ಮ.ಪ್ರ.ಸಿಎಂ ಪುತ್ರನ ಮಳಿಗೆಗೆ ಬಿಗಿ ಭದ್ರತೆ; ಬಿಹಾರದಲ್ಲಿ ಬಾಲಕಿ ಸಾವು
Team Udayavani, Sep 10, 2018, 3:23 PM IST
ಭೋಪಾಲ್ : ಭಾರತ್ ಬಂದ್ ಪ್ರಯುಕ್ತ ಮಧ್ಯಪ್ರದೇಶದಲ್ಲಿ ಇಂದು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು; ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರನ ಹೂವಿನ ಮಳಿಗೆ ಬಿಗಿ ಭದ್ರತೆಯ ಬಲದಲ್ಲಿ ತೆರೆದುಕೊಂಡಿತ್ತು.
“ನಾವು ಮುಖ್ಯಮಂತ್ರಿಗಳ ಮಗನ ಹೂವಿನ ಮಳಿಗೆಗೆ ಭದ್ರತೆ ನೀಡಲು ಇಲ್ಲಿ ನಿಂತಿಲ್ಲ; ಕಾನೂನು ಮತ್ತು ಶಿಸ್ತನ್ನು ಒಟ್ಟಾರೆಯಾಗಿ ಕಾಪಿಡುವ ಸಲುವಾಗಿ ಇಲ್ಲಿಯ ಸಮಗ್ರ ಪ್ರದೇಶದಲ್ಲಿ ನಿಂತಿದ್ದೇವೆ’ ಎಂದು ಪೊಲೀಸರು ಹೇಳಿದರು.
ಬಾಲಕಿ ಸಾವು : ಬಿಹಾರದಲ್ಲಿ ಪ್ರತಿಭಟನಕಾರರಿಂದ ವಾಹನವೊಂದು ತಡೆಯಲ್ಪಟ್ಟ ಕಾರಣ ತ್ವರಿತವಾಗಿ ಆಸ್ಪತ್ರೆಗೆ ದಾಖಲಾಗಬೇಕಿದ್ದ ವಾಹನದಲ್ಲಿದ್ದ ಎರಡು ವರ್ಷ ಪ್ರಾಯದ ಬಾಲಕಿ ಕೊನೆಯುಸಿರೆಳೆದ ಘಟನೆ ನಡೆಯಿತು.
ದಿಲ್ಲಿಯ ರಾಮ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಳುವ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗಿ ನಿಂತಿವೆ ಎಂದು ಹೇಳಿಕೊಂಡರು. ಆದರೆ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಗೈರಾಗಿರುವುದು ಎದ್ದು ಕಾಣುತ್ತಿತ್ತು.
ವಿರೋಧ ಪಕ್ಷಗಳ ಭಾರತ್ ಬಂದ್ ಬಗ್ಗೆ ಬಿಜೆಪಿ ನಾಯಕ ಸಚಿವ ರವಿ ಶಂಕರ್ ಪ್ರಸಾದ್ “ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ ನಿಜ. ಆದರೆ ಇವತ್ತು ಏನಾಗುತ್ತಿದೆ. ಪೆಟ್ರೋಲ್ ಪಂಪ್ಗ್ಳನ್ನು ಬಸ್ಸುಗಳನ್ನು ಸುಟ್ಟು ಹಾಕಲಾಗುತ್ತಿದೆ; ಜನರ ಜೀವಕ್ಕೆ ಅಪಾಯ ಉಂಟುಮಾಡಲಾಗುತ್ತಿದೆ; ಭಾರತ್ ಬಂದ್ ವಿಫಲವಾಗಿದೆ’ ಎಂದು ಹೇಳಿದರು.
ವಿವಾದಾತ್ಮಕ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಭಾರತ್ ಬಂದ್ ನಲ್ಲಿ ಭಾಗವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
MUST WATCH
ಹೊಸ ಸೇರ್ಪಡೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
Rural Life: ಗ್ರಾಮೀಣ ಬದುಕಿನ ಮೆಲುಕು