ನನ್ನ ತಾಯಿ ಸೋನಿಯಾ ಹೆಚ್ಚು ಭಾರತೀಯಳು : ಬೆನ್ನುತಟ್ಟಿಕೊಂಡ ರಾಗಾ
Team Udayavani, May 10, 2018, 11:56 AM IST
ಬೆಂಗಳೂರು : ‘ನಾನು ಕಂಡ ಅನೇಕ ಭಾರತೀಯರಲ್ಲಿ ನನ್ನ ತಾಯಿ, ಸೋನಿಯಾ ಗಾಂಧಿ, ಹೆಚ್ಚು ಭಾರತೀಯಳೆಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲ್ಲುವುದು ಖಚಿತ; ಆ ಬಗ್ಗೆ ಯಾರಿಗೂ ಸಂಶಯವೇ ಬೇಡ’ ಎಂದ ರಾಹುಲ್, ಈ ಚುನಾವಣೆಯು ಎರಡು ವಿಭಿನ್ನ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ಆರ್ಎಸ್ಎಸ್ ನಮ್ಮ ಸ್ಫೂರ್ತಿಯನ್ನು ಹೊಸಕಿ ಹಾಕಲು ಹವಣಿಸುತ್ತಿದೆ; ಆದರೆ ನಾವು ಅದರ ಬಲಿಪಶುಗಳಾಗೆವು’ ಎಂಬ ಎಚ್ಚರಿಕೆಯನ್ನು ನೀಡಿದರು.
‘ಕಾಂಗ್ರೆಸ್ ಪಕ್ಷ ಬೆಂಗಳೂರನ್ನು ಅಪಾರವಾಗಿ ಬೆಂಬಲಿಸಿದೆ; ಕಾಂಗ್ರೆಸ್ ಆಡಳಿತೆಯಲ್ಲಿ ಇಡಿಯ ದೇಶದಲ್ಲೇ ಅತ್ಯಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ರಾಜ್ಯವಾಗಿ ಕರ್ನಾಟಕ ನಂಬರ್ 1 ಸ್ಥಾನವನ್ನು ಪಡೆದಿದೆ. ಈ ಚುನಾವಣೆಯಲ್ಲಿ ಹೋರಾಟವು ನನ್ನ ಮತ್ತು ಪ್ರಧಾನಿ ನಡುವಿನ ಹೋರಾಟ ಅಲ್ಲ; ಬದಲು ಇದು ಜನರು ತಮ್ಮ ಬೇಕುಬೇಡಗಳನ್ನು ಗೌರವಿಸುವ ಚುನಾವಣೆಯಾಗಿದೆ’ ಎಂದು ರಾಹುಲ್ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಖಚಿತವಾದ ವಿದೇಶ ನೀತಿ ಎಂಬುದಿಲ್ಲ; ಹಾಗಾಗಿ ರಶ್ಯವು ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಸುವುದನ್ನು ನಾವು ಕಾಣುತ್ತಿದ್ದೇವೆ; ಮೋದಿ ಅವರು ಕಾರ್ಯಸೂಚಿಯೇ ಇಲ್ಲದೆ ಚೀನಕ್ಕೆ ಹೋಗಿದ್ದಾರೆ. ನಾವು ಹೇಳಿದ್ದೆವು: ಚೀನದೊಂದಿಗೆ ಡೋಕ್ಲಾಂ ಬಗ್ಗೆ ಖಡಕ್ ಆಗಿ ಮಾತನಾಡಿ ಎಂದು; ಆದರೆ ಅವರದನ್ನು ಮಾಡಲಿಲ್ಲ. ನಮ್ಮ ದೇಶದ ಮುಂದಿರುವ ಮುಖ್ಯ ಸವಾಲು ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು; ಆದರೆ ಪ್ರಧಾನಿ ಅದನ್ನು ಮಾಡುತ್ತಿಲ್ಲ ಎಂದು ರಾಹುಲ್ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ