ಕೋವಿಡ್ ಭಯ ಲೆಕ್ಕಿಸದ 87ರ ಡಾಕ್ಟರ್!
ಬರಿಗಾಲಿನಲ್ಲಿ ಸೈಕಲ್ ತುಳಿದು ಹಳ್ಳಿಹಳ್ಳಿಗಳಲ್ಲಿ ಬಡವರಿಗೆ ಚಿಕಿತ್ಸೆ
Team Udayavani, Oct 19, 2020, 6:15 AM IST
ನಾಗ್ಪುರ: ಕೋವಿಡ್ ಭಯದಿಂದಾಗಿ ವೃದ್ಧರ್ಯಾರೂ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ. ಆದರೆ, ಇಲ್ಲೊಬ್ಬರು 87 ವರ್ಷದ ನಿವೃತ್ತ ವೈದ್ಯ ಹಳ್ಳಿಹಳ್ಳಿಗಳಿಗೆ ಹೋಗಿ ಬಡವರಿಗೆ ಚಿಕಿತ್ಸೆ ನೀಡುತ್ತಾ ಮಾದರಿಯಾಗಿದ್ದಾರೆ. ಹೌದು, ಈ ವೈದ್ಯ ಸಾಹಸಿ ಹೆಸರು ಡಾ| ರಾಮಚಂದ್ರ ದಾಂಡೇಕರ್! ಕೊರೊನಾ ಆತಂಕವನ್ನು ಲೆಕ್ಕಿಸದೆ ಇವರು ಚಂದ್ರಾಪುರ ಜಿಲ್ಲೆಯ ಹಳ್ಳಿಯ ಮೂಲೆಗಳಿಗೆ ಬರಿಗಾಲಿನಲ್ಲಿ ಸೈಕಲ್ ತುಳಿದುಕೊಂಡು ಬಡಜನರಿಗೆ ವೈದ್ಯಕೀಯ ನೆರವು ನೀಡುತ್ತಾರೆ. ರಸ್ತೆ ಸರಿ ಇಲ್ಲದ ಪ್ರದೇಶಗಳಿಗೆ ಕೆಲವೊಮ್ಮೆ ಹತ್ತಾರು ಕಿ.ಮೀ. ನಡೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದೂ ಇದೆ.|
ಮುಲ್, ಪೊಂಭುರ್ನಾ, ಬಲ್ಲಾಶಾ ತಾಲೂಕಿನಲ್ಲಿ ಕಳೆದ 60 ವರ್ಷಗಳಿಂದ ಇವರ ಸೇವೆ ಚಿರಪರಿಚಿತ. “ಲಾಕ್ಡೌನ್ ಇದ್ದಾಗಲೂ ನಾನು ಬಡವರಿಗೆ ಆರೋಗ್ಯ ಸೇವೆ ನಿಲ್ಲಿಸಿರಲಿಲ್ಲ. ನಾನು ಈ ಕೆಲಸವನ್ನು ಸ್ವಪ್ರೇರಣೆಯಿಂದ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ, ಡಾ| ರಾಮಚಂದ್ರ.
ಸರಳ ಮನುಷ್ಯ: ಮೊಬೈಲ್ ಬಳಸದೆ, ವಾಚ್ ಕಟ್ಟದೆ, ಯಾವುದೇ ಶಿಫ್ಟ್ಗಳನ್ನು ಅಳವಡಿಸಿ ಕೊಳ್ಳದೆ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಔಷಧಗಳನ್ನೊಳಗೊಂಡ ಮೆಡಿಕಲ್ ಕಿಟ್ ಅನ್ನು ಸೈಕಲ್ ಹಿಂಭಾಗಕ್ಕೆ ಕಟ್ಟಿಕೊಂಡು ಮಾತ್ರವೇ ಇವರ ಬಳಿ ಇರುತ್ತದೆ.
ವೇಳಾಪಟ್ಟಿ ಇದೆ!: ಹೋಮಿಯೊಪಥಿ, ಆಯುರ್ವೇದ ಚಿಕಿತ್ಸೆ ನೀಡುವ ಇವರು, ಈ ವಾರ ಯಾವ ಹಳ್ಳಿಗೆ ಹೋಗಬೇಕು ಎಂಬುದರ ವೇಳಾಪಟ್ಟಿಯನ್ನು ಪ್ರತೀ ತಿಂಗಳ ಆರಂಭದಲ್ಲಿಯೇ ಸಿದ್ಧಪಡಿಸುತ್ತಾರೆ. ಪ್ರತೀ ಹಳ್ಳಿಯಲ್ಲೂ ಕನಿಷ್ಠ 20 ಮನೆಗಳಿಗೆ ಭೇಟಿ ನೀಡದೆ ಮನೆಗೆ ಮರಳುವುದಿಲ್ಲ.
ಹಳ್ಳಿಯಲ್ಲೇ ವಾಸ್ತವ್ಯ
“ಹಳ್ಳಿಗಳಿಂದ ಹೊರಡುವುದು ತಡವಾದರೆ, ಸೈಕಲ್ ಅನ್ನು ಅಲ್ಲಿಯೇ ಬಿಟ್ಟು, ಬಸ್ಸಿನಲ್ಲಿ ಮನೆಗೆ ಮರಳುತ್ತಾರೆ. ಕೆಲವೊಮ್ಮೆ ರೋಗಿಗಳ ಮನೆಯಲ್ಲಿ ಉಳಿದು, ಶುಶ್ರೂಷೆ ನೀಡಿದ್ದೂ ಇದೆ’ ಎನ್ನು ತ್ತಾರೆ,
ಡಾ| ರಾಮಚಂದ್ರ ಅವರ ಪುತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ