‘ಇ.ಡಿ. ನಿಷ್ಪಕ್ಷ ತನಿಖೆ ನಡೆಸಿದರೆ ಸಹಕರಿಸುವೆ’ – ಅನಿಲ್ ದೇಶ್ಮುಖ್
Team Udayavani, Oct 14, 2021, 3:20 PM IST
ಮುಂಬಯಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿದ ಅನಿಲ್ ದೇಶ್ಮುಖ್ ಅವರಿಗೆ ಕಳೆದ ಅನೇಕ ಬಾರಿ ಇ.ಡಿ. ನೋಟಿಸ್ ಹೊರಡಿಸಿತ್ತು. ಆದರೆ ಅನಿಲ್ ದೇಶ್ಮುಖ್ ಅವರು ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗದ ಬಗ್ಗೆ ಮುಂಬಯಿ ಹೈಕೋರ್ಟ್ ವಿಚಾರಣೆ ನಡೆಸಿದ್ದು, ಅನುಪಸ್ಥಿತಿಯ ಕಾರಣವನ್ನು ಕೇಳಿದೆ. ಇದಕ್ಕೆ ಉತ್ತರಿಸಿರುವ ಅನಿಲ್ ದೇಶ್ಮುಖ್, ಹಣದ ಅಕ್ರಮ ವ್ಯವಹಾರದ ಬಗ್ಗೆ ಇ.ಡಿ. ತನಿಖೆಯಿಂದ ನಾನು ತಪ್ಪಿಸಿಕೊಳ್ಳುತ್ತಿದ್ದೇನೆ ಎನ್ನುವ ಹೇಳಿಕೆ ತಪ್ಪು. ಈ ಪ್ರಕರಣದಲ್ಲಿ ಇ.ಡಿ. ನಿಷ್ಪಕ್ಷಪಾತ ತನಿಖೆ ನಡೆಸಿದರೆ ನಾನು ಸಹಕರಿಸಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾ| ನಿತಿನ್ ಎಂ. ಜಮಾದಾರ್ ಮತ್ತು ನ್ಯಾ| ಸಾರಂಗ್ ವಿ ಕೊತ್ವಾಲ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಅನಿಲ್ ಅನಿಲ್ ದೇಶ್ಮುಖ್ ಪರ ವಾದ ಮಂಡಿಸಿದ ವಕೀಲ ವಿಕ್ರಮ್ ಚೌಧರಿ, ಅನಿಲ್ ದೇಶ್ಮುಖ್ ಅವರು ಇ.ಡಿ. ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡಲು ಬಯಸುತ್ತೇನೆ. ಯಾವುದೇ ವೈಯಕ್ತಿಕ ಉದ್ದೇಶಗಳಿಲ್ಲದವರು ದೇಶ್ಮುಖ್ಅವರನ್ನು ಪ್ರಶ್ನಿಸಬೇಕು. ಇ.ಡಿ. ನ್ಯಾಯದ ಮೂಲ ಮಾನದಂಡಗಳನ್ನು ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕು. ದೇಶ್ಮುಖ್ ಅವರನ್ನು ಬಲವಂತದಿಂದ ನಡೆಸಲಾಗುವ ವಿಚಾರಣೆಯಿಂದ ಸುರಕ್ಷಿತವಾಗಿಸುವಂತೆ ಅವರು ಒತ್ತಾಯಿಸಿದರು. ಇ.ಡಿ. ವಿಚಾರಣೆಯ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ವಿಕ್ರಮ್ ಚೌಧರಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ