ಮುಂಬೈ ಮಹಾಮಳೆಗೆ ಕೊಚ್ಚಿಹೋದ ಖ್ಯಾತ ವೈದ್ಯ ಅಮರಾಪುರ್ಕರ್!
Team Udayavani, Aug 30, 2017, 4:53 PM IST
ಮುಂಬೈ: ಮಂಗಳವಾರ ಮುಂಬೈಯಲ್ಲಿ ಸುರಿದ ಮಹಾಮಳೆಗೆ ಪ್ರಸಿದ್ಧ ವೈದ್ಯ ದೀಪಕ್ ಅಮರಾಪುರ್ಕರ್ ಅವರು ಕೊಚ್ಚಿಹೋದ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಭಾರೀ ಮಳೆಯಿಂದಾಗಿ ರೈಲು, ವಿಮಾನ, ವಾಹನ ಸಂಚಾರ ಸ್ತಬ್ಧಗೊಂಡು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಬಾಂಬೆ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಆಗಿದ್ದ ಡಾ.ಅಮರಾಪುರ್ಕರ್ ಅವರು ಮಂಗಳವಾರ ಸಂಜೆ ತನ್ನನ್ನು ಮನೆಗೆ ಬಿಡುವಂತೆ ಡ್ರೈವರ್ ಬಳಿ ಹೇಳಿದ್ದರು. ಅದರಂತೆ ಆತ ಎಲ್ಫಿನ್ ಸ್ಟನ್ ರಸ್ತೆ ಸಮೀಪ ಇರುವ ಮನೆ ಬಳಿ ಬಿಟ್ಟಿದ್ದ. ಪ್ರವಾಹದಿಂದ ತುಂಬಿ ಹೋಗಿದ್ದ ರಸ್ತೆಯ ಮ್ಯಾನ್ ಹೋಲ್ ಗೆ ಡಾ.ಅಮರಾಪುರ್ಕರ್ ಅವರು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಮ್ಯಾನ್ ಹೋಲ್ ನಲ್ಲಿ ಅಗ್ನಿಶಾಮಕ ದಳ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗಳು ಶೋಧಕಾರ್ಯ ನಡೆಸಿದ್ದರು. ಆದರೆ ಯಾವುದೇ ಮೃತದೇಹ ಸಿಕ್ಕಿಲ್ಲ ಎಂದು ದಾದರ್ ಅಧಿಕಾರಿ ಸುನಿಲ್ ದೇಶ್ ಮುಖ್ ತಿಳಿಸಿದ್ದಾರೆ. ವೈದ್ಯರು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ