ಅಗ್ನಿಪಥದಡಿ ಎನ್ಸಿಸಿ ಕೆಡೆಟ್ಗಳಿಗೂ ಬೋನಸ್: ಲೆ.ಜ.ಗುರುಬೀರ್ ಪಾಲ್ ಸಿಂಗ್
Team Udayavani, Jun 24, 2022, 8:00 PM IST
ಗ್ವಾಲಿಯರ್: ಅಗ್ನಿಪಥ ಯೋಜನೆಯತ್ತ ಹೆಚ್ಚಿನ ಯುವಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಎನ್ಸಿಸಿಯಲ್ಲಿ “ಎ’, “ಬಿ’, “ಸಿ’ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರಿಗೆ ಬೋನಸ್ ಪಾಯಿಂಟ್ ನೀಡಲಾಗುತ್ತದೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದ ಎನ್ಸಿಸಿ ಮಹಿಳಾ ಅಧಿಕಾರಿಗಳ ಸಮಾವೇಶದಲ್ಲಿ ಲೆ.ಜ.ಗುರುಬೀರ್ ಪಾಲ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎನ್ಸಿಸಿ ಕೆಡೆಟ್ಗಳಿಗೆ ಅಧಿಕಾರಿಗಳ ಮೂಲಕ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಲೆ.ಜ.ಗುರುಬೀರ್ ಪಾಲ್ ಅವರು ಎನ್ಸಿಸಿಯ ಮಹಾನಿರ್ದೇಶಕರಾಗಿದ್ದಾರೆ.
ಇದೇ ವೇಳೆ, ಅಗ್ನಿಪಥ ಯೋಜನೆಯ ಅನ್ವಯ ಭಾರತೀಯ ವಾಯುಸೇನೆ ಶುಕ್ರವಾರದಿಂದ ನೇಮಕ ಪ್ರಕ್ರಿಯೆ ಶುರು ಮಾಡಿದೆ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ರಾ ಮುಖ್ಯಸ್ಥ ಸಮಂತ್ ಅಧಿಕಾರಾವಧಿ ವಿಸ್ತರಣೆ, ತಪನ್ ಡೇಕಾ ನೂತನ ಐಬಿ ನಿರ್ದೇಶಕ
ಅಲ್ಪಾವಧಿಗೆ ಅಗ್ನಿವೀರರಾಗಿ ಸೇವೆ ಸಲ್ಲಿಸುವವರಿಗೆ ಪಿಂಚಣಿ ಸಿಗುವುದಿಲ್ಲ ಎಂದಾದರೆ, ಶಾಸಕರು, ಸಂಸದರಿಗೆ ಪಿಂಚಣಿ ಏಕೆ ಬೇಕು? ನನಗೆ ಬರುವ ಪಿಂಚಣಿಯನ್ನು ನಿರಾಕರಿಸಲು ಸಿದ್ಧನಿದ್ದೇನೆ. ಇತರ ಶಾಸಕರು, ಸಂಸದರೂ ಇಂಥ ನಿಲುವು ತೆಗೆದುಕೊಳ್ಳಬೇಕಾಗಿದೆ.
– ವರುಣ್ ಗಾಂಧಿ, ಬಿಜೆಪಿ ಸಂಸದ