ಪತ್ರಿಕೆಯ ಜಾಹೀರಾತುಗಳೇ ವಿಶ್ವಾಸಾರ್ಹ: ಗ್ರಾಹಕ ತೀರ್ಪು
ಎಎಸ್ಸಿಐ, ಐಎಸ್ಎ, ನೀಲ್ಸನ್ ಸಮೀಕ್ಷೆ
Team Udayavani, Dec 5, 2020, 8:02 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳೇ ಅತ್ಯಂತ ವಿಶ್ವಾಸಾರ್ಹ. ಎಸ್ಸೆಮ್ಮೆಸ್ ಜಾಹೀರಾತುಗಳ ಮೇಲೆ ನಮಗೆ ನಂಬಿಕೆಯಿಲ್ಲ.’
ಇದು ದೇಶದ ಗ್ರಾಹಕರು ಜಾಹೀರಾತುಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ. ಜನರು ಯಾವ ಮಾಧ್ಯಮ ದಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ಹೆಚ್ಚು ನಂಬುತ್ತಾರೆ ಎಂಬ ಕುರಿತು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ(ಎಎಸ್ಸಿಐ), ಭಾರತೀಯ ಜಾಹೀ ರಾತುದಾರರ ಸೊಸೈಟಿ (ಐಎಸ್ಎ) ಮತ್ತು ನೀಲ್ಸನ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.
ಶೇ.86ರಷ್ಟು ಗ್ರಾಹಕರು “ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳೇ ವಿಶ್ವಾಸಾರ್ಹವಾದದ್ದು’ ಎಂದು ಹೇಳಿದ್ದಾರೆ. ಅದರ ಅನಂತರ ಟಿವಿ ಮತ್ತು ರೇಡಿಯೋ ಜಾಹೀರಾ ತುಗಳನ್ನು ನಂಬುತ್ತೇವೆ. ಟೆಕ್ಸ್ಟ್ ಮತ್ತು ಎಸ್ಸೆಮ್ಮೆಸ್ಗಳ ಮೂಲಕ ಬರುವ ಜಾಹೀರಾತುಗಳು ಹೆಚ್ಚು ನಂಬಲರ್ಹವಾಗಿಲ್ಲ ಎಂದು ಗ್ರಾಹಕರು ಹೇಳಿದ್ದಾರೆ.
ಇದೇ ವೇಳೆ, ಶೈಕ್ಷಣಿಕ ಸಂಸ್ಥೆಗಳ ಕುರಿತ ಜಾಹೀರಾತುಗಳ ಮೇಲೆ ಹೆಚ್ಚಿನ ಮಟ್ಟದ ನಂಬಿಕೆಯಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಮಾರ್ಜಕಗಳು, ಸೊಳ್ಳೆ ನಿವಾರಕ ಸೇರಿದಂತೆ ಗೃಹಬಳಕೆ ಉತ್ಪನ್ನಗಳು ಕೂಡ ಹೆಚ್ಚು ನಂಬಿಕೆಗೆ ಅರ್ಹವಾಗಿವೆ. ಶೇ.70ರಷ್ಟು ಗ್ರಾಹಕರು ಸೆಲೆಬ್ರಿಟಿಗಳು ನೀಡುವ ಜಾಹೀರಾತನ್ನು ನಂಬುವುದಾಗಿ ಹೇಳಿದ್ದಾರೆ.
ಹೆಚ್ಚು ವಿಶ್ವಾಸಾರ್ಹ ಜಾಹೀರಾತು ಮಾಧ್ಯಮ
ಪತ್ರಿಕೆಗಳು 86%
ಟಿವಿ 83%
ರೇಡಿಯೋ 83%
ಟೆಕ್ಸ್ಟ್/ಎಸ್ಸೆಮ್ಮೆಸ್- 52%
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ
ಪ್ರತಿಭಟನೆ ಅಂತ್ಯಗೊಳಿಸಿ, ಕೂಡಲೇ ಸ್ಥಳ ಬಿಟ್ಟು ಹೊರಡಿ: ರೈತರಿಗೆ ಉತ್ತರ ಪ್ರದೇಶ ಸರ್ಕಾರ
ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?
ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್