11 ಸಾವಿರ ಕೋಟಿ ಬ್ಯಾಂಕಿಂಗ್‌ ವಂಚನೆ


Team Udayavani, Feb 15, 2018, 6:00 AM IST

Punjab-bank.jpg

ನವದೆಹಲಿ: ಬೆಟ್ಟದಷ್ಟು “ವಸೂಲಾಗದ ಸಾಲ’ ಸಮಸ್ಯೆಯಿಂದ ನರಳುತ್ತಿರುವ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಹುದೊಡ್ಡ ವಂಚನೆಯ ಹಗರಣದ ಪೆಟ್ಟು ಬಿದ್ದಿದೆ.

ದೇಶದ ಎರಡನೇ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕು ಎಂದೇ ಹೆಸರುಗಳಿಸಿಕೊಂಡಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಮುಂಬೈ ಬ್ರಾಂಚೊಂದರಲ್ಲೇ 11,400 ಕೋಟಿ ರೂ. ಮೌಲ್ಯದ ಹಗರಣ ಪತ್ತೆಯಾಗಿದೆ. 

ಬ್ಯಾಂಕಿನೊಳಗಿನವರೇ “ತಮಗೆ ಬೇಕಾದ’ ದೇಶದೊಳಗಿನ ಮತ್ತು ದೇಶದ ಹೊರಗಿನವರಿಗೆ ಅನುಕೂಲ ಮಾಡಿಕೊಟ್ಟಿರುವ “ವಂಚನೆಯ ಮತ್ತು ಅನಧೀಕೃತ’ ವಹಿವಾಟುಗಳು ಬೆಳಕಿಗೆ ಬಂದಿವೆ. ಸ್ವತಃ ಬ್ಯಾಂಕೇ ಈ ಬಗ್ಗೆ ಷೇರುಪೇಟೆಯಲ್ಲಿ “ಮೋಸದ ವರದಿ’ ಮಾಡಿದೆ.

ಈ ಹಗರಣ ಹೊರಗೆ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬ್ಯಾಂಕ್‌, 10 ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇಡೀ ಹಗರಣದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿದೆ. ಅಲ್ಲದೆ, ನೀರವ್‌ ಮೋದಿ ಮತ್ತು ಇತರೆ ವ್ಯಕ್ತಿಗಳ ವಿರುದ್ಧ ಸಿಬಿಐಗೆ ಎರಡು ದೂರುಗಳನ್ನೂ ನೀಡಲಾಗಿದೆ. ವಿಚಿತ್ರವೆಂದರೆ ಕಳೆದ ವಾರವಷ್ಟೇ ಇದೇ ಬ್ಯಾಂಕಿನ, ಇದೇ ಬ್ರಾಂಚಿನ ಅನುಮಾನಾಸ್ಪದ ಅಥವಾ ವಂಚನೆಯ ವಹಿವಾಟು ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ಶತಕೋಟ್ಯಾಧಿಪತಿ ನೀರವ್‌ ಮೋದಿಗೂ ಈ ಹಗರಣಕ್ಕೂ ಸಂಬಂಧವಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಹಗರಣದ ಜತೆಯಲ್ಲೇ 11,400 ಕೋಟಿ ವಂಚನೆಯ ಪ್ರಕರಣದ ಬಗ್ಗೆಯೂ ತನಿಖೆ ನಡೆಯುವ ಸಂಭವವಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೋಸದ ಹಗರಣದ ಪರಿಣಾಮದಿಂದಾಗಿ ಬುಧವಾರ ಷೇರುಪೇಟೆಯಲ್ಲಿ ಪಿಎನ್‌ಬಿ ಷೇರುಗಳು ಬಹುದೊಡ್ಡ ಹೊಡೆತ ತಿಂದಿವೆ. ಶೇ.10 ರಷ್ಟು ಕುಸಿತವಾಗಿದ್ದು, ಒಂದೇ ದಿನ 3000 ಕೋಟಿ ರೂ.ನಷ್ಟು ನಷ್ಟವಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ಇತರೆ ಬ್ಯಾಂಕುಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಜತೆಗೆ, ಈ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ತಕ್ಷಣದಲ್ಲೇ ಸಂಪೂರ್ಣ ಮಾಹಿತಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದೂ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ವಿವಾದ
ಹಗರಣದ ನೀರವ್‌ ಮೋದಿಯಿಂದ ಶುರುವಾಗಿದೆ ಎಂದುಕೊಂಡರೂ, ಇದರ ಜತೆಯಲ್ಲೇ ಮುಂಬೈನ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಬ್ರಾಂಚ್‌ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ, ಅಲಹಾಬಾದ್‌ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕಿಗೆ ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಕೊಟ್ಟು ವಿದೇಶದಲ್ಲಿ ಕೆಲವು ಆಮದುದಾರರಿಗೆ ಮುಂಗಡವಾಗಿ ಅಲ್ಪಾವಧಿ ಸಾಲ(ಬೈಯರ್‌ ಕ್ರೆಡಿಟ್‌) ನೀಡಲು ಹೇಳಿತ್ತು. ಈ ಬಗ್ಗೆ ಪಿಎನ್‌ಬಿ ಏನನ್ನೂ ಹೇಳದಿದ್ದರೂ, ಈ ಮೂರು ಬ್ಯಾಂಕುಗಳೇ ಎಲ್‌ಒಯುನಡಿಯಲ್ಲಿ ಸಾಲ ನೀಡಿದ್ದಾಗಿ ಹೇಳಿಕೊಂಡಿವೆ. ಹೀಗಾಗಿ ವಿದೇಶದಲ್ಲಿರುವ ಬ್ರಾಂಚ್‌ಗಳ ಮೇಲೂ ನಿಗಾ ಇಡುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.

ಯಾರ ಮೇಲೆ ಅನುಮಾನ?
ಇಡೀ ಹಗರಣದಲ್ಲಿ ಪ್ರಮುಖವಾಗಿ ಕೆಲವೊಂದು ಆಭರಣ ಮಳಿಗೆಗಳ ಹೆಸರೇ ಕೇಳಿಬರುತ್ತಿದೆ. ಗೀತಾಂಜಲಿ, ಗಿನ್ನಿ ಮತ್ತು ನಕ್ಷತ್ರ ಜ್ಯುವೆಲ್ಲರ್‌ಗಳೇ ಇದರಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಿಬಿಐ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳ ಗಮನಕ್ಕೂ ತರಲಾಗಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಈ ಆಭರಣ ಅಂಗಡಿಗಳಿಂದ ಪ್ರತಿಕ್ರಿಯೆಗೆ ಪ್ರಯತ್ನಿಸಲಾಯಿತಾದರೂ ಅತ್ತ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲವೆಂದು ಪಿಟಿಐ ವರದಿ ಮಾಡಿದೆ.

ವಂಚನೆಯ ಆಚೀಚೆ…
1. ಯಾರು ವಂಚಕರು?

ಹಗರಣವನ್ನು ಬಹಿರಂಗ ಮಾಡಿರುವುದು ಸ್ವತಃ ಪಿಎನ್‌ಬಿ ಬ್ಯಾಂಕು. ವಂಚಕರು ಯಾರು ಎಂದು ಹೇಳದೇ ಹೋದರು, ಬ್ಯಾಂಕಿನ ಒಳಗಿನವರೇ “ಆಯ್ದ ಖಾತಾದಾರರಿಗೆ, ಅವರ ಅನುಕೂಲಕ್ಕೆ ತಕ್ಕ ಹಾಗೆ’ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ವಿದೇಶದಲ್ಲಿರುವ ಗ್ರಾಹಕರಿಗೂ ಮುಂಚಿತವಾಗಿಯೇ ಹಣ ಒದಗಿಸಿದ್ದಾರೆ.

2.ಯಾವ ಕ್ರಮ?
ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿಯೇ ಬ್ಯಾಂಕು ಈ ಬಗ್ಗೆ ವರದಿ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ಮತ್ತು ಇತರೆ ತನಿಖಾ ತಂಡಗಳಿಗೂ ಮಾಹಿತಿ ನೀಡಿದೆ.

3. ವಂಚನೆಯ ಮೂಲ ಯಾವುದು?
ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ, ನೀರವ್‌ ಮೋದಿಯೇ ಈ ಹಗರಣದ ಹಿಂದೆ ಇರಬಹುದು ಎಂಬ ಅನುಮಾನಗಳಿವೆ. ಕಳೆದ ವಾರವಷ್ಟೇ ಈತನ ವಿರುದ್ಧ 282 ಕೋಟಿ ರೂ.ಗಳ ವಂಚನೆ ಸಂಬಂಧ ಎಫ್ಐಆರ್‌ ದಾಖಲಾಗಿತ್ತು.

4. ಅಡ್ಡ ಪರಿಣಾಮಗಳೇನಾದರೂ ಇವೆಯೇ?
ಬುಧವಾರವೇ ಪಿಎನ್‌ಬಿ ಷೇರುಗಳ ಮೌಲ್ಯ ಶೇ.8 ರಷ್ಟು ಕುಸಿತ ಕಂಡಿದೆ. ನಿಫ್ಟಿಯಲ್ಲೂ ಇದೇ ಒತ್ತಡವಿದೆ.

5. ಬೈಯರ್‌ ಕ್ರೆಡಿಟ್‌ ಎಂದರೇನು?
ವಿದೇಶಗಳಲ್ಲಿನ ಬ್ಯಾಂಕುಗಳು ಮತ್ತು ಇತರೆ ಆರ್ಥಿಕ ಸಂಸ್ಥೆಗಳು ಆಮದುದಾರರಿಗೆ ಅವರು ಆಮದು ಮಾಡಿಕೊಳ್ಳುವ ವಸ್ತುಗಳಿಗಾಗಿ ಅಲ್ಪಾವಧಿ ಸಾಲ ನೀಡುತ್ತವೆ. ಇದಕ್ಕೆ ಆಮದುದಾರರ ಬ್ಯಾಂಕುಗಳು ಒಂದು ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಕೊಟ್ಟರೆ ಸಾಕು. ಪಿಎನ್‌ಬಿ ನೀಡಿದ ಈ ಎಲ್‌ಒಯುನಡಿಯಲ್ಲೇ ಮೂರು ಬ್ಯಾಂಕುಗಳು ಸಾಲ ನೀಡಿವೆ.

6. ನೀರವ್‌ ಮೋದಿ ಯಾರು?
ಇವರು ಪ್ರಸಿದ್ಧ ವೈಭೋವಪೇತ ಆಭರಣಗಳ ವಿನ್ಯಾಸಗಾರರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಪ್ರಸಿದ್ಧಿಯಾಗಿದ್ದಾರೆ. 2017ರ ಫೋರ್ಬ್ಸ್ ಪಟ್ಟಿನಂತೆ ಭಾರತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇವರದ್ದು 57ನೇ ಸ್ಥಾನ. ದೇಶ, ವಿದೇಶಗಳಲ್ಲೂ ನೀರವ್‌ ಮೋದಿಯವರದ್ದು ಡೈಮಂಡ್‌ ಆಭರಣಗಳ ರಿಟೈಲ್‌ ಸ್ಟೋರ್‌ಗಳಿವೆ. ಅಂದಹಾಗೆ ಇವರ ಕಂಪನಿಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಬ್ರಾಂಡ್‌ ಅಂಬಾಸಿಡರ್‌.

ಪ್ರಕರಣದ ಹಿನ್ನೆಲೆ
ಈ ಹಗರಣದ ರೂಪ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ಪಿಎನ್‌ಬಿ ಸಿಲುಕಿಕೊಂಡಿದೆ. ಕಳೆದ ವಾರ ವಜ್ರಾಭರಣ ಉದ್ಯಮಿ ಹಾಗೂ ದೇಶದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ನೀರವ್‌ ಮೋದಿ 282 ಕೋಟಿ ರೂ. ವಂಚನೆ ಮಾಡಿದ್ದ ಬಗ್ಗೆ ಎಫ್ಐಆರ್‌ ದಾಖಲಾಗಿತ್ತು. ಫೆಬ್ರವರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಸ್ಥಳಗಳಲ್ಲಿ ಸಿಬಿಐ ಶೋಧವನ್ನೂ ನಡೆಸಿತ್ತು. ಮೋದಿ ಮನೆ ಹಾಗೂ ಡೈಮಂಡ್‌ ಆರ್‌ ಅಸ್‌, ಆತನ ಸೋದರ ನಿಶಾಲ್‌, ಪತ್ನಿ ಆಮಿ ಮತ್ತು ಮೆಹುಲ್‌ ಚಿನುಭಾಯಿ ಚೋಕ್ಸಿ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಲಾಗಿತ್ತು. ಇವರ ಹೊರತಾಗಿಯೂ ಇಬ್ಬರು ಪಿಎನ್‌ಬಿ ಅಧಿಕಾರಿಗಳೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದರು. ಗೋಕುಲನಾಥ್‌ ಶೆಟ್ಟಿ ಮತ್ತು ಮನೋಜ್‌ ಕಾರಟ್‌ ವಿರುದ್ಧವೂ ಎಫ್ಐಆರ್‌ ದಾಖಲಿಸಲಾಗಿತ್ತು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.