ಸಂಸತ್ತಿನ ಮಳೆಗಾಲದ ಅಧಿವೇಶನ: 26ರ ಬದಲು 18 ದಿನಕ್ಕೆ ಇಳಿಕೆ
Team Udayavani, Jun 25, 2018, 7:24 PM IST
ಹೊಸದಿಲ್ಲಿ : ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಮಳೆಗಾಲದ ಲೋಕಸಭಾ ಅಧಿವೇಶನವನ್ನು ಜುಲೈ 18ರಿಂದ ಆಗಸ್ಟ್ 10ರ ವರೆಗೆ ನಡೆಸಲು ನಿರ್ಧರಿಸಿದೆ. ಆದರೆ ಮಳೆಗಾಲದ ಅಧಿವೇಶನ ಸಂಪ್ರದಾಯದ ಪ್ರಕಾರ 26 ದಿನಗಳ ಕಾಲ ನಡೆಯಬೇಕಿದ್ದು ಅದನ್ನು 18 ದಿನಗಳಿಗೆ ಇಳಿಸಿರುವ ಎನ್ಡಿಎ ಸರಕಾರಕ್ಕೆ ಸಂಸತ್ ಅಧಿವೇಶನದ ಬಗ್ಗೆ ಯಾವುದೇ ಗಂಭೀರತೆ ಇಲ್ಲ ಎಂದು ಟಿಎಂಸಿ ನಾಯಕ ಡೆರಿಕ್ ಓ ಬ್ರಿàನ್ ಆರೋಪಿಸಿದ್ದಾರೆ.
ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳಾ ಪಟ್ಟಿಯನ್ನು ಪ್ರಕಟಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ಸಂಸತ್ ಅಧಿವೇಶನ ಅವಧಿಯನ್ನು ಕಡಿತಗೊಳಿಸಲಾಗಿರುವುದನ್ನು 2010 ಮತ್ತು 2011ಕ್ಕೆ ಹೋಲಿಸಿದ್ದಾರೆ.
ಆದರೆ ವಾಸ್ತವದಲ್ಲಿ 2010 ಮತ್ತು 2011ರಲ್ಲಿ ಮಳೆಗಾಲದ ಅಧಿವೇಶನ 26 ದಿನಗಳ ಕಾಲ ನಡೆದಿತ್ತು. ಇದೀಗ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅದನ್ನು 26ರಿಂದ 18 ದಿನಗಳಿಗೆ ಇಳಿಸುವ ಮೂಲಕ ಸಂಸದೀಯ ಕಲಾಪಗಳ ಬಗ್ಗೆ ತಾನು ಯಾವುದೇ ಗಂಭೀರತೆ ಹೊಂದಿಲ್ಲದಿರುವುದನ್ನು ತೋರಿಸಿಕೊಟ್ಟಿದೆ ಎಂದು ಡೆರಿಕ್ ಓ ಬ್ರಿàನ್ ಹೇಳಿದರು.
ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಸಂಸದೀಯ ಅಧಿವೇಶನವನ್ನು ಔಪಚಾರಿಕವಾಗಿ ನಡೆಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು