ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಪ್ರತಿಮೆ ಶೀಘ್ರ ನಿರ್ಮಾಣ: ಸಿಎಂ ಯೋಗಿ
Team Udayavani, Nov 7, 2018, 3:33 PM IST
ಲಕ್ನೋ : ಅಯೋಧ್ಯೆಯಲ್ಲಿ ಶೀಘ್ರವೇ ನಿರ್ಮಾಣವಾಗಲಿರುವ ಭಗವಾನ್ ಶ್ರೀರಾಮನ ಭವ್ಯವಾದ ಮೂರ್ತಿಯು ಉತ್ತರ ಪ್ರದೇಶದ ಅಸ್ಮಿತೆಯಾಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿಯ ಶುಭ ಪರ್ವದಲ್ಲಿ ಹೇಳಿದ್ದಾರೆ.
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರ ಸೇರಿದಂತೆ ಈ ದೇವಳ ನಗರಿಯಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪ್ರಕಟಿಸಿದ ಸಿಎಂ ಯೋಗಿ ಅವರು, ಅಯೋಧ್ಯೆಯ ಅಸ್ಮಿತೆಯು ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನೊಂದಿಗೆ ಸೇರಿಕೊಂಡಿದೆ ಎಂದು ಫೈಜಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು .
ರಾಮ ಮಂದಿರದ ಒಳಗೆ ಪೂಜಿಸಲ್ಪಡುವ ಒಂದು ವಿಗ್ರಹ ಇರುತ್ತದೆ; ಆದರೆ ಮಂದಿರದ ಹೊರಗೆ ಭವ್ಯವಾದ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲಾಗುವುದು; ಅದು ನಮ್ಮ ರಾಜ್ಯ ಉತ್ತರ ಪ್ರದೇಶದ ಅಸ್ಮಿತೆಯಾಗಿರುತ್ತದೆ; ಈ ಯೋಜನೆಗೆ ನಾವೀಗ ಅಂತಿಮ ರೂಪ ಕೊಡುತ್ತಿದ್ದೇವೆ; ಬೇಗನೆ ಅದು ಕಾರ್ಯಗತವಾಗಲಿದೆ; ಮಾತ್ರವಲ್ಲ ಶ್ರೀರಾಮನ ಈ ಭವ್ಯ ಪ್ರತಿಮೆಯು ದೇವಳ ನಗರಿ ಎನಿಸಿಕೊಂಡಿರುವ ಅಯೋಧ್ಯೆಯ ಹೆಮ್ಮೆ ಎನಿಸಿಕೊಳ್ಳಲಿದೆ ಎಂದು ಹೇಳಿದರು. ಹಾಗಿದ್ದರೂ ಸಿಎಂ ಯೋಗಿ ಪ್ರಸ್ತಾವಿತ ಶ್ರೀರಾಮನ ಪ್ರತಿಮೆಯ ಗಾತ್ರ, ಎತ್ತರ, ನಿವೇಶನ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್