ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ಯುವತಿ
Team Udayavani, Nov 2, 2020, 10:41 PM IST
ಸಾಂದರ್ಭಿಕ ಚಿತ್ರ
ಮುಂಬೈ: 19 ವರ್ಷದ ದಿಟ್ಟೆಯೊಬ್ಬಳು ಚಲಿಸುತ್ತಿದ್ದ ಬೆಸ್ಟ್ ಬಸ್ಸಿನಿಂದ ಜಿಗಿದು, ಪೊಲೀಸರ ಸಹಾಯದಿಂದ ಸರಗಳ್ಳನನ್ನು ಹಿಡಿದುಕೊಟ್ಟ ರೋಮಾಂಚಕ ಘಟನೆ ಚಾಕಲಾ ಸಮೀಪ ನಡೆದಿದೆ.
ಟೆಲಿಕಾರ್ ವೃತ್ತಿಯ ಸಂಜನಾ ಬಾಗುಲ್ ಈ ಸಾಹಸ ಮೆರೆದಿದ್ದಾಳೆ. ಬೆಳಗ್ಗೆ 10ರ ಸುಮಾರಿಗೆ ಅಂಧೇರಿ- ಕುರ್ಲಾ ಮಾರ್ಗವಾಗಿ ಬೆಸ್ಟ್ ಬಸ್ಸಿನಲ್ಲಿ ಕಚೇರಿಗೆ ತೆರಳುತ್ತಿದ್ದಳು. ಜನಜಂಗುಳಿಯಿಂದ ತುಂಬಿದ್ದ ಬಸ್ಸಿನಲ್ಲಿ 40 ಸಾವಿರ ರೂ. ಮೌಲ್ಯದ ಈಕೆಯ ಸರವನ್ನು ಕಳ್ಳನೊಬ್ಬ ಕದ್ದಿದ್ದಾನೆ. ಏನೋ ಆಗಿದೆ ಎಂದು ಸಂಶಯಗೊಂಡ ಸಂಜನಾಗೆ ಕೊರಳನ್ನು ಮುಟ್ಟಿ ನೋಡಿಕೊಂಡಾಗ ಸರ ಕಾಣೆಯಾಗಿರುವ ಸಂಗತಿ ಮನದಟ್ಟಾಗಿದೆ. ಕೂಡಲೇ ಬ್ಯಾಗಿನಲ್ಲೆಲ್ಲ ಹುಡುಕಿದ್ದಾಳೆ. ಇದೇ ವೇಳೆ ತನ್ನ ಪಕ್ಕ ನಿಂತಿದ್ದ ಅನುಮಾನಾಸ್ಪದ ವ್ಯಕ್ತಿ, ಬಸ್ಸಿನಿಂದ ಇಳಿದು ಓಡುತ್ತಿರುವುದನ್ನು ಗಮನಿಸಿದ್ದಾಳೆ. ಬಸ್ಸು ಚಾಕಲಾ ತಿರುವು ಬಳಿ ನಿಧಾನಕ್ಕೆ ಚಲಿಸುತ್ತಿದ್ದಾಗ ಸಂಜನಾ ಜಿಗಿದು, ಕಳ್ಳನನ್ನು ಬೆನ್ನಟ್ಟಿದ್ದಾಳೆ.
ಈ ವೇಳೆ ಚಾಕಲಾ ಸಿಗ್ನಲ್ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್, ಕಳ್ಳನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಸರಗಳ್ಳ ಮುಕೇಶ್ ಗಾಯಕ್ವಾಡ್ನನ್ನು (34) ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ