ನಕ್ಸಲೀಯರ ಅಟ್ಟಹಾಸ; ಡೈನಾಮೆಟ್ ಸ್ಫೋಟಕ್ಕೆ BJP ಮುಖಂಡನ ಮನೆ ಧ್ವಂಸ
Team Udayavani, Mar 28, 2019, 10:49 AM IST
ನವದೆಹಲಿ: ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿರುವ ನಕ್ಸಲೀಯರು ಬುಧವಾರ ತಡರಾತ್ರಿ ಡೈನಾಮೈ ಟ್ ಸ್ಫೋಟಗೊಳಿಸಿ ಬಿಜೆಪಿ ಮುಖಂಡರೊಬ್ಬರ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ದುಮಾರಿಯಾದಲ್ಲಿ ನಡೆದಿದೆ.
ನಕ್ಸಲರು ಡೈನಾಮೆಟ್ ಬಳಸಿ ಬಿಜೆಪಿ ಮುಖಂಡ ಅಂಜು ಕುಮಾರ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದ್ದರಿಂದ ಮನೆ ಧ್ವಂಸಗೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ. ಮನೆಯ ಎದುರುಭಾಗದ ಗೋಡೆ ಒಡೆದು ಛಿದ್ರವಾಗಿ ಹೋಗಿದೆ.
ಘಟನೆಯಲ್ಲಿ ಮಾಜಿ ಎಂಎಲ್ ಸಿ, ಬಿಜೆಪಿ ಮುಖಂಡ ಅಂಜು ಕುಮಾರ್ ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ. ಡೈನಾಮೆಟ್ ಸ್ಫೋಟಗೊಂಡು ಮನೆ ಧ್ವಂಸಗೊಂಡ ನಂತರ ಮನೆಯ ಗೋಡೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲೇಬೇಕೆಂಬ ಪೋಸ್ಟರ್ ಅನ್ನು ಅಂಟಿಸಿರುವುದಾಗಿ ವರದಿ ಹೇಳಿದೆ.
ಘಟನೆ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು