ಬೋಸ್ ನಿಕಟವರ್ತಿ, ಶತಾಯುಷಿ ಕ| ಅಮರ್ ಬಹಾದ್ದೂರ್ ಸಿಂಗ್ ನಿಧನ
Team Udayavani, Aug 21, 2017, 8:00 PM IST
ಬರೇಲಿ, ಉತ್ತರ ಪ್ರದೇಶ : ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ನಿಕಟವರ್ತಿಯಾಗಿದ್ದ ಕರ್ನಲ್ ಅಮರ್ ಬಹಾದ್ದೂರ್ ಸಿಂಗ್ ಅವರು ತಮ್ಮ 102ನೇ ವರ್ಷ ಪ್ರಾಯದಲ್ಲಿ, ತಮ್ಮ ಪೂರ್ವಜರ ಗ್ರಾಮವಾದ ಬಹೇರಿಯದ ಶೀರ್ಷಾದಲ್ಲಿ ದೀರ್ಘ ಕಾಲದ ಅನಾರೋಗ್ಯದ ಬಳಿಕ ನಿಧನ ಹೊಂದಿದರು. ವಿಧುರನಾಗಿರುವ ಸಿಂಗ್ ಅವರು ಓರ್ವ ಪುತ್ರನನ್ನು ಅಗಲಿದ್ದಾರೆ.
ಸಿಂಗ್ ಅವರು 1933ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯನ್ನು ಸೇರಿದ್ದರು. ಅನಂತರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸಂಪರ್ಕಕ್ಕೆ ಬಂದ ಅವರು ನೇತಾಜಿಯವರ ಆಜಾದ್ ಹಿಂದ್ ಫೌಜ್ ಸೇರಿದರು.
ಸಿಂಗ್ ಅವರ ಅಂತ್ಯಕ್ರಿಯೆ ಅನೇಕ ಪ್ರಮುಖ ಗಣ್ಯರ ಸಮ್ಮುಖದಲ್ಲಿ ನಿನ್ನೆ ಸಂಜೆ ನೆರವೇರಿತು. ಸಿಂಗ್ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಸಂತೋಷ್ ಗಂಗ್ವಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್