿಸಲಾಗಿದೆ. ಅದರಂತೆ, ಅವರು ಪತ್ರಗಳ ಹಸ್ತಾಂತರ ಕಾರ್ಯ ನಡೆಸುತ್ತಿದ್ದಾರೆ. ಈ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಮಾಡಿದ್ದು, ಮಳೆಗಾಲದಲ್ಲಿ ಮಳೆ ನೀರನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಕ್ರಮ ಕೈಗೊಳ್ಳುವಂತೆ ಹಾಗೂ ಆ ಮೂಲಕ ಜಲಸಂರಕ್ಷಣೆಯನ್ನು ಜನಾಂದೋಲನವಾಗಿ ರೂಪಿಸುವಂತೆ ಸೂಚಿಸಲಾಗಿದೆ.
ನವಭಾರತ ನಿರ್ಮಾಣಕ್ಕೆ ಕೈಜೋಡಿಸಿ: ನೀವು ಸ್ವಚ್ಛತೆಯನ್ನು ಹೇಗೆ ಯಶಸ್ವಿ ಜನಾಂದೋಲನವನ್ನಾಗಿ ಬದಲಾಯಿಸಿದಿರೋ, ಅದೇ ರೀತಿ ಜಲ ಸಂರಕ್ಷಣೆಯ ಅಭಿಯಾನವನ್ನೂ ಜನಾಂದೋಲನವನ್ನಾಗಿ ಪರಿವರ್ತಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಅಸಾಧ್ಯವಾದದ್ದನ್ನೂ ಸಾಧಿಸುವ ಮೂಲಕ ನೀವೆಲ್ಲರೂ ನವಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಎಂದೂ ಮೋದಿ ಕರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು