ನೈಸರ್ಗಿಕ ವಿಕೋಪ ವಿಶ್ವ ಬೊಕ್ಕಸಕ್ಕೆ 16.5ಲ.ಕೋ. ರೂ. ನಷ್ಟ
Team Udayavani, Feb 3, 2020, 6:50 AM IST
ನೈಸರ್ಗಿಕ ವಿಪತ್ತು ಮತ್ತು ಮಾನವ-ನಿರ್ಮಿತ ವಿಪತ್ತುಗಳಿಂದ ಜಾಗತಿಕವಾಗಿ ಆರ್ಥಿಕ ಕ್ಷೇತ್ರಕ್ಕೆ 16.5 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು 2020ರ ಹವಾಮಾನ ಅಧ್ಯಯನ ವರದಿ ಹೇಳಿದೆ. 2019ನೇ ಇಸವಿ ಹಣದುಬ್ಬರದ ದೃಷ್ಟಿಯಿಂದ ಹೇಳುವುದಾದರೆ 8ನೇ ಅತಿ ದುಬಾರಿ ವರ್ಷವಾಗಿದೆ. ಈ ಹಿನ್ನೆಲೆ ವಿಶ್ವ ಮತ್ತು ರಾಷ್ಟ್ರ ಮಟ್ಟದಲ್ಲಿ ಉಂಟಾದ ನೈಸರ್ಗಿಕ ವಿಪತ್ತು ಹಾಗೂ ಅದರಿಂದ ಆದ ನಷ್ಟ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
409 ನೈಸರ್ಗಿಕ ವಿಕೋಪ ಘಟನೆ
2019ರಲ್ಲಿ ವಿಶ್ವಾದ್ಯಂತ ಒಟ್ಟು 409 ನೈಸರ್ಗಿಕ ವಿಕೋಪ ಘಟನೆ ಗಳು ನಡೆದಿವೆ. ಏಷ್ಯನ್ ಪೆಸಿಫಿಕ್ ಪ್ರದೇಶ ಅನುಭವಿಸಿದ ಅತಿದೊಡ್ಡ ಸಂಖ್ಯೆಯ ನೈಸರ್ಗಿಕ ವಿಕೋಪ ಗಳಿಗೆ ಮತ್ತು ಅಧಿಕ ಮಟ್ಟದ ನಷ್ಟಕ್ಕೆ ಈ ವರ್ಷ ಸಾಕ್ಷಿಯಾಗಿದೆ.
15ರಷ್ಟು ಹೆಚ್ಚಳ
2018ರಲ್ಲಿ ಒಟ್ಟು 394 ನೈಸರ್ಗಿಕ ವಿಕೋಪ ಘಟನೆಗಳು ನಡೆದಿದ್ದು, 2019ಕ್ಕೆ ಇದರ ಪ್ರಮಾಣದಲ್ಲಿ 15 ಪ್ರಕರಣಗಳಷ್ಟು ಹೆಚ್ಚಳವಾಗಿದೆ.
ಶೇ.17ರಷ್ಟು
ಹವಾಮಾನ ಸಂಬಂಧಿತ ವಿಪತ್ತುಗಳಿಂದ ಆದ ನಷ್ಟ 21ನೇ ಶತಮಾನದ ಸರಾಸರಿಗಿಂತ ಶೇ.17ರಷ್ಟು ಹೆಚ್ಚು. ಅಂದರೆ 16.40 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಶೇ. 60ರಷ್ಟು ಹೆಚ್ಚಳ
ದಶಕಗಳ ಬಳಿಕ ಭೂಮಿ ಮತ್ತು ಹವಾಮಾನಕ್ಕೆ ಸಂಬಂಧಿಸಿದ ವಿಪತ್ತುಗಳು ಶೇ.60 ಹೆಚ್ಚಾ ಗಿವೆ. ದುಬಾರಿ ನೈಸರ್ಗಿಕ ವಿಕೋಪ ಕಳೆದ ವರ್ಷ ಭಾರತ, ಬಾಂಗ್ಲಾ ದೇಶದ ಮತ್ತು ಒಡಿಶಾದಲ್ಲಿ ಘಟಿಸಿದ ಫಾನಿ ಚಂಡಮಾರುತ ವಿಶ್ವದ ಹತ್ತನೇ ಅತ್ಯಂತ ದುಬಾರಿ ನೈಸರ್ಗಿಕ ವಿಕೋಪವಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.
ದೇಶದ ಕಥೆ ಏನು
2019ನೇ ಸಾಲಿನಲ್ಲಿ ಒಟ್ಟು 13 ನೈಸರ್ಗಿಕ ವಿಕೋಪ ಘಟನೆಗಳು ನಡೆದಿವೆ.
1,750 ಸಾವು: 2019ರಲ್ಲಿ ಮಾನ್ಸೂನ್ ಪ್ರವಾಹದಿಂದ 1,750 ಸಾವು ಸಂಭವಿಸಿದೆ.
72 ಸಾವಿರ ಕೋಟಿ ರೂ. ದೇಶದಲ್ಲಿ ಘಟಿಸಿದ ಪ್ರಕೃತಿ ವಿಕೋಪಗಳಿಂದ 72 ಸಾವಿರ ಕೋಟಿ ರೂ. ನಷ್ಟವಾಗಿದೆ.
ಇವುಗಳಿಂದ ಹೆಚ್ಚು
3 ವರ್ಷಗಳ ನೈಸರ್ಗಿಕ ವಿಕೋಪಗಳ ಪೈಕಿ ಸುಂಟರಗಾಳಿ, ನೆರೆ ಮತ್ತು ಚಂಡಮಾರುತದಿಂದ ಅತೀ ಹೆಚ್ಚು ನಷ್ಟವಾಗಿದ್ದು, 39 ಬಿಲಿಯನ್ ಡಾಲರ್ನಷ್ಟು ಚಂಡಮಾರುತದಿಂದ ಮತ್ತು 15 ಬಿಲಿಯನ್ ಡಾಲರ್ನಷ್ಟು ಪ್ರವಾಹದಿಂದ ನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?