ಆರ್ಥಿಕತೆ ಗುರಿ ಸಾಧಿಸಲು ಪ್ರತಿ ಜಿಲ್ಲೆಯ ಪಾತ್ರವೂ ಇದೆ
Team Udayavani, Nov 8, 2019, 1:40 AM IST
ಧರ್ಮಶಾಲಾ: 2025ರ ಒಳಗಾಗಿ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷಕೋಟಿ ಡಾಲರ್ಗೆ ಏರಿಸುವಲ್ಲಿ ಪ್ರತಿ ರಾಜ್ಯ, ಜಿಲ್ಲೆಯ ಪಾತ್ರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಲ್ಲಿ ಗುರುವಾರ ಆರಂಭವಾದ 2 ದಿನಗಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿ ರಾಜ್ಯ, ಪ್ರತಿ ಜಿಲ್ಲೆ ಹೂಡಿಕೆಗೆ ಅಗತ್ಯವಾಗಿರುವ ವಾತಾವರಣ ಹೊಂದಿದೆ. 2025ರ ಒಳಗಾಗಿ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷಕೋಟಿ ಡಾಲರ್ಗೆ ಏರಿಕೆ ಮಾಡುವಲ್ಲಿ ಇವುಗಳು ಪ್ರಧಾನ ಪಾತ್ರ ವಹಿಸಲಿವೆ ಎಂದು ಹೇಳಿದ್ದಾರೆ. ಹಿಂದಿನ ದಿನಗಳಂತೆ ಈಗ ಪರಿಸ್ಥಿತಿ ಇಲ್ಲ. ರಾಜ್ಯಗಳು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸ್ಪರ್ಧೆಗೆ ಇಳಿದಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.