ನ್ಯಾಯವಾದಿಗಳ ಭಡ್ತಿಗೆ ನೆರವಾದ ಗುಪ್ತಚರ ದಳ
Team Udayavani, Oct 5, 2019, 6:00 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಆಕ್ಷೇಪದ ನಡುವೆಯೂ ನಾಲ್ವರು ನ್ಯಾಯವಾದಿಗಳಿಗೆ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಭಡ್ತಿ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಮೇಲುಗೈ ಸಾಧಿಸಿದೆ.
ವಿವಿಧ ಆರೋಪ ಹಾಗೂ ಕಾರಣಗಳನ್ನು ಹೇಳಿ ಈ ನ್ಯಾಯವಾದಿಗಳ ಭಡ್ತಿಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಡ್ಡಗಾಲು ಹಾಕಲು ಪ್ರಯತ್ನಿಸಿದರೂ ಆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದಲೇ ವರದಿ ಪಡೆಯುವ ಮೂಲಕ ಕೊಲಿಜಿಯಂ, ಎಲ್ಲ ನಾಲ್ವರು ನ್ಯಾಯ ವಾದಿಗಳೂ ಶುದ್ಧಹಸ್ತರು ಎಂದು ತಿಳಿಸಿ ಭಡ್ತಿಗೆ ಒಪ್ಪಿಗೆಯ ಮುದ್ರೆ ಒತ್ತಿದೆ.
ಗುಪ್ತಚರ ವರದಿ
ಸರಕಾರದ ಆಕ್ಷೇಪಗಳಿಗೆ ಏಕಾಏಕಿ ಮಣೆ ಹಾಕದ ಕೊಲಿಜಿಯಂ ಗುಪ್ತ ಚರ ಇಲಾಖೆಯ ಮೂಲಕ ಮಾಹಿತಿ ಸಂಗ್ರಹಿಸಿತು. ಅದರಂತೆ ಈ ನ್ಯಾಯವಾದಿಗಳು ಶುದ್ಧಹಸ್ತರಾಗಿದ್ದು, ವೃತ್ತಿಪರವಾಗಿಯೂ, ವೈಯಕ್ತಿಕವಾಗಿಯೂ ಉತ್ತಮ ವರ್ಚಸ್ಸು ಹೊಂದಿದ್ದಾರೆ ಎಂದು ವರದಿ ನೀಡಿದೆ.
ಯಾರಿವರು ವಕೀಲರು?
2019ರ ಮಾರ್ಚ್ 25ರಂದು ಕೊಲಿಜಿಯಂ 9 ವಕೀಲರ ಹೆಸರು ಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಈ ಪೈಕಿ ನಾಲ್ವರ ಹೆಸರನ್ನು ಸರಕಾರ ವಾಪಸ್ ಕಳುಹಿಸಿತ್ತು. ಅವರೆಂದರೆ ಸವಣೂರು ವಿಶ್ವಜಿತ್ ಶೆಟ್ಟಿ, ಮರಲೂರು ಇಂದ್ರ ಕುಮಾರ್ ಅರುಣ್, ಮೊಹಮ್ಮದ್ ಘೌಸ್ ಶುಕೂರೆ ಕಮಾಲ್ ಮತ್ತು ಎಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ