ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?
Team Udayavani, Jun 16, 2021, 9:55 PM IST
ಮಧ್ಯ ಪ್ರದೇಶ : ವಿಶ್ವದ ಅತೀ ದುಬಾರಿ ಹಾಗೂ ವಿರಳ ಮಿಯಾಜಾಕಿ ಮಾವಿನ ಕಾಯಿಗಳನ್ನು ಮಧ್ಯ ಪ್ರದೇಶದ ಭೂಪಾಲ್ ನ ದಂಪತಿಯೋರ್ವರು ಬೆಳೆದು ದೇಶದ ಗಮನ ಸೆಳೆದಿದ್ದಾರೆ.
ಸಂಕಲ್ಪ ಹಾಗೂ ರಾಣಿ ಪರಿಹಾರ್ ದಂಪತಿ ತಮ್ಮ ತೋಟದಲ್ಲಿ ಮಿಯಾಜಾಕಿ ತಳಿಯ ಅಪರೂಪದ ಮಾವಿನ ಕಾಯಿ ಬೆಳೆದಿದ್ದಾರೆ. ಇವರು ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ತೋಟದಲ್ಲಿ ಎರಡು ಸಸಿಗಳನ್ನು ನೆಟ್ಟಿದ್ದರು. ಅವುಗಳು ಇದೀಗ ಫಲ ಕೊಡುತ್ತಿದ್ದು, ಕಳ್ಳರಿಂದ ರಕ್ಷಣೆ ಮಾಡುವುದಕ್ಕಾಗಿ ಆರು ಜನ ಕಾವಲುಗಾರರನ್ನು ಹಾಗೂ ನಾಲ್ಕು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ.
ಒಂದು ಕೆ.ಜಿಗೆ 2.70 ಲಕ್ಷ :
ಮಿಯಾಜಾಕಿ ಮೂಲತಃ ಜಪಾನ ಮೂಲದ ಮಾವಿನ ತಳಿ. ಭಾರತದಲ್ಲಿ ಈ ಹಣ್ಣಿನ ‘ಸೂರ್ಯನ ಮೊಟ್ಟೆ’ ಎಂದು ಕರೆಯುತ್ತಾರೆ. ಮೊದಲೆ ಹೇಳಿದಂತೆ ಇದು ವಿರಳ ಹಾಗೂ ಅತೀ ದುಬಾರಿ ಮಾವು. ಕಳೆದ ವರ್ಷ ಈ ಹಣ್ಣು ವಿಶ್ವದ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿದ್ದವು.
ಖುಷಿಯಲ್ಲಿ ರೈತ ದಂಪತಿ :
ರೈತ ಸಂಕಲ್ಪ ಅವರು ಚೆನ್ನೈನಲ್ಲಿ ಈ ಮಾವಿನ ಸಸಿಗಳನ್ನು ತಂದು ತಮ್ಮ ಹೊಲದಲ್ಲಿ ನೆಟ್ಟಿದ್ದರು. ಮೊದಲಿಗೆ ಈ ಮಾವಿನ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಕಳೆದ ವರ್ಷ ಗಿಡದಲ್ಲಿ ಕಾಯಿ ಬಿಟ್ಟಾಗ ಆಶ್ಚರ್ಯಪಟ್ಟಿದ್ದರು. ಈ ವಿಭಿನ್ನ ತಳಿಯ ಮಾವಿನ ಕಾಯಿಯ ಹೆಸರು ಕೂಡ ಗೊತ್ತಿರಲಿಲ್ಲ. ತಾವೇ ದಿಮಿನಿ ಎಂದು ನಾಮಕರಣ ಮಾಡಿದ್ದರು. ನಂತರ ಈ ಬಗ್ಗೆ ಸಂಶೋಧನೆ ನಡೆಸಿ ಇದರ ನಿಜವಾದ ಹೆಸರು ಕಂಡುಕೊಂಡರು.
ಈ ಬಗ್ಗೆ ಮಾತನಾಡುವ ಸಂಕಲ್ಪ, ಮೊದಲಿಗೆ ಈ ಮಾವಿನ ಬಗ್ಗೆ ಗೊತ್ತಿರಲಿಲ್ಲ. ಆದರೆ, ಇದೀಗ ಇದು ಅಪರೂಪದ ತಳಿ ಎಂದು ಗೊತ್ತಾಗಿದೆ. ಕಳೆದ ವರ್ಷ ಸ್ಥಳೀಯರು ನಮ್ಮ ತೋಟಕ್ಕೆ ನುಗ್ಗಿ ಈ ಮಾವಿನ ಕಾಯಿ ಕಳ್ಳತನ ಮಾಡಿದ್ದರು. ಆದ್ದರಿಂದ ಈ ಬಾರಿ ಕಾವಲುಗಾರರನ್ನು ನೇಮಿಸಿದ್ದೇನೆ. ನಾವು ಹೇಳಿದ ಬೆಲೆಗೆ ಈ ಕಾಯಿಗಳನ್ನು ಕೊಂಡುಕೊಳ್ಳಲು ಹಲವರು ಮುಂದೆ ಬಂದಿದ್ದಾರೆ. ನಾವು ಈ ಹಣ್ಣುಗಳಿಂದ ಮತ್ತಷ್ಟು ಸಸಿಗಳನ್ನು ಮಾಡುವ ಉದ್ದೇಶ ಹೊಂದಿದ್ದು, ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.
ಇನ್ನು ಈ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಧ್ಯಪ್ರದೇಶ ತೋಟಗಾರಿಕೆ ವಿಭಾಗದ ಜಂಟಿ ನಿರ್ದೇಶಕ ಆರ್.ಎಸ್., “ಇದು ದುಬಾರಿ ಹಣ್ಣ. ಏಕೆಂದರೆ ಅದರ ಉತ್ಪಾದನೆಯು ತುಂಬಾ ಕಡಿಮೆ. ಈ ಹಣ್ಣಿನ ರುಚಿ ತುಂಬಾ ಸಿಹಿಯಾಗಿರುತ್ತದೆ. ಇದು ನೋಡಲು ತುಂಬಾ ವಿಭಿನ್ನವಾಗಿ ಕಾಣುತ್ತದೆ. ವಿದೇಶದಲ್ಲಿ ಜನರು ಈ ಮಾವಿನಹಣ್ಣನ್ನು ಉಡುಗೊರೆಯಾಗಿ ನೀಡುತ್ತಾರೆ. ” ಈ ಹಣ್ಣನ್ನು ರೈತರಲ್ಲಿ ಪ್ರಚಾರ ಮಾಡುವ ಮೊದಲು ಮತ್ತೊಮ್ಮೆ ಪರಿಶೀಲಿಸುತ್ತೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್