ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು
Team Udayavani, Jul 6, 2022, 2:00 AM IST
ಹೊಸದಿಲ್ಲಿ: ಮಧ್ಯ ಭಾರತದಲ್ಲಿಇರುವ ನಿಮ್ನ ಒತ್ತಡ ಪರಿಸ್ಥಿತಿಯಿಂದಾಗಿ ದೇಶದೆಲ್ಲೆಡೆ ಮುಂಗಾರು ಮಳೆ ಬಿರುಸು ಗೊಂಡಿದ್ದು, ಖಾರಿಫ್ ಬೆಳೆಗಳನ್ನು ಬಿತ್ತುವ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಮುಂದಿನ ಐದಾರು ದಿನಗಳ ಅವಧಿಯಲ್ಲಿ ಮಧ್ಯ ಭಾರತ ಮತ್ತು ಪೂರ್ವ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದ್ದರೆ ದೇಶದ ವಾಯವ್ಯ ಭಾಗದಲ್ಲಿ ಬುಧವಾರದಿಂದ ಮಳೆ ಬೀಳುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಮಧ್ಯಪ್ರದೇಶದ ಕೇಂದ್ರ ಭಾಗದಲ್ಲಿ ನಿಮ್ನ ಒತ್ತಡ ಪರಿಸ್ಥಿತಿ ಇದೆ, ಜತೆಗೆ ಗುಜರಾತ್ನಿಂದ ಮಹಾರಾಷ್ಟ್ರದ ತನಕ ಟ್ರಫ್ ಇದ್ದು, ಇದರಿಂದಾಗಿ ಈ ಪ್ರದೇಶಗಳಲ್ಲಿ ಮಾತ್ರವಲ್ಲದೆ ಕೇರಳ, ತೆಲಂಗಾಣ, ಒಡಿಶಾ, ಕರ್ನಾಟಕ ಕರಾವಳಿ ಐದಾರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.
ಎರಡು-ಮೂರು ದಿನಗಳಿಂದ ದೇಶದ ವಿವಿಧೆಡೆ ಉತ್ತಮ ಮಳೆಯಾ ಗುತ್ತಿದ್ದು, ಇದರಿಂದಾಗಿ ಕಳೆದ ಶುಕ್ರವಾರ ಕಂಡು ಬಂದಿದ್ದ ಶೇ.8ರ ಮಳೆ ಕೊರತೆ ಸದ್ಯ ಶೇ. 2ಕ್ಕೆ ಇಳಿದಿದೆ ಎಂದೂ ಐಎಂಡಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA