ಗುಜರಾತಿ ಖಾದ್ಯ ಪ್ರೀತಿಯಿಂದಾಗಿ ನಾನೀಗ ಧಡಿಯ: ರಾಹುಲ್
Team Udayavani, Dec 5, 2017, 3:53 PM IST
ಅಂಜಾರ್ : “ನನ್ನ ಮನೆಯ ಅಡುಗೆ ಕೋಣೆ ಗುಜರಾತಿ ಖಾದ್ಯಗಳಿಂದ ತುಂಬಿ ಹೋಗಿದೆ; ಸ್ವಾದಿಷ್ಟ ಗುಜರಾತಿ ಖಾದ್ಯಗಳ ಮೇಲಿನ ಪ್ರೀತಿಯಿಂದಾಗಿ ನಾನೀಗ ಧಡಿಯನಾಗಿದ್ದೇನೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
“ನಿನ್ನೆಯುಷ್ಟೇ ನನ್ನ ತಂಗಿ ನನ್ನ ಮನೆಗೆ ಬಂದಿದ್ದಳು. ನನ್ನ ಅಡುಗೆ ಕೋಣೆ ಗುಜರಾತಿ ಆಹಾರಗಳಿಂದ (ಖಕ್ರಾ ಗುಜರಾತಿ, ಅಚಾರ್ ಗುಜರಾತಿ, ಮೂಂಗ್ಫಾಲಿ ಗುಜರಾತಿ) ತುಂಬಿರುವುದನ್ನು ಆಕೆ ಕಂಡಳು. ನಿಮ್ಮ ಗುಜರಾತಿ ಆಹಾರ ನನ್ನನ್ನು ಸಂಪೂರ್ಣವಾಗಿ ಕೆಡಿಸಿದೆ. ನನ್ನ ದೇಹ ತೂಕ ಜಾಸ್ತಿಯಾಗಿದೆ; ನಾನೀಗ ಧಡಿಯನಾಗಿದ್ದೇನೆ’ ಎಂದು ರಾಹುಲ್ ಜನಸಮೂಹವನ್ನು ಉದ್ದೇಶಿಸಿ ಹೇಳಿದರು.
ಗುಜರಾತ್ ಅಭಿವೃದ್ಧಿಗೆ ಒತ್ತು ಕೊಡುವುದನ್ನು ಬಿಟ್ಟು ಕಾಂಗ್ರೆಸ್ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ದೃಷ್ಟಿ ನೆಟ್ಟಿದ್ದಾರೆ ಎಂದು ರಾಹುಲ್ ಕೋಪ ವ್ಯಕ್ತಪಡಿಸಿದರು.
“ನಿನ್ನೆಯಷ್ಟೇ ನಾನು ಮೋದೀ ಜೀ ಅವರು ಭಾಷಣ ಕೇಳಿದೆ. ಅವರ ಭಾಷಣದ ಶೇ.60ರಷ್ಟು ಭಾಗ ನನ್ನ ಮತ್ತು ಕಾಂಗ್ರೆಸ್ ಬಗ್ಗೆಯೇ ಇತ್ತು. ಈ ಚುನಾವಣೆ ನಿಜಕ್ಕೂ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಂಬಂಧಿಸಿದ್ದಲ್ಲ; ಬದಲಾಗಿ ಗುಜರಾತ್ ಮತ್ತು ಅದರ ಜನರ ಭವಿಷ್ಯಕ್ಕೆ ಸಂಬಂಧಿಸಿದೆ’ ಎಂದು ರಾಹುಲ್ ಹೇಳಿದರು.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಗುಜರಾತ್ಗೆ ರಾಹುಲ್ ಅವರು ತಮ್ಮ 7ನೇ ಭೇಟಿಯಲ್ಲೀಗ ವ್ಯಸ್ತರಾಗಿದ್ದಾರೆ. ಈ ಭೇಟಿಗಳಲ್ಲಿ ಅವರು ಗುಜರಾತ್ನ ಪ್ರಸಿದ್ಧ ಸೋಮನಾಥ ದೇವಾಲಯ ಸೇರಿದಂತೆ ಹಲವು ದೇಗುಲಗಳನ್ನು ಸಂದರ್ಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!