ನಕ್ಸಲರಿಂದ 6 ವಾಹನಗಳಿಗೆ ಬೆಂಕಿ; ವೇ ಬ್ರಿಜ್ ಸ್ಫೋಟ
Team Udayavani, Jan 6, 2018, 5:07 PM IST
ರಾಯಪುರ : ಛತ್ತೀಸ್ಗಢ – ಜಾರ್ಖಂಡ್ ಗಡಿ ಪ್ರದೇಶದಲ್ಲಿನ ಹಿಂಡಾಲ್ಕೊ ಕಂಪೆನಿಯ ಬಾಕ್ಸೆ„ಟ್ ಗಣಿಗೆ ಇಂದು ಶನಿವಾರ ನಸುಕಿನ ವೇಳೆ ನುಗ್ಗಿದ ನಕ್ಸಲರು ಆರು ವಾಹನಗಳಿಗೆ ಬೆಂಕಿ ಹಚ್ಚಿ ವೇ ಬ್ರಿಜ್ ಘಟಕವೊಂದನ್ನು ಸ್ಫೋಟಿಸಿದರೆಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢದ ಬಲರಾಮಪುರ ಜಿಲ್ಲೆಯಯಲ್ಲಿನ ಕುಡಾಗ್ ಗಣಿಗೆ ಇಂದು ನಸುಕಿನ 1ರಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ವೇಳೆ 50 ಮಂದಿ ಸಶಸ್ತ್ರ ಮಾವೋವಾದಿಗಳು ನುಗ್ಗಿದರು. ಅಲ್ಲಿದ್ದ ಒಂದು ಪೊಕ್ಲೇನ್ ಯಂತ್ರ, ಒಂದು ಟ್ರಕ್, ಮತ್ತು ಹೈವಾ ಟ್ರಕ್ ಸೇರಿದಂತೆ ಒಟ್ಟು ಆರು ವಾಹನಗಳಿಗೆ ಬೆಂಕಿ ಹಚ್ಚಿದರು. ಬಳಿಕ ಕುಡಾಗ್ ಮತ್ತು ಕುಕುಡ್ ಎಂಬಲ್ಲಿನ ವೇ ಬ್ರಿಜ್ ಘಟಕಗಳನ್ನು ಸ್ಫೋಟಿಸಿದರು.
ಮಾವೋವಾದಿಗಳ ಈ ದಾಳಿಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ; ಯಾರೂ ಗಾಯಗೊಂಡಿಲ್ಲ; ನಕ್ಸಲರು ಈ ದಾಳಿಯ ಬಳಿಕ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ