ಮಸೂದ್ ಅಜರ್, ಹಫೀಜ್ ಸಯೀದ್ ವಿರುದ್ಧ ಇನ್ನಷ್ಟು ಕ್ರಮ
ನೂತನ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿಯಲ್ಲಿ ಹೆಸರು
Team Udayavani, Sep 4, 2019, 4:35 PM IST
ಹೊಸದಿಲ್ಲಿ: ಪಾಕಿಸ್ಥಾನ ಮೂಲಕ ಉಗ್ರರ ವಿರುದ್ಧ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ಭಾರತ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಲಷ್ಕರ್ ಎ ತೋಯ್ಬಾದ ಸ್ಥಾಪಕ ಹಫೀಜ್ ಸಯೀದ್ ಸೇರಿದಂತೆ ಹಲವು ಉಗ್ರರನ್ನು ನೂತನ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಪಟ್ಟಿಯಲ್ಲಿ ಸೇರಿಸಿದೆ.
ತಿಂಗಳ ಹಿಂದೆ 1967ರ ಕಾಯ್ದೆಗೆ ತಂದ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಹೊಸ ಕಾನೂನು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದೆ. ಹೊಸ ತಿದ್ದುಪಡಿ ಕಾನೂನಿಂದಾಗಿ ದೇಶದಲ್ಲಿ ಉಗ್ರರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಜತೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಹಿಂದಿನ ಕಾನೂನು ಅಡಿಯಲ್ಲಿ ಕೆಲವು ಅವಕಾಶಗಳು ಇರಲಿಲ್ಲ. ಹೊಸ ಕಾನೂನು ಪಟ್ಟಿಯಡಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನೂ ಸೇರಿಸಲಾಗಿದೆ.