ಅಪಹರಿಸಿ ರೂ. 3 ಲಕ್ಷಕ್ಕೆ ಬೇಡಿಕೆಯಿಟ್ಟ ವಿದ್ಯಾರ್ಥಿ!
Team Udayavani, Nov 19, 2019, 1:38 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೈದರಾಬಾದ್: ನಗರದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ, 7 ವರ್ಷದ ಅರ್ಜುನ್ ಎಂಬ ಬಾಲಕನನ್ನು ಅಪಹರಿಸಿ, ಆತನ ಬಿಡುಗಡೆಗೆ 3 ಲಕ್ಷ ರೂ. ಒತ್ತೆ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಪ್ರಕರಣವೊಂದು ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಸುಖಾಂತ್ಯಗೊಂಡಿದೆ.
ರವಿವಾರ, ಪಿಎಸ್ಆರ್ ಕಾಲನಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಡುತ್ತಿದ್ದ ಅರ್ಜುನ್ನ ಸ್ನೇಹ ಬೆಳೆಸಿದ್ದ ಅಪಹರಣಕಾರ, ಆತನನ್ನು ತನ್ನ ಮನೆಯಿರುವ ಆಮ್ಲಸ್ಗುಡ ಪ್ರಾಂತ್ಯದ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದ. ದೇಗುಲದ ಬಳಿಯಿಂದಲೇ ಅರ್ಜುನ್ ತಂದೆಗೆ ಕರೆ ಮಾಡಿ, ಅರ್ಜುನ್ ಬಿಡುಗಡೆಗೆ 3 ಲಕ್ಷ ಬೇಡಿಕೆಯಿಟ್ಟಿದ್ದ.
ಪೊಲೀಸರಿಗೆ ತಿಳಿಸಿದರೆ ಅರ್ಜುನ್ನನ್ನು ಕೊಲ್ಲುವುದಾಗಿ ಎಚ್ಚರಿಸಿದ್ದ. ಆದರೆ, ಅರ್ಜುನ್ ತಂದೆ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ದೂರು ದಾಖಲಾದ ಕೇವಲ ನಾಲ್ಕು ಗಂಟೆಗಳಲ್ಲೇ ಪೊಲೀಸರು ಅಪಹರಣಕಾರನ ಜಾಗ ಗುರುತು ಹಚ್ಚಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.