ವಿಘ್ನ ವಿನಾಶಕನ ಹೆಸರಲ್ಲಿ 264 ಕೋಟಿ ರೂ.ಗಳ ವಿಮೆ
Team Udayavani, Sep 16, 2018, 10:39 AM IST
ಮುಂಬಯಿ: ಮಾಯಾನಗರಿ ಮುಂಬಯಿಯಲ್ಲಿ ಗಣೇಶೋತ್ಸವಕ್ಕೆಂದು ಖರ್ಚು ಮಾಡುವ ಮೊತ್ತ ಒಂದೆರಡು ಕೋಟಿಯಲ್ಲ, ನೂರಾರು ಕೋಟಿ ರೂಪಾಯಿ! ಹೌದು. ಇಲ್ಲಿ ಇದೊಂದು ರೀತಿಯ ಪ್ರತಿಷ್ಠೆಯ ಸ್ಪರ್ಧೆ ಇದ್ದಂತೆ. ಪ್ರತಿವರ್ಷದಂತೆ ಈ ಬಾರಿಯೂ ಇಲ್ಲಿನ ಶ್ರೀಮಂತ ಗಣೇಶ ಮಂಡಳಿಗಳಲ್ಲಿ ಒಂದಾದ ಜಿಎಸ್ಬಿ ಸೇವಾ ಮಂಡಳಿ ತಾನು ಪ್ರತಿಷ್ಠಾಪಿಸಿದ ಗಣೇಶನ ಹೆಸರಲ್ಲಿ ಬರೋಬ್ಬರಿ 264.8 ಕೋಟಿ ರೂ. ಮೊತ್ತದ ವಿಮೆ ಮಾಡಿಸಿ ಅಚ್ಚರಿ ಮೂಡಿಸಿದೆ.
ಆದರೆ ಈ ಸೇವಾ ಮಂಡಳಿಗೆ ಇದೇನೂ ಹೊಸದಲ್ಲ. 2016ರಲ್ಲಿ 300 ಕೋಟಿ ರೂ. ವಿಮೆ ಮಾಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಅಲ್ಲದೆ, ಹೊಸ ದಾಖಲೆಯನ್ನೂ ನಿರ್ಮಿಸಿತ್ತು. ಆದರೆ, ಕಳೆದ ವರ್ಷ ವಿಮೆಯ ಮೊತ್ತ 264.3 ಕೋಟಿ ರೂ.ಗೆ ಸೀಮಿತವಾಗಿದೆ. ಈ ವರ್ಷ ಕೊಂಚ ಹೆಚ್ಚಿನ ವಿಮೆ ಮಾಡಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇವಾ ಮಂಡಳಿ ಸದಸ್ಯ ಆರ್.ಜಿ.ಭಟ್, “”ಈ ವಿಮೆಯಲ್ಲಿ ಅನೇಕ ಅಂಶಗಳು ಸೇರಿಕೊಂಡಿರುತ್ತವೆ. ಹೆಚ್ಚು ಕಡಿಮೆ 19 ಕೋಟಿ ರೂ.ನಷ್ಟು ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದಿನ ಮೇಲಿನದ್ದಾಗಿರುತ್ತವೆ. ವಿದ್ಯುತ್ ಅವಘಡ, ಭೂಕಂಪಗಳಿಂದಾಗುವ ಹಾನಿಯನ್ನು ಭರಿಸಿಕೊಳ್ಳುವ ಹಿನ್ನೆಲೆಯಲ್ಲೂ ವಿಮೆ ಮಾಡಿಸಲಾಗಿರುತ್ತದೆ. ಅಲ್ಲದೆ, 2,244 ಕೆಲಸಗಾರರು, ಸದಸ್ಯರು ಹಾಗೂ ಸ್ವಯಂಸೇವಕರಿಗಾಗಿ ತಲಾ 10 ಲಕ್ಷ ರೂ.ನ ಅಪಘಾತ ವಿಮೆಯೂ ಒಳಗೊಂಡಿರುತ್ತದೆ” ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ