ನಾರಾಯಣ್ ರಾಣೆ ಆತ್ಮಚರಿತ್ರೆ ವಿವಾದ:ಆರೋಪಕ್ಕೆ ಶಿವಸೇನೆ ಪ್ರತಿದಾಳಿ
Team Udayavani, May 10, 2019, 2:09 PM IST
ಮುಂಬಯಿ: ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ನಾರಾಯಣ್ ರಾಣೆ ಅವರ ಆತ್ಮಚರಿತ್ರೆಯು ಬಿಡುಗಡೆ ಆಗುವುದಕ್ಕಿಂತ ಮೊದಲೇ ವಿವಾದಗಳಿಗೆ ಈಡಾಗಿದೆ.
ಪುಸ್ತಕದಲ್ಲಿ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ವಿರುದ್ಧ ರಾಣೆ ಅವರ ಭಾವೋದ್ರೇಕ ಆರೋಪಗಳ ಬಳಿಕ ಪಕ್ಷವು ಅವರ ವಿರುದ್ಧ ಪ್ರತಿದಾಳಿ ನಡೆಸಿದೆ. ಸಿಂಧುದುರ್ಗದಿಂದ ಶಿವಸೇನೆ ಶಾಸಕ ವೈಭವ್ ನಾೖಕ್ ಅವರು ರಾಣೆ ಅವರ ವಿರುದ್ಧ ವಾಗ್ಧಾಳಿ ನಡೆಸುತ್ತ, ಬೇರೆಯವರ ಮೇಲೆ ಆರೋಪಗಳನ್ನು ಹೊರೆಸುವುದೇ ರಾಣೆ ಅವರ ಪಾತ್ರವಾಗಿದೆ ಎಂದು ಕಿಡಿಕಾರಿದ್ದಾರೆ. ಶ್ರೀಧರ್ ನಾೖಕ್ ಹತ್ಯೆ ಪ್ರಕರಣ ಹಾಗೂ ಚೆಂಬೂರ್ ಮತ್ತು ಕೊಂಕಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಸ್ಪಷ್ಟೀಕರಣವನ್ನು ನೀಡುವರೇ? ಎಂದು ನಾೖಕ್ ಪ್ರಶ್ನಿಸಿದ್ದಾರೆ.
ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವುದೇ ರಾಣೆ ಅವರ ಕಾಯಕವಾಗಿದೆ. ಉದ್ಧವ್ ಠಾಕ್ರೆ ಮತ್ತು ಚಂದ್ರಕಾಂತ್ ಪಾಟೀಲ್ ವಿರುದ್ಧ ಹೇಳಿಕೆಗಳನ್ನು ನೀಡುವುದರಿಂದ ಅವರಿಗೆ ಯಾವುದೇ ಪ್ರಯೋಜನವಾಗಲ್ಲ ಎಂದವರು ಹೇಳಿದ್ದಾರೆ. ಉದ್ಧವ್ ಠಾಕ್ರೆ ಅವರು ಪಕ್ಷವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷವು ರಾಜ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ರಾಣೆ ಅವರನ್ನು ಶಿವಸೇನೆಯಿಂದ ಹೊರಹಾಕಿದ ಬಳಿಕ ಕೊಂಕಣದಿಂದ ಪಕ್ಷದ ಹೆಚ್ಚು ಶಾಸಕರು ಚುನಾಯಿತರಾಗಿದ್ದಾರೆ ಎಂದು ವೈಭವ್ ನಾೖಕ್ ಹೇಳಿದ್ದಾರೆ.
ತನ್ನನ್ನು ಪಕ್ಷದಿಂದ ಹೊರಹಾಕಲು ಉದ್ಧವ್ ಠಾಕ್ರೆ ಅವರು ತಮ್ಮ ಪತ್ನಿ ರಶ್ಮಿ ಜತೆಗೆ ಮಾತೋಶ್ರೀ (ಠಾಕ್ರೆ ಅವರ ನಿವಾಸ) ಬಿಟ್ಟು ಹೋಗುವ ಬೆದರಿಕೆ ಹಾಕಿದ್ದರು ಎಂದು ರಾಣೆ ಅವರು ತಮ್ಮ ಜೀವನಚರಿತ್ರೆ “ನೊ ಹೋಲ್ಡ್ಸ್ ಬೇರ್ಡ್ – ಮೈ ಇಯರ್ಸ್ ಇನ್ ಪಾಲಿಟಿಕ್ಸ್ನಲ್ಲಿ ಪ್ರತಿಪಾದಿಸಿದ್ದಾರೆ.
ರಾಣೆ ಅವರ ಸ್ವಭಾವ ಎಲ್ಲರಿಗೂ ಗೊತ್ತಿದೆ. ಇಂಥದರಲ್ಲಿ ಅವರ ಜೀವನಚರಿತ್ರೆಯನ್ನು ಯಾರು ಓದುತ್ತಾರೆ. ತನ್ನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಪಕ್ಷದ ಬಗ್ಗೆಯೇ ಅವರು ಕೆಟ್ಟ ಆರೋಪಗಳನ್ನು ಹೊರೆಸುತ್ತಿದ್ದಾರೆ. ರಾಣೆ ಅವರ ಈ ನಡೆಯಿಂದಲೇ ಅವರ ಸ್ವಭಾವ ಏನೆಂದು ಅರ್ಥವಾಗುತ್ತದೆ ಎಂದು ಶಿವಸೇನೆ ವಕ್ತಾರೆ ಮನೀಷಾ ಕಾಯಂದೆ ಹೇಳಿದ್ದಾರೆ.
ತನ್ನ ಜೀವನಚರಿತ್ರೆಯಿಂದ ಯುವ ಜನತೆಗೆ ಪ್ರೇರಣೆ ಸಿಗುತ್ತದೆ ಎಂದು ರಾಣೆ ಭಾವಿಸಿದ್ದಾರೆ. ಆದರೆ, ಕೇವಲ ಹುದ್ದೆಗಾಗಿ ಹಲವು ಪಕ್ಷಗಳನ್ನು ಸೇರಿಕೊಂಡಿರುವ ಅವಕಾಶವಾದಿ ನಾಯಕನಿಂದ ಯುವ ಜನರಿಗೆ ಕಲಿಯಲು ಸಿಗುವುದಾದರೂ ಏನು ?ಎಂದು ಮನೀಷಾ ಪ್ರಶ್ನಿಸಿದ್ದಾರೆ. ರಾಣೆ ಅವರ ಜೀವನಚರಿತ್ರೆಯನ್ನು ಮನೀಷಾ ಪ್ರಚಾರ ತಂತ್ರ ಎಂದು ಬಣ್ಣಿಸಿದ್ದಾರೆ.
ರಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಇನ್ನೂ ಹಲವಾರು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿ¨ªಾರೆ. ಬಿಜೆಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಾಯಕ ಚಂದ್ರಕಾಂತ್ ಪಾಟೀಲ್ ಅವರ ಕಾರಣದಿಂದಾಗಿ ತನಗೆ ಬಿಜೆಪಿಯಲ್ಲಿ ಸೇರಲು ಸಾಧ್ಯವಾಗಿಲ್ಲ ಎಂದು ರಾಣೆ ಆರೋಪಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಸ್ಥಿತಿಯಲ್ಲಿ ರಾಣೆ ಅವರು ತಮ್ಮ ಆತ್ಮಚರಿತ್ರೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ರಾಣೆ ಆರೋಪಗಳನ್ನು ತಿರಸ್ಕರಿಸಿದ ಮನೋಹರ್
ಶಿವಸೇನೆ ಹಿರಿಯ ನಾಯಕ ಮನೋಹರ್ ಜೋಶಿ ಕೂಡ ರಾಣೆ ಅವರ ಆರೋಪಗಳನ್ನು ಖಂಡಿಸಿದ್ದಾರೆ. ರಾಣೆಯನ್ನು ಪಕ್ಷದಿಂದ ಹೊರಹಾಕಲು ಉದ್ಧವ್ ಠಾಕ್ರೆ ಅವರು ಮಾತೋಶ್ರೀಯನ್ನು ತೊರೆಯುವ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಯಾರಿಗೆ ಸರಿಯಾದ ವಿದ್ಯೆ ಸಿಗುವುದಿಲ್ಲವೋ ಅವರು ಇಂತಹ ಆರೋಪಗಳನ್ನು ಮಾಡುತ್ತಾರೆ ಎಂದು ಜೋಶಿ ನುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ