65000 ಅಡಿ ಎತ್ತರದಲ್ಲಿ 90 ದಿನ ಹಾರಾಡುವ ಡ್ರೋನ್‌!

ಮಾನವರಹಿತ ಡ್ರೋನ್‌ ದಾಳಿಯು ಯಶಸ್ವಿಯಾಯಿತೋ, ಇಲ್ಲವೋ ಎಂಬುದನ್ನು ದೃಢಪಡಿಸಲು ನೆರ

Team Udayavani, Feb 5, 2021, 11:14 AM IST

65000 ಅಡಿ ಎತರದಲ್ತಿ 90 ದಿನ ಹಾರಾಡುವ ಡ್ರೋನ್‌!

ನವದೆಹಲಿ: ಮುಂದಿನ ಮೂರದಿಂದ ಐದು ವರ್ಷಗಳಲ್ಲೇ ಭಾರತದ ಸಶಸ್ತ್ರ ಪಡೆಗಳಿಗೆ ಸ್ವದೇಶಿ ನಿರ್ಮಿತ ಡ್ರೋನ್‌ “ಇನ್ಫಿನಿಟಿ’ ಸೇರ್ಪಡೆಯಾಗಲಿದ್ದು, ದೇಶದ ಮಾನವರಹಿತ ಡ್ರೋನ್‌ ಯುದ್ಧತಂತ್ರದಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. ಹಾಗೂ ಬೆಂಗಳೂರು ಮೂಲದ ಸ್ಟಾರ್ಟಪ್‌ ನ್ಯೂಸ್ಪೇಸ್‌ ಸಹಭಾಗಿತ್ವದಲ್ಲಿ ಈ ಡ್ರೋನ್‌ ಅಭಿವೃದ್ಧಿಗೊಳ್ಳುತ್ತಿದೆ. ಸೌರಚಾಲಿತ ಡ್ರೋನ್‌ ಇದಾಗಿರಲಿದ್ದು, ಮುಂದಿನ ತಲೆಮಾರಿನ ಯುದ್ಧ
ತಂತ್ರಕ್ಕೆ ಹೊಂದುವಂತೆ ಇದನ್ನು ತಯಾರಿಸಲಾಗಿದೆ.

ಅತ್ಯಾಧುನಿಕ ಸಿಂಥೆಟಿಕ್‌ ಅಪರ್ಚರ್‌ ರೇಡಾರ್‌ ಸೇರಿದಂತೆ ವಿವಿಧ ಬಗೆಯ ಸೆನ್ಸರ್‌ಗಳನ್ನು ಒಳಗೊಂಡ ಇನ್ಫಿನಿಟಿ ಡ್ರೋನ್‌, ಶತ್ರುಗಳ ನೆಲದೊಳಗಿನ ಆಳವಾದ ಟಾರ್ಗೆಟ್‌ಗಳನ್ನು ಟ್ರ್ಯಾಕ್‌ ಮಾಡಿ, ಭಾರತದ ಇತರೆ ಡ್ರೋನ್‌ ವ್ಯವಸ್ಥೆಗಳು ಕೈಗೊಳ್ಳುವ ದಾಳಿಗಳಿಗೆ ಸಹಾಯ ಮಾಡುತ್ತದೆ. ಸದ್ಯ ಭಾರತದಲ್ಲಿ ಸ್ವದೇಶಿ ಕಾಂಬ್ಯಾಟ್‌ ಏರ್‌ ಟೀಮಿಂಗ್‌ ಸಿಸ್ಟಂ(ಸಿಎಟಿಎಸ್‌)ನ ಭಾಗವಾಗಿರುವ ವಾರಿಯರ್‌ ಲೋಯಲ್‌ ವಿಂಗ್‌ಮ್ಯಾನ್‌, ಆಲ್ಫಾ-ಎಸ್‌ ಸ್ವಾರ್ಮ್ ಡ್ರೋನ್‌ಗಳು, ಹಂಟರ್‌ ಕ್ರೂಸ್‌ ಕ್ಷಿಪಣಿಗಳು ದಾಳಿ ಯೋಜನೆಗಳನ್ನು ಕೈಗೊಳ್ಳುತ್ತವೆ.

ವಿಡಿಯೋ ನೇರ ಪ್ರಸಾರ: ದಾಳಿ ಡ್ರೋನ್‌ಗಳ ನೇರ ವಿಡಿಯೋ ಪ್ರಸಾರವನ್ನು ಭೂಮಿಯಲ್ಲಿರುವ ಮೇಲ್ವಿಚಾರಣಾ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯವನ್ನು ಇನ್ಫಿನಿಟಿ ಹೊಂದಿದ್ದು, ಇದರಿಂದಾಗಿ ಮಾನವರಹಿತ ಡ್ರೋನ್‌ ದಾಳಿಯು ಯಶಸ್ವಿಯಾಯಿತೋ, ಇಲ್ಲವೋ ಎಂಬುದನ್ನು ದೃಢಪಡಿಸಲು ನೆರವಾಗಲಿದೆ.

2019ರಲ್ಲಿ ಪಾಕಿಸ್ತಾನದ ಬಾಲಕೋಟ್‌ನ ಉಗ್ರ ಶಿಬಿರಗಳ ಮೇಲೆ ನಮ್ಮ ವಾಯುಪಡೆಯು ದಾಳಿ ನಡೆಸಿದಾಗ, ನಮ್ಮಲ್ಲಿ ಇಂಥದ್ದೊಂದು ತಂತ್ರಜ್ಞಾನ ಇರಲಿಲ್ಲ. ಹೀಗಾಗಿ, ದಾಳಿಯ ವಿಡಿಯೋ ದೊರೆತಿರಲಿಲ್ಲ ಹಾಗೂ ಅದರ ಯಶಸ್ಸಿನ ಕುರಿತು ಪ್ರಶ್ನೆಗಳನ್ನೂ ಎದುರಿಸಬೇಕಾಯಿತು.

ವೈಶಿಷ್ಟ್ಯಗಳೇನು?
● ಇದು ಸೌರ ಚಾಲಿತ ಡ್ರೋನ್‌, 90 ದಿನಗಳ ಕಾಲ 65,000ಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ
● ಅತ್ಯಾಧುನಿಕ ಸಿಂಥೆಟಿಕ್‌ ಅಪರ್ಚರ್‌ ರೇಡಾರ್‌ ಹೊಂದಿದೆ, ಹಲವು ಬಗೆಯ ಸೆನ್ಸರ್‌ಗಳುಳ್ಳ ಡ್ರೋನ್‌
● ದಾಳಿ ಡ್ರೋನ್‌ಗಳ ನೇರ ವಿಡಿಯೋ ಪ್ರಸಾರವನ್ನು ಭೂಮಿಯಲ್ಲಿರುವ ನಿಗಾ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯ
● ವಿಪತ್ತು ನಿರ್ವಹಣೆ, ಸ್ಮಾರ್ಟ್‌ ಸಿಟಿ, ಕರಾವಳಿ ರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೂ ಇವುಗಳ ಬಳಕೆ ಸಾಧ್ಯ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.