ಪ.ಬಂ. ಸಿಎಂ ಫೋಟೋ ತಿರುಚಿದ ಪ್ರಕರಣ: ಕಾರ್ಯಕರ್ತೆ ಸೆರೆ ಸ್ವೇಚ್ಛಾಚಾರದ್ದು: SC
Team Udayavani, May 15, 2019, 11:52 AM IST
ಹೊಸದಿಲ್ಲಿ : ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಿರುಚಲಾದ ಚಿತ್ರವನ್ನು ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಬಿಜೆಪಿ ಯೂತ್ ವಿಂಗ್ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಪಶ್ಚಿಮ ಬಂಗಾಲ ಪೊಲೀಸರು ಬಂಧಿಸಿರುವುದು ಮೇಲ್ನೋಟಕ್ಕೇ ಕಂಡು ಬರುವಂತೆ ಸ್ವೇಚ್ಚಾಚಾರದ ಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ.
ಬೇಷರತ್ ಲಿಖೀತ ಕ್ಷಮೆಯಾಚನೆ ಸಲ್ಲಿಸಿದುದನ್ನು ಅನುಸರಿಸಿ ಪ್ರಿಯಾಂಕಾ ಶರ್ಮಾ ಜಾಮೀನು ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿನ್ನೆ ಮಂಗಳವಾರ ಆದೇಶಿಸಿತ್ತು. ಆದರೂ ಆಕೆಯನ್ನು ಪ.ಬಂಗಾಲ ಪೊಲೀಸರು ಜೈಲಿನಿಂದ ಬಿಡುಗಡೆ ಮಾಡಿಲ್ಲ ಎಂದು ಪ್ರಿಯಾಂಕಾ ಅವರ ಸಹೋದರ ರಾಜೀವ್ ಶರ್ಮಾ ಅವರ ವಕೀಲರು ಕೋರ್ಟಿಗೆ ತಿಳಿಸಿದರು.
ಇದರಿಂದ ಜಸ್ಟಿಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು ಪ.ಬಂಗಾಲ ಸರಕಾರದ ವಿರುದ್ಧ ಗರಂ ಆಯಿತು.
ಸರಕಾರಕ್ಕೆ ಕೋರ್ಟ್ ನಿಂದನೆ ಕ್ರಮದ ಎಚ್ಚರಿಕೆಯನ್ನು ಪೀಠ ನೀಡಿದಾಗ, ಸ್ವಲ್ಪ ಹೊತ್ತಿನ ಬಳಿಕ ಸರಕಾರಿ ವಕೀಲರು ಪ್ರಿಯಾಂಕಾ ರನ್ನು ಇಂದು ಬುಧವಾರ ಬೆಳಿಗ್ಗೆ 9.40ಕ್ಕೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟಿಗೆ ದೃಢೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್