ಬಾಹ್ಯಾಕಾಶ ಯುದ್ಧ ತಡೆಗೆ ಹೊಸ ಸಂಸ್ಥೆ
Team Udayavani, Jun 12, 2019, 6:10 AM IST
ಹೊಸದಿಲ್ಲಿ: ಬಾಹ್ಯಾಕಾಶದ ಮೂಲಕ ನಡೆಯುವ ದಾಳಿಯನ್ನು ತಡೆಯುವ ಸಾಮರ್ಥ್ಯ ಪಡೆದು ಕೊಂಡಿರುವ ಭಾರತ ಈಗ ಮತ್ತೂಂದು ಹೆಜ್ಜೆ ಇರಿಸಿದೆ.
ಆಗಸದಲ್ಲಿ ನಡೆಯುವ ಯುದ್ಧಗಳನ್ನು ನಿಭಾಯಿಸಲೋಸುಗ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಎಸ್) ಮಂಗಳವಾರ ನಿರ್ಧರಿಸಿದೆ. ಹೊಸ ಸಂಸ್ಥೆಯನ್ನು ಬಾಹ್ಯಾಕಾಶ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಫೆನ್ಸ್ ಸ್ಪೇಸ್ ರಿಸರ್ಚ್ ಏಜೆನ್ಸಿ- ಡಿಎಸ್ಆರ್ಒ) ಎಂದು ಹೆಸರಿಸಲಾಗಿದೆ.
ಬೆಂಗಳೂರಿನಲ್ಲಿ ಹೊಸ ಸಂಸ್ಥೆಯ ಪ್ರಧಾನ ಕಚೇರಿ ಇರಲಿದೆ.
ಈ ಸಂಸ್ಥೆ ಬಾಹ್ಯಾಕಾಶದ ಮೂಲಕ ನಡೆಯುವ ದಾಳಿ, ಯುದ್ಧ ನಿಭಾಯಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಯುದ್ಧ ವ್ಯವಸ್ಥೆ ರೂಪಿಸಲಿದೆ.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಬಾಹ್ಯಾಕಾಶ ರಕ್ಷಣಾ ಸಂಶೋಧನಾ ಸಂಸ್ಥೆ ರಚಿಸಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಆ ಸಂಸ್ಥೆ ಬಾಹ್ಯಾಕಾಶ ಯುದ್ಧ ವ್ಯವಸ್ಥೆ ರೂಪಿಸುವ ತಂತ್ರಜ್ಞಾನ ಮತ್ತು ವ್ಯವಸ್ಥೆ ಅಭಿವೃದ್ಧಿ ಪಡಿಸಲಿದೆ’ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖೀಸಿ “ಎಎನ್ಐ’ ವರದಿ ಮಾಡಿದೆ.
ವಿಜ್ಞಾನಿಗಳ ನೇತೃತ್ವ: ಡಿಎಸ್ಆರ್ಒ ವಿಜ್ಞಾನಿಗಳು ನೇತೃತ್ವ ವಹಿಸಲಿದ್ದಾರೆ. ನೇತೃತ್ವ ವಹಿ ಸುವ ವಿಜ್ಞಾನಿಗೆ ಜಂಟಿ ಕಾರ್ಯ ದರ್ಶಿಯ ಸ್ಥಾನಮಾನ ನೀಡಲಾಗುತ್ತದೆ. ಏರ್-ವೈಸ್ ಮಾರ್ಷಲ್ ರ್ಯಾಂಕ್ನ ಹಿರಿಯ ಅಧಿಕಾರಿ ಡಿಫೆನ್ಸ್ ಸ್ಪೇಸ್ ಏಜೆನ್ಸಿಯ ನೇತೃತ್ವ ವಹಿಸಲಿದ್ದಾರೆ.ಜತೆಗೆ ಸೇನೆಯ ಮೂರು ವಿಭಾಗಗಳ ಹಿರಿಯ ಅಧಿಕಾರಿಗಳ ನೆರವನ್ನೂ ಪಡೆದು, ಬಾಹ್ಯಾಕಾಶ ಸಂಬಂಧಿ ಮಾಹಿತಿ ಪಡೆದು ಕೊಂಡು ಕೆಲಸ ಮಾಡ ಲಿದೆ. ಡಿಫೆನ್ಸ್ ಸ್ಪೇಸ್ ಏಜೆನ್ಸಿಗೆ ಹೊಸ ಸಂಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ನೆರವು ನೀಡಲಿದೆ. ಸೇನೆಯ ಮೂರು ವಿಭಾಗಗಳ ಸದಸ್ಯರು ಹೊಸ ಸಂಸ್ಥೆಯಲ್ಲಿ ಇರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ