ಮದುವೆಯಾದ ನಾಲ್ಕೇ ದಿನಕ್ಕೆ ಗಂಡನ ಮನೆಯಿಂದ ಹಣ, ಒಡವೆ ಕದ್ದು ಪರಾರಿಯಾದ ಯುವತಿ
ನವವಿವಾಹಿತೆ ಬಡಿಸಿದ ಮೃಷ್ಟಾನ್ನ ತಿಂದು ಪ್ರಜ್ಞೆ ತಪ್ಪಿದ ಗಂಡನ ಮನೆಯವರು
Team Udayavani, Dec 15, 2019, 2:53 PM IST
ಉತ್ತರಪ್ರದೇಶ: ನವವಿವಾಹಿತೆಯೊಬ್ಬಳು ಗಂಡನ ಮನೆಯವರಿಗೆ ಮತ್ತುಬರಿಸುವ ಊಟವನ್ನು ಉಣಬಡಿಸಿ ಆ ಬಳಿಕ ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾದ ವಿಚಿತ್ರ ಘಟನೆ ಬದೌನ್ ಜಿಲ್ಲೆಯ ಚೋಟಾ ಗ್ರಾಮದಲ್ಲಿ ನಡೆದಿದೆ.
ಮನೆಯವರು ನಿದ್ದೆಯಿಂದ ಎಚ್ಚೆತ್ತ ಬಳಿಕ ನವವಿವಾಹತೆ ಕಾಣೆಯಾಗಿದ್ದನ್ನು ಕಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾತ್ರವಲ್ಲದೆ ಚಿನ್ನಾಭರಣ ಮತ್ತು ನಗದು ಕೂಡ ಜೊತೆಗೆ ಕೊಂಡೊಯ್ದಿರುವುದನ್ನು ಕಂಡು ದಂಗಾಗಿದ್ದಾರೆ.
ಗಂಡನ ಮನೆಯಿಂದ ನಾಪತ್ತೆಯಾದವಳ ಹೆಸರನ್ನು ರಿಯಾ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 9 ರಂದು ಅಜಂಗಢದ ರಿಯಾ, ಬದೌನ್ ಗ್ರಾಮದ ಪ್ರವೀಣ್ ಅವರನ್ನು ಮದುವೆಯಾಗಿದ್ದಳು. ಶುಕ್ರವಾರ ಸಂಜೆ ಮನೆಯವರಿಗೆಲ್ಲ ಪ್ರಜ್ಞೆ ತಪ್ಪುವ ಔಷಧವನ್ನು ಊಟದಲ್ಲಿ ಬೆರೆಸಿ ನೀಡಿದ್ದಾಳೆ. ಆ ಬಳಿಕ 70,000 ನಗದು ಮತ್ತು 3 ಲಕ್ಷ ಬೆಲೆಬಾಳುವ ಚಿನ್ನಾಭರಣದ ಜೊತೆ ಪರಾರಿಯಾಗಿದ್ದಾಳೆ. ವಿವಾಹ ನಡೆಯಲು ಕಾರಣವಾದ ಮದುವೆ ಏಜೆಂಟ್ ಟಿಂಕು ಎಂಬಾತನು ಕೂಡ ನಾಪತ್ತೆಯಾಗಿದ್ದಾನೆ.
ಈ ಕುರಿತು ಪ್ರವೀಣ್ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮದುವೆಗಾಗಿ 4 ಲಕ್ಷ ರೂ ಖರ್ಚು ಮಾಡಿದ್ದು, ರಿಯಾ ಕುಟುಂಬಸ್ಥರು ಬಹಳ ಬಡವರಾಗಿದ್ದರಿಂದ ಚಿನ್ನಾಭರಣ ಕೊಳ್ಳಲು ಕೂಡ ಹಣವನ್ನು ನೀಡಿದ್ದೇವು. ಮದುವೆಗೆ ಟಿಂಕು ಎಂಬಾತ ಮಧ್ಯಸ್ಥಿಕೆ ವಹಿಸಿದ್ದು ಈತನೇ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರಿಂದ ಸಂಪೂರ್ಣ ಜವಬ್ದಾರಿಯನ್ನು ಆತನಿಗೆ ನೀಡಿದ್ದೇವು, ಆದರೆ ನಮಗೀಗ ಮೋಸ ಮಾಡಿದ್ದಾರೆ ಎಂದು ಪ್ರವೀಣ್ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್