ಪಡಿತರ ಕೇಂದ್ರದಲ್ಲಿ ಮೋದಿ ಚಿತ್ರ ಯಾಕಿಲ್ಲ? ಜಿಲ್ಲಾಧಿಕಾರಿಗೆ ಸಚಿವೆ ನಿರ್ಮಲಾ ತರಾಟೆ
ತೆಲಂಗಾಣದಲ್ಲಿ ಶುರುವಾಯ್ತು ವಾಗ್ಯುದ್ಧ
Team Udayavani, Sep 3, 2022, 9:00 PM IST
ಕಮರೆಡ್ಡಿ (ತೆಲಂಗಾಣ): ತೆಲಂಗಾಣದ ಕಮರೆಡ್ಡಿ ಜಿಲ್ಲೆಯಲ್ಲಿ ಶುಕ್ರವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಿಲ್ಲಾಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಬಿಜೆಪಿ ಲೋಕಸಭಾ ಪ್ರವಾಸ ಯೋಜನೆ ಅಂಗವಾಗಿ ನಿರ್ಮಲಾ ಅವರು ಝಹೀರಾಬಾದ್ ಕ್ಷೇತ್ರಕ್ಕೆ ತೆರಳಿದ್ದರು. ಈ ವೇಳೆ ಬಿಕೂìರ್ ಎಂಬ ಮಂಡಲ ಕೇಂದ್ರದ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಕೂಡ ಇದ್ದರು. ಈ ವೇಳೆ ಜನರಿಗೆ 1 ರೂ.ನಲ್ಲಿ ನೀಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲೆಷ್ಟು ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಲು ಪಾಟೀಲ್ ತಡವರಿಸಿದಾಗ, ಇನ್ನರ್ಧ ಗಂಟೆಯೊಳಗೆ ಸರಿಯಾದ ಉತ್ತರ ನೀಡಬೇಕು ಎಂದು ತಾಕೀತು ಮಾಡಿದರು.
ಕೂಡಲೇ ಅವರ ಗಮನಕ್ಕೆ ಪಡಿತರ ಅಂಗಡಿಗಳಲ್ಲಿ ಮೋದಿ ಚಿತ್ರವಿಲ್ಲದಿರುವುದು ಕಂಡುಬಂತು. ಯಾಕೆ ಹೀಗೆ? ಮಾರುಕಟ್ಟೆಯಲ್ಲಿ 35 ರೂ. ಬೆಲೆಯಿರುವ 1 ಕೆಜಿ ಅಕ್ಕಿಗೆ ಕೇಂದ್ರ ತನ್ನ ಪಾಲಾಗಿ 30 ರೂ. ನೀಡುತ್ತದೆ. ಸಾಗಣೆ ಸೇರಿ ಎಲ್ಲ ವೆಚ್ಚಗಳನ್ನು ಭರಿಸುತ್ತದೆ, ರಾಜ್ಯಗಳು 4 ರೂ. ನೀಡುತ್ತವೆ. 1 ರೂ. ಅನ್ನು ಮಾತ್ರ ಜನರಿಂದ ಪಡೆದುಕೊಳ್ಳಲಾಗುತ್ತದೆ. ಇಷ್ಟಾಗಿಯೂ ಇಲ್ಲಿ ಮೋದಿ ಚಿತ್ರ ಯಾಕಿಲ್ಲ? ಎಂದು ಜಿಲ್ಲಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮುಂದಿನ ಬಾರಿ ಮತ್ತೆ ಬರುತ್ತೇನೆ. ಆಗ ಎಲ್ಲವನ್ನೂ ಸರಿಪಡಿಸಿರಬೇಕು ಎಂದು ಆದೇಶಿಸಿದರು.
ಇದಕ್ಕೆ ತಿರುಗೇಟು ನೀಡಿರುವ ಆಡಳಿತಾರೂಢ ಟಿಆರ್ಎಸ್ ಕಾರ್ಯಕರ್ತರು, ಎಲ್ಪಿಜಿ ಸಿಲಿಂಡರ್ಗಳ ಮೇಲೆ ಮೋದಿ ಫೋಟೋ ಅಂಟಿಸಿದ್ದಾರೆ. ಜತೆಗೆ, ಸಿಲಿಂಡರ್ನ ದರ 1,105 ರೂ. ಎಂದೂ ಬರೆದಿದ್ದಾರೆ. “2014ರಲ್ಲಿ ಮೋದಿ ಅವರು ಪ್ರಧಾನಿ ಹುದ್ದೆಗೆ ಏರುವಾಗ ಸಿಲಿಂಡರ್ ದರ ಕೇವಲ 410 ರೂ. ಇತ್ತು. ನಿರ್ಮಲಾ ಅವರೇ, ಮೋದಿ ಫೋಟೋ ಇಲ್ಲಿದೆ ನೋಡಿ’ ಎಂದೂ ಟಿಆರ್ಎಸ್ ನಾಯಕರು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
MUST WATCH
ಹೊಸ ಸೇರ್ಪಡೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?