‘ನೀರಜ್’ಹೆಸರಿನವರಿಗೆ ಫ್ರೀ ಪೆಟ್ರೋಲ್: ಚೋಪ್ರಾ ಚಿನ್ನದ ಸಾಧನೆಗೆ ಬಂಕ್ ಮಾಲೀಕನ ಸಂಭ್ರಮ
Team Udayavani, Aug 9, 2021, 8:47 PM IST
ಭರೂಚ್ : ಗುಜರಾತಿನ ಭರೂಚ್ ನಲ್ಲಿರುವ ಈ ಪೆಟ್ರೋಲ್ ಬಂಕ್ ವಿಶೇಷ ಆಫರ್ ವೊಂದನ್ನು ಘೋಷಿಸಿದೆ. ನೀರಜ್ ಹೆಸರಿನವರಿಗೆ 500 ರೂ. ವರೆಗೆ ಉಚಿತ ಪೆಟ್ರೋಲ್-ಡಿಸೇಲ್ ನೀಡಿದೆ. ಈ ಉಚಿತ ಆಫರ್ ಗೆ ಕಾರಣ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ.
ಹೌದು, ಟೋಕಿಯೊ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಕೋಟ್ಯಂತರ ಭಾರತೀಯರ ಪಾಲಿಗೆ ಹೀರೋ ಆಗಿದ್ದಾರೆ. 120 ವರ್ಷಗಳ ಬಳಿಕ ಅಂಥ್ಲೆಟಿಕ್ ನಲ್ಲಿ ಭಾರತಕ್ಕೆ ಬಂಗಾರ ತಂದಿರುವ 23 ವರ್ಷ ವಯಸ್ಸಿನ ಚೋಪ್ರಾ ಚಿನ್ನದ ಜೋತೆಗೆ ಭಾರತೀಯರ ಹೃದಯವನ್ನೂ ಗೆದ್ದಿದ್ದಾರೆ.
Gujarat | Ayuub Pathan, a petrol pump owner in Bharuch, offers free petrol, up to Rs 501, to people who share their names with Olympic gold medallist Neeraj Chopra.
“It is our 2-day scheme to honour him. We’re entertaining all valid ID Card-holding namesakes of Chopra,” he said. pic.twitter.com/PAc43jYw6Q
— ANI (@ANI) August 9, 2021
ನೀರಜ್ ಚೋಪ್ರಾ ಗೋಲ್ಡ್ ಮೆಡೆಲ್ ಗೆದ್ದಿದ್ದಕ್ಕೆ ಭಾರತೀಯರ ಸಂಭ್ರಮಕ್ಕೆ ಪಾರವೆ ಇರಲಿಲ್ಲ. ನಾನಾ ಬಗೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಗುಜರಾತಿನ ಭರೂಚ್ ನಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್, ತನ್ನ ಗ್ರಾಹಕರಿಗೆ ಉಚಿತ ಪೆಟ್ರೋಲ್ ಆಫರ್ ಘೋಷಿಸುವ ಮೂಲಕ ಚೋಪ್ರಾ ಅವರ ಸಾಧನೆಯನ್ನು ಸಂಭ್ರಮಿಸಿದ್ದಾರೆ.
ಎರಡು ದಿನಗಳ ವರೆಗೆ ( ಆ.9 ಸಂಜೆ 5 ಗಂಟೆವರೆಗೆ) ತನ್ನ ಬಂಕ್ ನಲ್ಲಿ ನೀರಜ್ ಹೆಸರಿನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ನೀಡಿದ್ದಾನೆ. ತಮ್ಮ ಹೆಸರಿನ ಗುರುತಿನ ಚೀಟಿ ತೋರಿಸಿದರೆ ಈ ಪೆಟ್ರೋಲ್ ತುಂಬಿಸಿ ಕಳುಹಿಸಲಾಗಿದೆ. ಈ ಕೊಡುಗೆಯನ್ನು ಸಾಕಷ್ಟು ಗ್ರಾಹಕರು ಸದುಪಯೋಗ ಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ