ಪುಲ್ವಾಮ ಉಗ್ರ ದಾಳಿಕೋರನಿಗೆ ನೆರವು ಪ್ರಮುಖ ವ್ಯಕ್ತಿಯ ಬಂಧನ


Team Udayavani, Feb 28, 2020, 9:20 PM IST

Pulwama-Attacker-28-2

ಪುಲ್ವಾಮ ಉಗ್ರ ದಾಳಿ ಸಂಭವಿಸಿ ಒಂದು ವರ್ಷದ ಬಳಿಕ ಈ ದಾಳಿಗೆ ಸಂಬಂಧಿಸಿದಂತೆ ಮೊದಲ ಬಂಧನವಾಗಿದೆ. ರಾಷ್ಟ್ರೀಯ ತನಿಖಾ ದಳವು ಇಂದು ಪುಲ್ವಾಮ ದಾಳಿಕೋರನಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಇಲ್ಲಿನ ಕಾಕಪೋರದ ಹಜಿಬಲ್ ನಿವಾಸಿ ಶಕೀರ್ ಬಶೀರ್ ಮ್ಯಾಗ್ರೇ ಎಂಬಾತನನ್ನು ಬಂಧಿಸಿದೆ.

ಪೀಠೋಪಕರಣಗಳ ಮಳಿಗೆಯ ಮಾಲಿಕನಾಗಿರುವ ಬಶೀರ್ ಪುಲ್ವಾಮ ದಾಳಿಕೋರ ಅದಿಲ್ ಅಹಮ್ಮದ್ ದಾರ್ ಗೆ ಆಶ್ರಯ ಮತ್ತು ಸ್ಪೋಟಕ ಸಾಗಾಟಕ್ಕೆ ನೆರವು ನೀಡಿದ್ದ ಆರೋಪವನ್ನು ಎದುರಿಸುತ್ತಿದ್ದಾನೆ.

ಈ ಮೂಲಕ ಕಳೆದ ವರ್ಷದ ಫೆಬ್ರವರಿ 14ರಂದು 40 ಸಿ.ಆರ್.ಪಿ.ಎಫ್. ಜವಾನರನ್ನು ಬಲಿಪಡೆದಿದ್ದ ಭೀಕರ ಉಗ್ರ ಸ್ಪೋಟ ದಾಳಿಗೆ ಸಂಬಂಧಿಸಿದಂತೆ ಎನ್.ಐ.ಎ. ಮೊದಲ ಬಂಧನವನ್ನು ಮಾಡಿದಂತಾಗಿದೆ.

ಪುಲ್ವಾಮ ದಾಳಿಕೋರ ಅದಿಲ್ ಅಹಮ್ಮದ್ ದಾರ್ ಗೆ ಬಶೀರ್ 2018ರ ಮಧ್ಯಭಾಗದಲ್ಲಿ ಪರಿಚಯವಾಗಿದ್ದ ಮತ್ತು ಮಹಮ್ಮದ್ ಉಮ್ಮರ್ ಫಾರೂಖ್ ಎಂಬ ಪಾಕಿಸ್ಥಾನದ ಉಗ್ರ ಈತನಿಗೆ ಅದಿಲ್ ನನ್ನು ಪರಿಚಯಿಸಿದ್ದ. ಮತ್ತು ಆ ಬಳಿಕ ಬಶೀರ್ ಹೊರಜಗತ್ತಿನಲ್ಲಿದ್ದುಕೊಂಡೇ ಜೈಶ್ ಉಗ್ರರಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಶಕೀರ್ ಬಶೀರ್ ಪುಲ್ವಾಮ ದಾಳಿಕೋರ ಅದಿಲ್ ದಾರ್ ಸೇರಿದಂತೆ ಕೆಲವು ಜೈಶ್ ಉಗ್ರರಿಗೆ ಹಲವಾರು ಸಂದರ್ಭಗಳಲ್ಲಿ  ಶಸ್ತ್ರಾಸ್ತ್ರ ಮತ್ತು ಇನ್ನಿತರ ವಸ್ತುಗಳನ್ನು ಪೂರೈಸಿದ್ದ ಮತ್ತು ಅವರಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದ ಎಂಬ ಮಾಹಿತಿಯನ್ನು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

2018ರಿಂದ ಪುಲ್ವಾಮ ದಾಳಿಯ ದಿನದವರೆಗೂ ಅದಿಲ್ ಅಹಮ್ಮದ್ ದಾರ್ ಮತ್ತು ಪಾಕಿಸ್ಥಾನಿ ಉಗ್ರ ಮಹಮ್ಮದ್ ಉಮರ್ ಫಾರೂಖ್ ಅವರಿಗೆ ತನ್ನ ಮನೆಯಲ್ಲಿ ಶಕೀರ್ ಬಶೀರ್ ಆಶ್ರಯ ನೀಡಿದ್ದ ಮತ್ತು ಇದೇ ಸಂದರ್ಭದಲ್ಲಿ ಅವರಿಗೆ ಐ.ಇ.ಡಿ. ತಯಾರಿಸಲೂ ನೆರವಾಗಿದ್ದ. ತನ್ನ ಪ್ರದೇಶದಲ್ಲಿ ಸಿ.ಆರ್.ಪಿ.ಎಫ್. ಜವಾನರ ಚಲನವಲನಗಳ ಕುರಿತಾಗಿಯೂ ಈತ ಇವರಿಬ್ಬರಿಗೆ ಮಾಹಿತಿ ನೀಡುತ್ತಿದ್ದ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.