ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಗೆದ್ದ ನಿತೀಶ್‌


Team Udayavani, Jul 29, 2017, 9:45 AM IST

Nitish-Kumar-28-7.jpg

ಪಟ್ನಾ: ರಾಜೀನಾಮೆ ಹೈಡ್ರಾಮಾ ಬಳಿಕ ಮತ್ತೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ನಿತೀಶ್‌ ಕುಮಾರ್‌ ಮತ್ತೂಂದು ‘ಅಗ್ನಿಪರೀಕ್ಷೆ’ ಯಲ್ಲಿಯೂ 131 ವಿಶ್ವಾಸ ಮತಗಳನ್ನು ಪಡೆದು ಸರಕಾರ ಉಳಿಸಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ನಡೆದ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿತೀಶ್‌ ಕುಮಾರ್‌ ಅವರನ್ನು 131 ಸದಸ್ಯರು ಬೆಂಬಲಿಸಿದರೆ, 108 ಸದಸ್ಯರು ವಿರೋಧ ಪಕ್ಷದ ವಾದಕ್ಕೆ ಬೆಂಬಲವಾಗಿ ನಿಂತರು. ನಾಲ್ಕು ಸದಸ್ಯರು ಮತವನ್ನೇ ಚಲಾಯಿಸಲಿಲ್ಲ. ಪರಿಣಾಮ ಒಟ್ಟು ಮತಗಳ ಸಂಖ್ಯೆ 239ಕ್ಕೆ ಇಳಿದಿತ್ತು. ಅಷ್ಟಕ್ಕೂ ವಿಶ್ವಾಸಮತಕ್ಕೆ ಅಗತ್ಯವಿದ್ದ ಸಂಖ್ಯಾಬಲ 120 ಆಗಿತ್ತು. ಇದಕ್ಕಿಂತಲೂ 11 ಮತಗಳನ್ನು ಜಾಸ್ತಿಯೇ ಪಡೆದುಕೊಂಡಿದ್ದು, ಅಡ್ಡಮತದಾನ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಎನ್‌ಡಿಎ ಹಾಗೂ ಜೆಡಿಯು ಮೈತ್ರಿಯ ಪರಿಣಾಮ ಬಿಹಾರದಲ್ಲಿ ಸಿಎಂ ರಾಜೀನಾಮೆ, ಮತ್ತೆ ಪ್ರಮಾಣ ವಚನ, ವಿಶ್ವಾಸಮತ ಪ್ರಹಸನಗಳೆಲ್ಲವೂ ಬಹಳ ಕಡಿಮೆ ಅವಧಿಯಲ್ಲಿ ನಡೆದಿದ್ದು, ಇದಕ್ಕಾಗಿಯೇ ವಿಶೇಷ ಅಧಿವೇಶನವೂ ನಡೆದುಹೋಯಿತು.

ಧ್ವನಿಮತ 2 ಬಾರಿ ವಿಫ‌ಲ: ಸ್ಪೀಕರ್‌ ವಿಶ್ವಾಸ ಸಾಬೀತುಪಡಿಸಲು ನಡೆಸಿದ ಧ್ವನಿಮತ ಯತ್ನ ಪ್ರತಿಪಕ್ಷಗಳು ಮಾಡಿದ ಗದ್ದಲದ ಪರಿಣಾಮ 2 ಬಾರಿ ವಿಫ‌ಲವಾಯಿತು. ಇದಾದ ನಂತರ ಆರ್‌ಜೆಡಿ ಹಿರಿಯ ಶಾಸಕ ಅಬ್ದುಲ್‌ ಸಿದ್ದಿಕಿ ಅವರು ಗುಪ್ತ ಮತದಾನಕ್ಕೆ ಆಗ್ರಹಿಸಿದರು. ಆದರೆ ಸ್ಪೀಕರ್‌ ಇದನ್ನು ತಿರಸ್ಕರಿಸಿದರು.

131 ಮತ ಹೇಗೆ?: ಒಟ್ಟಾರೆ ಬಲದ ಶೇ. 50ಕ್ಕಿಂತ ಜಾಸ್ತಿ ಮತ ಗಳಿಸಿರುವ ನಿತೀಶ್‌ರನ್ನು ಜೆಡಿಯು 70, ಬಿಜೆಪಿಯ 52, 1 ಎಚ್‌ಎಎಂ, 2 ರಾಷ್ಟ್ರೀಯ ಲೋಕ ಸಮತಾ ಪಕ್ಷ, 2 ಎಲ್‌ಜೆಪಿ, 4 ಪಕ್ಷೇತರರು ಬೆಂಬಲಿಸಿದ್ದಾರೆ.

 

ಪಾಕ್‌ನಲ್ಲಿ ಪಟಾಕಿ ಸಿಡಿಸಿದ್ರಾ?: ಶಿವಸೇನೆ ಟಾಂಗ್‌
‘ನಿತೀಶ್‌ ಕುಮಾರ್‌ ಗೆದ್ದಿದ್ದಾರೆ. ಪಾಕಿಸ್ಥಾನದಲ್ಲಿ ಪಟಾಕಿ ಸಿಡಿಸಿದ್ದೀರೋ…?’ ಹೀಗೆಂದು ಕೇಳುವ ಮೂಲಕ ಶಿವಸೇನೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರನ್ನು ಲೇವಡಿ ಮಾಡಿದೆ. ಅದಕ್ಕೂ ಕಾರಣವಿದೆ. “ನಿತೀಶ್‌ ಅವರೊಂದಿಗೆ ಮೈತ್ರಿ ಸಾಧ್ಯವಾಗಿ, ಗೆಲುವು ಸಾಧಿಸಿದರೆ ಪಾಕಿಸ್ಥಾನದಲ್ಲೂ ಪಟಾಕಿ ಸಿಡಿಸಲಾಗುತ್ತದೆ’ ಎಂದು ಚುನಾವಣೆ ವೇಳೆ ಅಮಿತ್‌ ಶಾ ಹೇಳಿಕೆ ನೀಡಿದ್ದರು. 

ಜನ ಸೇವೆ ಮಾಡಲಿದ್ದೇನೆಯೇ ಹೊರತು ಒಂದು ಕುಟುಂಬದ ಸೇವೆಯನ್ನಲ್ಲ. ಜಾತ್ಯತೀತದ ಸೋಗಿನಲ್ಲಿ ಇರುವವರ ಜತೆ ಇರಲು ಖಂಡಿತಾ ಬಯಸುವುದಿಲ್ಲ. ಜನ ನೀಡಿದ ತೀರ್ಪು ದೊಡ್ಡದು. 
– ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

243 : ಒಟ್ಟು ಸದಸ್ಯಬಲ
4 : ಮತಚಲಾಯಿಸದ ಸದಸ್ಯರು
239 : ಮತಚಲಾಯಿಸಿದ ಸದಸ್ಯರು
131 : ಸದಸ್ಯರಿಂದ ವಿಶ್ವಾಸ
108 : ಸದಸ್ಯರಿಂದ ಅವಿಶ್ವಾಸ
120 : ಅಗತ್ಯವಿದ್ದ ಸಂಖ್ಯಾಬಲ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.