ಬಿಹಾರ ಎನ್ಡಿಎ ಸೀಟು ಹಂಚಿಕೆ ಪ್ರಕಟ; ರವಿಶಂಕರ್ ಪಟ್ನಾ ಸಾಹಿಬ್
Team Udayavani, Mar 23, 2019, 10:24 AM IST
ಪಟ್ನಾ : ಬಿಜೆಪಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ ಯನ್ನು ಒಳಗೊಂಡ ಬಿಹಾರದಲ್ಲಿನ ಎನ್ಡಿಎ ಕೂಟ ಇಂದು ಶನಿವಾರ ರಾಜ್ಯದಲ್ಲಿನ 40 ಲೋಕಸಭಾ ಸೀಟುಗಳಲ್ಲಿ ಒಂದನ್ನು ಹೊರತುಪಡಿಸಿ (ಖಗಾರಿಯಾ ಕ್ಷೇತ್ರ) ಉಳಿದ 39 ಸ್ಥಾನಗಳ ಹಂಚಿಕೆಯನ್ನು ಪ್ರಕಟಿಸಿವೆ.
ಬಿಹಾರ ಎನ್ಡಿಎ ಸೀಟು ಹಂಚಿಕೆ ಸೂತ್ರವನ್ನು ರಾಜ್ಯದ ಪ್ರಭಾರಿಯಾಗಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸುದ್ದಿ ಗೋಷ್ಠಿಯಲ್ಲಿ ಪ್ರಕಟಿಸಿದರು. ಸೀಟು ಹಂಚಿಕೆ ವಿವರ ಇಂತಿದೆ.
ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ – ಪಟ್ನಾ ಸಾಹಿಬ್ ಕ್ಷೇತ್ರ.
ಗಿರಿರಾಜ್ ಸಿಂಗ್ – ಬೇಗುಸರಾಯ್
ರಾಧಾ ಮೋಹನ್ ಸಿಂಗ್ – ಮೋತಿಹಾರಿ
ಆರ್ ಕೆ ಸಿಂಗ್ – ಅರಾ
ಅಶ್ವಿನಿ ಕುಮಾರ್ – ಬಕ್ಸಾರ್
ರಾಮ್ ಕೃಪಾಲ್ ಯಾದವ್ – ಪಾಟಲೀಪುತ್ರ.
ಲೋಕಜನಶಕ್ತಿ ಪಕ್ಷ : ಚಂದನ್ ಕುಮಾರ್ – ನವಾಡಾ
ರಾಜ್ಯ ಬಿಜೆಪಿ ಅಧ್ಯಕ್ಷ ನಿತಾಯನಂದ ರಾಯ್ -ಉಜಿಯಾರ್ಪುರ
ರಾಜೀವ್ ಪ್ರತಾಪ್ ರೂಡಿ – ಸರನ್
ಜೆಡಿಯು ಅಜಯ್ ಕುಮಾರ್ ಮಂಡಲ್ – ಭಾಗಲ್ಪುರ
ಬಿಜೆಪಿಯ ಛೇದಿ ಪಾಸ್ವಾನ್ – ಸಾಸಾರಾಮ್
ಬಿಜೆಪಿಯ ಪ್ರದೀಪ್ ಕುಮಾರ್ ಸಿಂಗ್ – ಅರಾರಿಯಾ
ಎಲ್ಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಶುಪತಿ ಕುಮಾರ್ ಪಾರಸ್ – ಹಾಜೀಪುರ
ಎಲ್ಜೆಪಿ ಮುಖ್ಯಸ್ಥನ ಪುತ್ರ ಚಿರಾಗ್ ಪಾಸ್ವಾನ್ – ಜಮೂಯಿ.
ಬಿಜೆಪಿಯ ಗೋಪಾಲ್ಜೀ ಠಾಕೂರ್ – ದರ್ಭಾಂಗ
ಅಶೋಕ್ ಯಾದವ್ – ಮಧುಬನಿ ಕ್ಷೇತ್ರ.
ಎಲ್ಜೆಪಿಯ ವೀಣಾ ದೇವಿ – ವೈಶಾಲಿ ಕ್ಷೇತ್ರ.
ಬಿಜೆಪಿಯ ರಮಾ ದೇವಿ – ಶಿವಹರ ಕ್ಷೇತ್ರ
ಜೆಡಿಯು ಅಭ್ಯರ್ಥಿ ಕವಿತಾ ಸಿಂಗ್ – ಸಿವಾನ್ ಕ್ಷೇತ್ರ
ಜೆಡಿಯು ಅಭ್ಯರ್ಥಿ ಕೌಶಲೇಂದ್ರ ಕುಮಾರ್ – ನಾಲಂದ
ಸಂತೋಷ್ ಕುಮಾರ ಕುಶ್ವಾಹ್ – ಪೂರ್ಣಿಯ
ಜೆಡಿಯು ಅಭ್ಯರ್ಥಿ ವಿಜಯ್ ಮಾಂಜಿ – ಗಯಾ
ದಿನೇಶ್ ಚಂದ್ರ ಯಾದವ್ – ಮಾಧೇಪುರ
ಎಲ್ಜೆಪಿಯ ಆರು ಅಭ್ಯರ್ಥಿಗಳ ಪೈಕಿ ಮೂವರು – ಚಿರಾಗ್, ಪಾರಸ್ ಮತ್ತು ರಾಮಚಂದ್ರ ಪಾಸ್ವಾನ್ (ಸಮಷ್ಟೀಪುರ) ಒಂದೇ ಕುಟುಂಬದವರಾಗಿದ್ದಾರೆ.
ಎಲ್ಜೆಪಿ ಹಾಲಿ ಸಂಸದರಾಗಿರುವ ಮೆಹಬೂಬ್ ಅಲಿ ಕೈಸರ್ ಅವರ ಖಗಾರಿಯಾ ಕ್ಷೇತ್ರ ಇನ್ನೂ ಅನಿರ್ಧರಿತವಾಗಿದೆ.
2014ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಬಿಹಾರದಲ್ಲಿ 22 ಸೀಟು ಗೆದ್ದಿತ್ತು. 2017ರಲ್ಲಿ ಎನ್ಡಿಎ ತೆಕ್ಕೆಗೆ ಸೇರಿರುವ ಜೆಡಿಯು ಗೆ ಬಿಜೆಪಿ ಐದು ಸೀಟುಗಳನ್ನು ಬಿಟ್ಟುಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ