ವಿದೇಶದಲ್ಲೂ ಮೋದಿ ಹವಾ

ಭರತಖಂಡ ಗೆದ್ದ ನರೇಂದ್ರ

Team Udayavani, May 24, 2019, 6:05 AM IST

modi-foreighn

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜಗತ್ತಿನಲ್ಲಿ ಭಾರತದ ಬಗೆಗಿನ ಬ್ರ್ಯಾಂಡ್‌ ಬದಲಾಗಿರುವುದು ನಿಜ.

ಬಹಳ ವಿಶೇಷವಾಗಿ ಭಯೋತ್ಪಾದನೆ ಸಂಬಂಧದ ಭಾರತದ ಹಳೆಯ ಹೋರಾಟಕ್ಕೆ ಬಲ ಬಂದಿದ್ದು ಈ ಸಂದರ್ಭದಲ್ಲೇ. ತಮ್ಮ ಅವಧಿಯಲ್ಲಿ 57 ದೇಶಗಳಿಗೆ 97 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಎಲ್ಲವೂ ಭಾರತಕ್ಕೆ ಬಲ ತಂದಿದೆ ಎನ್ನಬಹುದು. ಆ ಸಂದರ್ಭದಲ್ಲಿ ಒಬ್ಬ ಚಾಯ್‌ವಾಲಾ ಇಷ್ಟೊಂದು ವಿದೇಶಗಳಿಗೆ ಹೋಗಿ ಏನು ಮಾಡುತ್ತಾನೆ ಎಂಬ ಕುತೂಹಲ ಇದ್ದೇ ಇತ್ತು. ಆದರೆ ಪರಿಣಾಮ ನಮ್ಮ ಕಣ್ಣ ಮುಂದಿದೆ.

ಇಷ್ಟಕ್ಕೂ ಒಬ್ಬ ಗುಜರಾತಿ, ಹಿಂದಿ ಭಾಷೆಯ ಪ್ರದೇಶದವ ವಿದೇಶದ ಜನರಲ್ಲೂ ಒಬ್ಬ ನಾಯಕರಾಗಿ ಕಂಡರು. ಅವರ ಮಾತಿನ ವರಸೆಗೆ ತಲೆದೂಗದವರೇ ಇಲ್ಲ. ಪ್ರದೇಶ, ಭಾಷೆ, ಸಂಸ್ಕೃತಿ, ಇತಿಹಾಸ, ವರ್ತಮಾನ ಎಲ್ಲವನ್ನೂ ಒಂದು ಬೊಗಸೆಯಲ್ಲಿ ಇಟ್ಟುಕೊಂಡು ಜನರೆದುರು ನಿಲ್ಲುತ್ತಾರೆ. ಆಯಾ ಜನರು ತಮಗೆ ಬೇಕಾದುದನ್ನು ಆಯ್ದುಕೊಳ್ಳುತ್ತಾರೆ. ಎಲ್ಲರನ್ನೂ ಸಮಾಧಾನಿಸಿದ ಕೀರ್ತಿ ಮೋದಿಗೆ ಸಿಕ್ಕರೆ, ತಮಗೂ ಏನೋ ಸಿಕ್ಕಿತೆಂಬ ಸಂಭ್ರಮದಲ್ಲಿ ಜನರು ಮನೆಗೆ ತೆರಳುತ್ತಾರೆ.

ಯಾವುದೇ ಸಂದರ್ಭದಲ್ಲೂ ಮತ್ತು ಪ್ರದೇಶದಲ್ಲೂ ಮೋದಿ ತಮ್ಮನ್ನು ತಾವು ಉಳಿದವರೊಂದಿಗೆ ಒಬ್ಬ ಅಪರಿಚಿತನಂತೆ ಬಿಂಬಿಸಿಕೊಳ್ಳುವುದೇ ಇಲ್ಲ; ಬದಲಾಗಿ ತೀರಾ ಪರಿಚಿತನಂತೆಯೇ ವರ್ತಿಸುತ್ತಾರೆ. ಹಾಗಾಗಿಯೇ ಸಂಬಂಧಗಳೂ ಗಟ್ಟಿಗೊಳ್ಳುತ್ತವೆ. 5 ವರ್ಷಗಳಲ್ಲಿ ಭಯೋತ್ಪಾದನೆಯ ಮೇಲಿನ ಹೋರಾಟಕ್ಕೆ ಒಬ್ಬಂಟಿಯಾಗಿದ್ದ ಭಾರತಕ್ಕೆ ಇಡೀ ಜಗತ್ತು ಸಹಕರಿಸುವಂತಾದದ್ದು ಇಂಥ ನೆಲೆಗಳಿಂದಲೇ.

ಮೋದಿ ವಿದೇಶಾಂಗ ನೀತಿ ವಿಚಾರದಲ್ಲಿ ಅನುಭವಿಯಲ್ಲ. ಮೊದಲ ಬಾರಿಗೆ ಸಂಸದರಾದರು, ಆಗಲೇ ಪ್ರಧಾನಿಯಾದರು. ಯಾವಾಗಲೂ ಒಬ್ಬ ನಾಯಕ ತಂಡಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುತ್ತಾನೆ. ಉಳಿದ ಸದಸ್ಯರು ಅದನ್ನು ಬಳಸಿಕೊಂಡು ಸಾಧಿಸುತ್ತಾರೆ. ಅದನ್ನೇ ಮೋದಿ ಮಾಡಿದ್ದು ವಿದೇಶಾಂಗ ನೆಲೆಯಲ್ಲಿ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದ ಗೋಧಾÅ ಗಲಭೆ ಸಂಬಂಧದ ಆರೋಪದಲ್ಲಿ ಅಮೆರಿಕ ಮೋದಿಗೆ ವೀಸಾ ನೀಡಿರಲಿಲ್ಲ. ಆದರೆ ಪ್ರಧಾನಿಯಾದ ಮೇಲೆ 2014ರಲ್ಲಿ ಅಮೆರಿಕ ಪ್ರವಾಸ ಮಾಡಿ, ಆಗಿನ ಅಧ್ಯಕ್ಷ ಬರಾಕ್‌ ಒಬಾಮಾರನ್ನು ಭೇಟಿಯಾದರು. ಹೀಗೆ ಸಂಬಂಧದ ಕೊಂಡಿ ಮುಂದುವರಿಯಿತು. ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವ ಪ್ರಯತ್ನ ಕೈಗೂಡಲು ಮೋದಿ ಬ್ರ್ಯಾಂಡ್‌ನ‌ ಸಹಾಯವೂ ಇದೆ.

ಹೋದಲ್ಲೆಲ್ಲ ಜನ
ಮೋದಿಯವರು ವಿದೇಶ ಪ್ರವಾಸ ಸಂದರ್ಭ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಮೂಲಕ ಭಾರತೀಯ ಅಸ್ಮಿತೆಯನ್ನು ಬಡಿದೆಬ್ಬಿಸಿದರು. ಹಾಗಾಗಿ ವಿದೇಶದಲ್ಲೂ ಭಾರತ ಪ್ರಜ್ವಲಿಸಲು ಕಾರಣವಾಯಿತು.

ಸ್ವಿಟ್ಸರ್ಲಂಡ್‌ನ‌ಲ್ಲಿ ಬಾಲಿವುಡ್‌ ಮನನ
ಸ್ವಿಟ್ಸರ್ಲಂಡ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ನಗರಗಳ ವಿಹಂಗಮ ನೋಟಕ್ಕೆ ಮನಸೋತಿದ್ದರು. ಈ ವೇಳೆ ಅಲ್ಲಿ ಮಾತನಾಡುತ್ತಾ ಬಾಲಿವುಡ್‌ ಚಿತ್ರತಂಡದವನ್ನು ಉಲ್ಲೇಖೀಸುತ್ತಾರೆ. ಅಲ್ಲಿನ ಟೆನ್ನಿಸ್‌ ತಾರೆ ಮಾರ್ಟಿನಾ ಹಿಂಗೀಸ್‌ ಉಲ್ಲೇಖೀಸಿ, ಅವರು ಭಾರತದ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್‌ ಪೇಸ್‌ ಜತೆ ಜೋಡಿಯಾಗಿ ಆಡಿದ ನೆನಪನ್ನು ಬಿಚ್ಚಿಟ್ಟರು.

ಅಮೆರಿಕದಲ್ಲಿ ಗಾಂಧಿ ನೆನೆಪು
ಮಹಾತ್ಮಾ ಗಾಂಧೀಜಿಯವರ ಕುರಿತು ವಿಶ್ವದ ಎಲ್ಲ ರಾಷ್ಟ್ರಗಳಿಗೆ ಅತೀವ ಗೌರವವಿದೆ. ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಗಾಂಧಿ ಚಿಂತನೆಯಿಂದ ಪ್ರೇರೇಪಿತವಾದ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರನ್ನು ಸ್ಮರಿಸುತ್ತಾರೆ. ವಿಶೇಷ ಎಂದರೆ ಅಮೆರಿಕ ಗಾಂಧಿಯಾಗಿ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರನ್ನು ಕರೆಯುತ್ತಾರೆ. ಇಲ್ಲಿ ಅವರು ಸ್ವಾಮಿ ವಿವೇಕಾನಂದರನ್ನು ನೆನಪಿಸಿಕೊಳ್ಳುತ್ತಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಕುರಿತು ಮಾತನಾಡಿದ ಪ್ರಧಾನಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರೂಪಿಸಲು ನೆರವಾಗಿದೆ ಎಂದು ಸ್ಮರಿಸುತ್ತಾರೆ.

ಸಂಬಂಧದ ಎಳೆ ಬಿಚ್ಚಿಡುವ ಮೋದಿ
ಮೋದಿ ಯಾವುದೇ ರಾಷ್ಟ್ರಕ್ಕೆ ಹೋಗಲಿ, ಭಾರತದೊಂದಿಗೆ ಆ ದೇಶದ ಸಂಬಂಧವೇನು ಎಂಬುದನ್ನು ಒತ್ತಿ ಹೇಳಲು ಬಯಸುತ್ತಾರೆ. ಈ ಹಿಂದೆ ಅಪಾ^ನಿಸ್ಥಾನಕ್ಕೆ ಹೋದಾಗಲೂ ಹೀಗೆಯೇ, ಕುರಾನ್‌ನ ವಾಕ್ಯವೊಂದನ್ನು ಉಲ್ಲೇಖೀಸಿ “ನದಿಗಳೆಂದರೆ ಸ್ವರ್ಗ’ ಎಂದು ಹೇಳಿದೆ. ಹಾಗೆಯೇ ಹಿಂದೂಗಳಲ್ಲಿ ಜೀವನದಿ ಎಂಬ ಕಲ್ಪನೆ ಇದೆ ಎಂದು ಹೇಳಿ ಹತ್ತಿರ ತರುವ ಕೆಲಸ ಮಾಡುತ್ತಾರೆ. ಇದು ಒಂದು ರೀತಿಯ ಬಾಂಧವ್ಯ, ಆಪ್ಯಾಯಮಾನತೆ ವೃದ್ಧಿಗೆ ಕಾರಣವಾಯಿತು. ಈ ಭೇಟಿಯಲ್ಲಿ ಅವರು ಹರಿಯುವ ನದಿ ವಿರುದ್ಧ ಮಾತು ಮುಂದುವರಿಸುತ್ತ, ಈ ನದಿ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ಸೂಫಿ ಪಂಥದ ಉಗಮಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಅಷ್ಟೇ ಅಲ್ಲದೆ ಆಗತಾನೆ ಜೀವ ಪಡೆದುಕೊಂಡಿದ್ದ ಅಪಾ^ನ್‌ ಕ್ರಿಕೆಟ್‌ ತಂಡಕ್ಕೆ ಶುಭಾಶಯ ಕೋರಲು ಮೋದಿ ಮರೆಯಲಿಲ್ಲ.

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.